Publish Date: Mon, 08 Aug 2022 (20:07 IST)
Updated Date: Mon, 08 Aug 2022 (20:10 IST)
ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟದ ಅರಣ್ಯ ಪ್ರದೇಶದಿಂದ ತೋಟದ ಮನೆಗೆ ಬಾರಿ ಗಾತ್ರದ ಹೆಬ್ಬಾವುವೊಂದು ಬಂದಿದ್ದು, ಉರಗ ತಜ್ಞ ಅದನ್ನು ರಕ್ಷಣೆ ಮಾಡಿದ್ದಾರೆ. ಯಳಂದೂರು ತಾಲೂಕಿನ ಮುರಟಿ ಪಾಳ್ಯ ಗ್ರಾಮದ ಹೊರ ವಲಯದಲ್ಲಿ ಶ್ರೀನಿವಾಸ್ ಬಾಬು ಅವರ ತೋಟದ ಮನೆ ಬಳಿ ಹೆಬ್ಬಾವು ಬಂದಿತ್ತು. ನಂತರ ಉರಗ ತಜ್ಞರಿಗೆ ಮಾಹಿತಿ ನೀಡಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಟ್ಟ ಉರಗ ತಜ್ಞ ಸ್ನೇಕ್ ಮಹೇಶ್ ಹಾವನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ರವಾನೆ ಮಾಡಿದ್ದಾರೆ. ಇತ್ತೀಚೆಗೆ ಯಳಂದೂರು ತಾಲೂಕಿನ ಹಲವು ಗ್ರಾಮಗಳ ಹೊರವಲಯದಲ್ಲಿ ಹೆಚ್ಚು ಹೆಬ್ಬಾವುಗಳು ಕಂಡು ಬರುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.