ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದ್ದ ಮುಸ್ಕಾನ್ ಪ್ರಕರಣದ ಭೀಕರತೆ ಮಾಸುವ ಮುನ್ನವೇ, ಈಗ ಆಗ್ರಾದಿಂದ ಇಂತಹುದೇ ಬೆಚ್ಚಿಬೀಳಿಸುವ ಘಟನೆಯೊಂದು ವರದಿಯಾಗಿದೆ. ತನ್ನ ಪತಿಯನ್ನು ಕ್ರೂರವಾಗಿ ಕೊಲೆ ಮಾಡಿ, ಶವವನ್ನು ಮನೆಯ ಬಾತ್ ರೂಮ್ನ ಟೈಲ್ಸ್ ಅಡಿಯಲ್ಲಿ ಹೂತು ಹಾಕಿ, ಸ್ವತಃ ತಾನೇ ಪೊಲೀಸ್ ಠಾಣೆಗೆ ಹೋಗಿ ಪತಿ ಕಾಣೆಯಾಗಿದ್ದಾರೆ ಎಂದು ನಾಟಕವಾಡಿದ್ದ ಪತ್ನಿ ರೂಬಿ ಶರ್ಮಳ ಅಸಲಿ ಮುಖ ಈಗ ಬಯಲಾಗಿದೆ.ಆಗ್ರಾದ ನಿವಾಸಿಯಾದ ಸುರೇಂದರ್ ಶರ್ಮಾ ಕಳೆದ 45 ದಿನಗಳಿಂದ ನಾಪತ್ತೆಯಾಗಿದ್ದರು. ಪತಿ ನಾಪತ್ತೆಯಾದ ತಕ್ಷಣ ರೂಬಿ ಶರ್ಮಾ ತಾನೇ ಮುಂಚೂಣಿಗೆ ನಿಂತು ಪೊಲೀಸ್ ಠಾಣೆಯಲ್ಲಿ 'ಮಿಸ್ಸಿಂಗ್ ಡೈರಿ' ದಾಖಲಿಸಿದ್ದಳು.
ನಿಮ್ಮ ಮನೆಯಲ್ಲಿ ಸರಣಿ ಕಳ್ಳತನಗಳಾಗುತ್ತಿದ್ದರೆ ನೀವೇನು ಮಾಡುತ್ತೀರಿ? ಸಿಸಿಟಿವಿ ಹಾಕಿಸುತ್ತೀರಿ ಅಥವಾ ಪೊಲೀಸರಿಗೆ ದೂರು ನೀಡುತ್ತೀರಿ. ಆದರೆ ಇಂಡೋನೇಷ್ಯಾದಲ್ಲೊಬ್ಬ ಮನೆ ಮಾಲೀಕ ತನ್ನ ನೆರೆಹೊರೆಯವರೊಂದಿಗೆ ಸೇರಿ ಕಳ್ಳರಿಗೆ ಕಲಿಸಿದ ಪಾಠ ಈಗ ಜಗತ್ತಿನಾದ್ಯಂತ ವೈರಲ್ ಆಗಿದೆ. ಕಳ್ಳತನ ಮಾಡಲು ಬಂದ ನಾಲ್ವರು ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದು, ಅವರಿಗೆ ಕಾರ್ಟೂನ್ ಪಾತ್ರಗಳಾದ 'ಟೆಲಿಟಬ್ಬೀಸ್' ವೇಷ ತೊಡಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ! ಇಂಡೋನೇಷ್ಯಾದ ಈ ನಿರ್ದಿಷ್ಟ ಮನೆಯಲ್ಲಿ ಸತತವಾಗಿ ಕಳ್ಳತನಗಳು ನಡೆಯುತ್ತಿದ್ದವು. ಇದರಿಂದ ತೀವ್ರ ಬೇಸತ್ತಿದ್ದ ಮನೆ ಮಾಲೀಕ, ಕಳ್ಳರನ್ನು ಹೇಗಾದರೂ ಮಾಡಿ ಹಿಡಿಯಲೇಬೇಕೆಂದು ನೆರೆಹೊರೆಯವರನ್ನು ಒಟ್ಟುಗೂಡಿಸಿ ರಾತ್ರಿಯ ವೇಳೆ ರಹಸ್ಯ ಕಾರ್ಯಾಚರಣೆ ನಡೆಸಲು ಯೋಜನೆ ರೂಪಿಸಿದ್ದರು.
ಭಾರತೀಯ ಕ್ರಿಕೆಟ್ ತಂಡದ ಆಟಗಾರರ ನಡುವಿನ ಬಾಂಧವ್ಯ ಮತ್ತು ಕಿರಿಯ ಆಟಗಾರರನ್ನು ಬೆಳೆಸುವ ನಾಯಕತ್ವದ ಗುಣಕ್ಕೆ ಸಾಕ್ಷಿಯಾಗುವಂತಹ ಅತ್ಯಂತ ಹೃದಯಸ್ಪರ್ಶಿ ಘಟನೆಯೊಂದು ನೆಟ್ಸ್ ಅಭ್ಯಾಸದ ವೇಳೆ ನಡೆದಿದೆ. ನೆಟ್ಸ್ನಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಗದೆ ಒಬ್ಬಂಟಿಯಾಗಿ ಮೂಲೆ ನಿಂತಿದ್ದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ನೆರವಿಗೆ ಹಿರಿಯ ಆಟಗಾರ ಸಂಜು ಸ್ಯಾಮ್ಸನ್ ಧಾವಿಸಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ನಡುವೆ ಅತ್ಯಂತ ಕಿರಿಯ ವಯಸ್ಸಿನ ಪ್ರತಿಭೆಯಾಗಿರುವ ವೈಭವ್ ಸೂರ್ಯವಂಶಿ, ತರಬೇತಿ ಅವಧಿಯಲ್ಲಿ ತನಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗದಿದ್ದಾಗ ಸಹಜವಾಗಿಯೇ ನಿರಾಶೆಗೊಂಡು ನೆಟ್ಸ್ನ ಒಂದು ಮೂಲೆಯಲ್ಲಿ ಸದ್ದಿಲ್ಲದೆ ನಿಂತಿದ್ದರು.
ಉತ್ತರ ಪ್ರದೇಶದ ಅಯೋಧ್ಯೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ ಘಟನೆ ಮಾಸುವ ಮುನ್ನವೇ, ಈಗ ಉತ್ತರಾಖಂಡದ ಪ್ರಸಿದ್ಧ ಚಾರ್ ಧಾಮ್ಗಳಲ್ಲೊಂದಾದ ಜಗತ್ಪ್ರಸಿದ್ಧ ಬದರಿನಾಥ ದೇವಾಲಯದಲ್ಲೂ ದೇಣಿಗೆ ಕಳ್ಳತನದ ಗಂಭೀರ ಆರೋಪ ಕೇಳಿಬಂದಿದೆ. ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಸರಣಿ ರೂಪದಲ್ಲಿ ನಡೆಯುತ್ತಿರುವ ಇಂತಹ ಆರ್ಥಿಕ ವಂಚನೆಗಳು ಮತ್ತು ಕಳ್ಳತನದ ಪ್ರಕರಣಗಳು ದೇಶಾದ್ಯಂತ ಇರುವ ಕೋಟ್ಯಂತರ ಹಿಂದೂ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ.
ರಾಷ್ಟ್ರ ರಾಜಧಾನಿಯ ದೆಹಲಿ ರೈಲು ನಿಲ್ದಾಣದಲ್ಲಿ ಅತ್ಯಂತ ಆಘಾತಕಾರಿ ಮತ್ತು ಕ್ರೂರ ಘಟನೆಯೊಂದು ನಡೆದಿದೆ. ರೈಲು ನಿಲ್ದಾಣದ ಆವರಣದಲ್ಲೇ ಐದು ಜನ ತೃತೀಯಲಿಂಗಿಗಳು ಸೇರಿಕೊಂಡು ವ್ಯಕ್ತಿಯೊಬ್ಬನ ಮೇಲೆ ಅತ್ಯಂತ ಬರ್ಬರವಾಗಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪತಿಯನ್ನು ರಕ್ಷಿಸಲು ಧಾವಿಸಿದ ಆತನ ಪತ್ನಿ ಮತ್ತು ಅಪ್ರಾಪ್ತ ಮಗಳ ಮೇಲೂ ಅಮಾನವೀಯವಾಗಿ ದೈಹಿಕ ದೌರ್ಜನ್ಯ ಎಸಗಲಾಗಿದೆ. ಭಾರೀ ಜನದಟ್ಟಣೆ ಇರುವ ದೆಹಲಿ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ ಬಳಿ ಈ ಘಟನೆ ನಡೆದಿದೆ. ಸಂತ್ರಸ್ತ ವ್ಯಕ್ತಿ ತನ್ನ ಕುಟುಂಬದೊಂದಿಗೆ (ಪತ್ನಿ ಮತ್ತು ಮಗಳು) ಪ್ರಯಾಣಿಸಲು ನಿಲ್ದಾಣಕ್ಕೆ ಬಂದಿದ್ದಾಗ, ಐದು ಜನ ತೃತೀಯಲಿಂಗಿಗಳ ಗುಂಪು ಅವರ ಬಳಿ ಬಂದು ಹಣ ನೀಡುವಂತೆ ಒತ್ತಾಯಿಸಿದೆ.
ಬೆಂಗಳೂರು: ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ, ಇಂದು ಕರ್ನಾಟಕದಾದ್ಯಂತ ಮುಂಗಾರು ಮಳೆ ಚುರುಕಾಗಲಿದ್ದು, ಯಾವ ಜಿಲ್ಲೆಗಳಿಗೆ ಯಾವ ಅಲರ್ಟ್ ಘೋಷಿಸಲಾಗಿದೆ ಇಲ್ಲಿದೆ ವಿವರ. ಕರಾವಳಿ ಕರ್ನಾಟಕ - ರೆಡ್ ಅಲರ್ಟ್ಕರಾವಳಿ ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಜಾಗರೂಕತೆ ವಹಿಸಲು ಸೂಚಿಸಲಾಗಿದೆ. ಜಿಲ್ಲೆಗಳು: ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ. ಮಳೆಯ ಸಾಧ್ಯತೆ: 85% ಕ್ಕಿಂತ ಹೆಚ್ಚು (ಅತ್ಯಂತ ಭಾರಿ ಮಳೆ, ಕೆಲವು ಕಡೆ 204 mm ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ). ಜೊತೆಗೆ ಗಂಟೆಗೆ 30-40 ಕಿಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ.
ಶನಿವಾರದಂದು ಶನಿ ಮಹಾತ್ಮನ ದೇವಸ್ಥಾನಕ್ಕೆ ಭೇಟಿ ನೀಡುವುದು ಅತ್ಯಂತ ಶುಭ ಫಲಗಳನ್ನು ನೀಡುತ್ತದೆ. ಶಾಸ್ತ್ರಗಳು ಮತ್ತು ಜ್ಯೋತಿಷ್ಯದ ಪ್ರಕಾರ, ಶನಿವಾರದಂದು ಶನಿ ದೇವಸ್ಥಾನಕ್ಕೆ ಭೇಟಿ ನೀಡಲು ಎರಡು ಪ್ರಮುಖ ಮತ್ತು ಪವಿತ್ರವಾದ ಸಮಯಗಳಿವೆ: ಮುಂಜಾನೆಯ ಸಮಯ (ಸೂರ್ಯೋದಯದ ಅವಧಿ)ಬೆಳಗ್ಗೆ ಸೂರ್ಯೋದಯದ ಸಮಯದಲ್ಲಿ ಶನಿ ದೇವರನ್ನು ಆರಾಧಿಸುವುದು ಅತ್ಯಂತ ಶ್ರೇಷ್ಠ. ಮನಸ್ಸಿನಲ್ಲಿ ಶಿಸ್ತು ಮತ್ತು ಸಕಾರಾತ್ಮಕತೆಯನ್ನು ಬೆಳೆಸಿಕೊಳ್ಳಲು ಇದು ಅತ್ಯುತ್ತಮ ಸಮಯವಾಗಿದೆ. ವಾತಾವರಣ: ಅತ್ಯಂತ ಪ್ರಶಾಂತ, ಶುದ್ಧ ಮತ್ತು ಪವಿತ್ರ. ಕಾರಣ: ಶನಿ ದೇವರಿಗೆ ಕಠಿಣ ಪರಿಶ್ರಮ ಮತ್ತು ಶಿಸ್ತು ಎಂದರೆ ತುಂಬಾ ಇಷ್ಟ.
ಬೆಂಗಳೂರು: ಪಡೆದುಕೊಂಡ ಮೇಲೆ ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ ಎಂದು ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ದರ್ಶನ್ ಜೊತೆಗೆ ಆಪ್ತರಾಗಿದ್ದ ಆ ಒಬ್ಬ ನಟನೊಂದಿಗೆ ವೈಮನಸ್ಯವಾಗಿದೆ ಎಂಬ ಗುಸು ಗುಸು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಎರಡೂ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಈ ನಡುವೆ ವಿಜಯಲಕ್ಷ್ಮಿ ಇನ್ ಸ್ಟಾಗ್ರಾಂ ಸ್ಟೋರಿಯೊಂದು ಗಮನ ಸೆಳೆಯುತ್ತಿದೆ. ವಿಜಯಲಕ್ಷ್ಮಿ ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ಪತಿ, ಮಗನ ಬಗ್ಗೆ ಆಗಾಗ ಪೋಸ್ಟ್ ಹಂಚಿಕೊಳ್ಳುತ್ತಿರುತ್ತಾರೆ. ತಮಗೆ ನೋವಾದರೂ ಅದನ್ನು ಇನ್ ಸ್ಟಾಗ್ರಾಂ ಪೋಸ್ಟ್ ಮೂಲಕ ಸಂದೇಶ ಬರೆಯುವ ಮೂಲಕ ಹಂಚಿಕೊಳ್ಳುತ್ತಾರೆ.
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದಾಗಿ ಬಿಎಲ್ಒಗಳು ಬೀದಿಗಳಲ್ಲಿ ಎಸ್ಐಆರ್ ಅರ್ಜಿಗಳನ್ನು ಹಂಚುತ್ತಿದ್ದಾರೆ. ಈ ಮೂಲಕ ಬಾಂಗ್ಲಾ ಜನರನ್ನು ಮತದಾರರ ಪಟ್ಟಿಗೆ ಸೇರಿಸುವ ಷಡ್ಯಂತ್ರ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಭದ್ರತೆಯ ದೃಷ್ಟಿಯಿಂದ ಚುನಾವಣಾ ಆಯೋಗ ಎಸ್ಐಆರ್ ಮಾಡುತ್ತಿದೆ. ಇದು ಕೇಂದ್ರ ಸರ್ಕಾರದ ಉದ್ದೇಶ ಕೂಡ ಹೌದು. ಆದರೆ ಕಾಂಗ್ರೆಸ್ ಸರ್ಕಾರ ಬಾಂಗ್ಲಾ ಜನರ ಪಾಲಿಗೆ ಸ್ವರ್ಗವಾಗಿದೆ. ಈ ಮೊದಲು ಕೋಗಿಲು ಕ್ರಾಸ್ನಲ್ಲಿ ಬಾಂಗ್ಲಾ ಜನರಿಗೆ ಮನೆ ನಿರ್ಮಿಸಿಕೊಡಲು ಮುಂದಾಗಿದ್ದು, ಅದರ ವಿರುದ್ಧ ಬಿಜೆಪಿ ಹೋರಾಟ ನಡೆಸಿದ್ದಕ್ಕೆ ಅದನ್ನು ಕೈ ಬಿಟ್ಟಿದ್ದರು.
ಜಾಮೀನಿನ ಕಲಹ ಎಲ್ಲಿಯವರೆಗೆ ತಲುಪುತ್ತದೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ನೋಡಿದ್ರೆ ನೀವು ನಿಜಕ್ಕೂ ಶಾಕ್ ಆಗುತ್ತೀರಿ. ಭೂಮಿ ವಿವಾದದ ಹಿನ್ನೆಲೆಯಲ್ಲಿ ಉಂಟಾದ ಭೀಕರ ಘರ್ಷಣೆಯಲ್ಲಿ ಯುವಕನೊಬ್ಬನ ಮೇಲೆ ಮಹೀಂದ್ರಾ ಸ್ಕಾರ್ಪಿಯೋ ವಾಹನವನ್ನು ಹತ್ತಿಸಿ ಕೊಲ್ಲಲು ಯತ್ನಿಸಿದ ಅತ್ಯಂತ ಆಘಾತಕಾರಿ ಘಟನೆ ಹರಿಯಾಣದ ಫರಿದಾಬಾದ್ನ ಧೌಜ್ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿದೆ. ಫರಿದಾಬಾದ್ನ ಸಿರೋಹಿ ಮತ್ತು ಧೌಜ್ ಗ್ರಾಮಗಳ ಎರಡು ಗುಂಪುಗಳ ನಡುವೆ ಜಾಗದ ವಿಚಾರವಾಗಿ ದೀರ್ಘಕಾಲದ ವಿವಾದವಿತ್ತು. ಈ ಜಗಳ ವಿಕೋಪಕ್ಕೆ ತಿರುಗಿ ಎರಡೂ ಕಡೆಯವರು ದೊಣ್ಣೆ, ಕಲ್ಲುಗಳಿಂದ ಪರಸ್ಪರ ದಾಳಿ ನಡೆಸತೊಡಗಿದ್ದಾರೆ.
ಬೆಂಗಳೂರು: ಒಂದೆಡೆ ಸಾಕ್ಷಿಗೆ ಬೆದರಿಕೆ ಹಾಕಿ ಅಭಿಮಾನಿಗಳಿಂದ ಹುಚ್ಚಾಟವಾದರೆ ಇನ್ನೊಂದೆಡೆ ಕೋರ್ಟ್ ಕೂಡಾ ನಟ ದರ್ಶನ್ ಗೆ ಶಾಕ್ ಕೊಟ್ಟಿದೆ. ರೇಣುಕಾಸ್ವಾಮಿ ಮರ್ಡರ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಗೆ ಯಾಕೋ ಸದ್ಯಕ್ಕೆ ಬಿಡುಗಡೆ ಭಾಗ್ಯವಿದ್ದಂತೆ ತೋರುತ್ತಿಲ್ಲ. ಸುಪ್ರೀಂಕೋರ್ಟ್ ಈ ಹಿಂದೆ ಸಾಕ್ಷಿಗಳ ವಿಚಾರಣೆ ಆಗುವವರೆಗೆ ಜಾಮೀನು ಇಲ್ಲ ಎಂದಿತ್ತು. ಸಾಕ್ಷಿಗಳ ವಿಚಾರಣೆಗೆ ಒಂದು ವರ್ಷದ ಕಾಲಾವಧಿಯನ್ನೂ ನೀಡಿತ್ತು. ಹೀಗಾಗಿ ಒಂದು ವರ್ಷದವರೆಗೆ ದರ್ಶನ್ ಗೆ ಜಾಮೀನು ಸಿಗಲ್ಲ ಎನ್ನಲಾಗಿತ್ತು.
ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿನ 27 ವಾರ್ಡ್ಗಳಲ್ಲಿ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ನಡೆಸುತ್ತಿರುವ ಸಮಾನಾಂತರ ಎಸ್ಐಆರ್ ಅನ್ನು ತಕ್ಷಣ ನಿಲ್ಲಿಸಬೇಕು ಎಂದು ಕೇಂದ್ರ ಸಚಿವೆ ಕು.ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೇಂದ್ರ ಚುನಾವಣಾ ಆಯೋಗ ರಾಜ್ಯದಾದ್ಯಂತ ಎಸ್ಐಆರ್ ನಡೆಸುತ್ತಿದೆ. ಇದರ ನಡುವೆ ಜಿಬಿಎ ವಾರ್ಡ್ಗಳಲ್ಲಿ ರಾಜ್ಯ ಚುನಾವಣಾ ಆಯೋಗ ಮತ್ತೊಂದು ಎಸ್ಐಆರ್ ನಡೆಸುತ್ತಿದೆ. ಇದು ಮತದಾರರನ್ನು ಗೊಂದಲಕ್ಕೀಡು ಮಾಡಿದೆ ಎಂದು ಹೇಳಿದರು.
ಪುಣೆ: ಉದ್ಯಮಿ ಕೇತನ್ ಅಗರ್ವಾಲ್ ಪ್ರಕರಣದಲ್ಲಿ ಬಂಧಿತರಾಗಿರುವ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಅಗರ್ವಾಲ್ ಗೆ ಹಳ್ಳ ತೋಡಲು ಪೊಲೀಸರು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಉದ್ಯಮಿ ಕೇತನ್ ಅಗರ್ವಾಲ್ ರನ್ನು ಜೂನ 18 ರಂದು ಲೋಹಗಢ್ ಕೋಟೆಗೆ ಕರೆದೊಯ್ದಿದ್ದ ಭಾವೀ ಪತ್ನಿ ಸಿಯಾ ಗೋಯಲ್ ತನ್ನ ಪ್ರಿಯಕರನ ಸಹಾಯದಿಂದ ಕಂದಕಕ್ಕೆ ತಳ್ಳಿ ಕೊಲೆ ಮಾಡಿದ್ದಳು. ಈ ಸಂಬಂಧ ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಆದರೆ ಕೋರ್ಟ್ ನಲ್ಲಿ ಇಬ್ಬರ ನಡುವೆ ಸಂಬಂಧವಿತ್ತು ಎಂಬುದನ್ನು ಸಾಬೀತುಪಡಿಸುವ ಸವಾಲು ಪೊಲೀಸರಿಗಿದೆ. ಅವರ ಕುಟುಂಬಸ್ಥರು ಇದನ್ನು ಒಪ್ಪುತ್ತಿಲ್ಲ.
ತನಗೆ ಅನ್ನ ಹಾಕುವ ಮಹಿಳೆಗೆ ಪ್ರತೀ ನಿತ್ಯ ಆಹಾರ ಸೇವಿಸಿದ ಬಳಿಕ ಪಾತ್ರೆಯನ್ನು ಮರೆಯದೇ ತಂದು ಕೊಡುವ ಈ ನಾಯಿ ನೆಟ್ಟಿಗರಿಗೆ ಸೋಜಿಗವುಂಟು ಮಾಡಿದೆ. ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ ಎನ್ನಲಾಗುತ್ತದೆ. ಆ ಮಾತನ್ನು ಈ ನಾಯಿ ನಿಜ ಮಾಡಿದೆ. ನಿಜವಾದ ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ಕಲಿಯಬೇಕೆಂದರೆ, ಮನುಷ್ಯರ ಸಹವಾಸ ಬಿಟ್ಟು ಈ ಮೂಕ ಜೀವಿಯನ್ನು ನೋಡಬೇಕು. ದಿನಾಲೂ ತನಗೆ ಅನ್ನ ಹಾಕುವ ಮಹಿಳೆಗೆ, ತಿಂದ ನಂತರ ಊಟದ ಡಬ್ಬಿಯನ್ನು ಅಷ್ಟೇ ಜಾಗರೂಕತೆಯಿಂದ ಮರಳಿ ತಂದುಕೊಡುವ ಬೀದಿ ನಾಯಿ 'ಮಕ್ತು'ವಿನ ಕಥೆ ಹೃದಯಸ್ಪರ್ಶಿಯಾಗಿದೆ.
ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಕೋಖ್ರಾಜ್ನಲ್ಲಿರುವ ಸಿಹೋರಿ ಟೋಲ್ ಪ್ಲಾಜಾದಲ್ಲಿ ಜೂನ್ 26ರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತ ಮತ್ತು ಅಗ್ನಿ ಅವಘಡದ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಣ ಸೃಷ್ಟಿಸಿವೆ. ನಿಯಂತ್ರಣ ತಪ್ಪಿದ ಎಲ್ಪಿಜಿ ಟ್ಯಾಂಕರ್ ಪ್ಲಾಜಾಕ್ಕೆ ನುಗ್ಗಿದ ಪರಿಣಾಮ ಭಾರಿ ಸ್ಫೋಟ ಸಂಭವಿಸಿದ್ದು, ಸದ್ಯ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಪ್ರಯಾಗ್ರಾಜ್-ಕಾನ್ಪುರ ಹೆದ್ದಾರಿಯಲ್ಲಿ ದುರಂತ ನಡೆದಿದೆಕಾನ್ಪುರದಿಂದ ಸುಮಾರು 18 ಟನ್ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ ಹೊತ್ತು ಸಾಗುತ್ತಿದ್ದ ಟ್ಯಾಂಕರ್, ಮುಂಜಾನೆ 7 ಗಂಟೆಯ ಸುಮಾರಿಗೆ ಸಿಹೋರಿ ಟೋಲ್ ಪ್ಲಾಜಾ ತಲುಪಿದ್ದಾಗ ಈ ಅವಘಡ ಸಂಭವಿಸಿದೆ.
ಉಗುರು ಕಡಿಯುವುದು ಅನೇಕರಲ್ಲಿ ಕಂಡುಬರುವ ಒಂದು ಸಾಮಾನ್ಯ ಅಭ್ಯಾಸ. ಕೆಲವರು ಒತ್ತಡ, ಆತಂಕ ಅಥವಾ ಬೇಸರವಾದಾಗ ತಮಗೇ ತಿಳಿಯದಂತೆ ಉಗುರು ಕಡಿಯಲು ಪ್ರಾರಂಭಿಸುತ್ತಾರೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು 'ಒನಿಕೋಫೇಜಿಯಾ' ಎಂದು ಕರೆಯಲಾಗುತ್ತದೆ. ಈ ಅಭ್ಯಾಸವು ಕೇವಲ ಉಗುರುಗಳ ಅಂದವನ್ನು ಕೆಡಿಸುವುದಲ್ಲದೆ, ಉಗುರುಗಳ ನಡುವೆ ಇರುವ ಬ್ಯಾಕ್ಟೀರಿಯಾಗಳು ಸುಲಭವಾಗಿ ಹೊಟ್ಟೆ ಸೇರಿ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ನಿಮಗೂ ಅಥವಾ ನಿಮ್ಮ ಮನೆಯಲ್ಲಿ ಯಾರಿಗಾದರೂ ಈ ಅಭ್ಯಾಸವಿದ್ದರೆ, ಅದನ್ನು ಸುಲಭವಾಗಿ ಹೇಗೆ ನಿಲ್ಲಿಸಬಹುದು ಎಂಬುದಕ್ಕೆ ಕೆಲವು ಪ್ರಮುಖ ಸಲಹೆಗಳು ಇಲ್ಲಿವೆ:
ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ಮತಪಟ್ಟಿ ಪರಿಷ್ಕರಣೆಗೆ ಸೂಚಿಸಿದರೆ ಇತ್ತ ರಾಜ್ಯದಲ್ಲಿ ಅಕ್ರಮವಾಗಿ ಟೆಂಟ್ ಹಾಕಿಕೊಂಡು ಪ್ರತ್ಯೇಕವಾಗಿ ಮತಪಟ್ಟಿ ಪರಿಷ್ಕರಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಫೋಟೋ, ವಿಡಿಯೋ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಆದೇಶ ನೀಡಿದೆ. ಅದರಂತೆ ಬಿಎಲ್ಒಗಳು ಮನೆ ಮನೆಗೆ ತೆರಳಿ ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಡೆಸಬೇಕು. ಆದರೆ ಇಲ್ಲಿ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಅಕ್ರಮವಾಗಿ ಮತದಾರರ ಪಟ್ಟಿಗೆ ಸೇರಿಸುವ ಕಾರ್ಯಕ್ರಮ ನಡೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಬೆಂಗಳೂರು: ರಾಮನಗರದಲ್ಲಿ ಟೆಂಟ್ ಹಾಕಿ ಎಸ್ಐಆರ್ ನಡೆಸಲಾಗುತ್ತಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಮಾಡಿದ ಬೆನ್ನಲ್ಲೇ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಜಯನಗರದಲ್ಲಿ ಮಸೀದಿಯೊಳಗೆ ಎಸ್ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕೇಂದ್ರ ಚುನಾವಣೆ ಆಯೋಗ ಮನೆ ಮನೆಗೆ ತೆರಳಿ ಎಸ್ಐಆರ್ ಪ್ರಕ್ರಿಯೆ ನಡೆಸುವಂತೆ ಹೇಳಿದೆ. ಆದರೆ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕಿನಿಂದ ಕರ್ನಾಟಕದಲ್ಲಿ ಬಿಎಲ್ಒಗಳು ಮನೆ ಮನೆಗೆ ತೆರಳುತ್ತಿಲ್ಲ. ಬದಲಾಗಿ ಜಯನಗರದಲ್ಲಿ ಮಸೀದಿಯೊಂದರಲ್ಲೂ ಎಸ್ಐಆರ್ ನಡೆಸಲಾಗುತ್ತಿದೆ. ಇದರಿಂದ ಹಿಂದೂಗಳಿಗೆ ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ.
ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ತನ್ನ ಕೆಲಸಕ್ಕೆ ರಾಜೀನಾಮೆ ಪತ್ರ ಬರೆದ ಶೈಲಿ ನೋಡಿದರೆ ಹೀಗೂ ಬರೀತಾರಾ ಎಂದು ನಿಮಗೆ ನಗು ಬರಬಹುದು. ಇಂತಹ ಕೆಲವು ಘಟನೆಗಳನ್ನು ನಾವು ಆಗಾಗ ನೋಡುತ್ತೇವೆ. ಒಂದೇ ಲೈನ್ ನಲ್ಲಿ ರಾಜೀನಾಮೆ ಪತ್ರ ಬರೆಯುವುದು ಅಥವಾ ವಿಚಿತ್ರ ಕಾರಣಗಳನ್ನು ನೀಡುವುದು ಇತ್ಯಾದಿ. ಮೊನ್ನೆಯಷ್ಟೇ ವಿದ್ಯಾರ್ಥಿಯೊಬ್ಬ ಬರೆದ ರಜಾ ಚೀಟಿ ಕೂಡಾ ಇದೇ ರೀತಿ ವೈರಲ್ ಆಗಿತ್ತು. ಇದೀಗ ಮಹಿಳೆಯೊಬ್ಬರ ರಾಜೀನಾಮೆ ಪತ್ರ ಎಲ್ಲರ ಗಮನ ಸೆಳೆಯುತ್ತಿದೆ. ಮದುವೆ ಬಳಿಕ ಮಹಿಳೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರದಲ್ಲಿ ಅವರು ಬರೆದ ಕಾರಣ ವಿಚಿತ್ರ ಮತ್ತು ತಮಾಷೆಯಾಗಿದೆ.
ಫೋಟೋಗೆ ಪೋಸ್ ಕೊಡುತ್ತಾ ನಿಂತಿದ್ದ ಯುವತಿಯ ಸೆರಗು ಜಾರಿತ್ತು. ಇದನ್ನು ನೋಡಿ ಯುವಕ ಮಾಡಿದ ಕೆಲಸಕ್ಕೆ ನೆಟ್ಟಿಗರು ಶಾಕ್ ಆಗಿದ್ದಾರೆ. ಹುಡುಗ ಅಂದ್ರೆ ಹೀಗಿರಬೇಕು ಎಂದಿದ್ದಾರೆ. ಏನೇ ಫಂಕ್ಷನ್ ಇರಲಿ ಹುಡುಗಿಯರಿಗೆ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಸ್ಟೈಲಿಶ್ ಆಗಿ ಫೋಟೋಗೆ ಪೋಸ್ ಕೊಡುವುದು ಎಂದರೆ ತುಂಬಾ ಇಷ್ಟ. ಅದರಂತೆ ಈ ಹುಡುಗಿಯೂ ತನ್ನ ಹುಡುಗನ ಕೈಯಲ್ಲಿ ಫೋಟೋ ತೆಗೆಸಿಕೊಳ್ಳುತ್ತಿದ್ದಳು. ಫೋಟೋ ಗ್ಲಾಮರಸ್ ಆಗಿ ಬರಲಿ ಎಂದು ಯುವತಿ ಕೊಂಚ ಸೆರಗು ಜಾರಿದಂತೆ ಉಟ್ಟುಕೊಂಡಿದ್ದಳು. ಆದರೆ ಫೋಟೋ ತೆಗೆಯುವಾಗ ಅದು ಸ್ವಲ್ಪ ಹೆಚ್ಚೇ ಜಾರಿಕೊಂಡಿತ್ತು. ಇದನ್ನು ನೋಡಿ ಫೋಟೋ ತೆಗೆಯುತ್ತಿದ್ದ ಯುವಕನಿಗೆ ಇಷ್ಟವಾಗಲಿಲ್ಲ.
ಯುವಕರ ಗುಂಪು ಡಿಜೆಗೆ ಭರ್ಜರಿ ಸ್ಟೆಪ್ಸ್ ಹಾಕುತ್ತಿದ್ದರೆ ಅದನ್ನು ನೋಡಿ ರೊಚ್ಚಿಗೆದ್ದ ನಾಯಿಯೊಂದು ಏನು ಮಾಡ್ತು ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿರುವ ಈ ಫನ್ನಿ ವಿಡಿಯೋ ನೋಡಿ. ನಾಯಿಗಳು ಹೆಚ್ಚಾಗಿ ಮನುಷ್ಯರ ಜೊತೆ ಒಡನಾಡಿಕೊಂಡಿರಲು ಇಷ್ಟಪಡುತ್ತವೆ. ಬುದ್ಧಿವಂತ ಪ್ರಾಣಿಗಳಲ್ಲಿ ನಾಯಿಗಳೂ ಒಂದು. ಅವುಗಳು ಮನುಷ್ಯರ ಚಲನವಲನಗಳನ್ನು ಬೇಗನೇ ಅನುಕರಿಸುತ್ತವೆ. ಇಲ್ಲಿ ಆಗಿದ್ದೂ ಇದೆ. ಯಾವುದೋ ಕಾರ್ಯಕ್ರಮವೊಂದರಲ್ಲಿ ನಾಲ್ಕೈದು ಯುವಕರ ಗುಂಪು ಡಿಜೆ ಹಾಕಿಕೊಂಡು ಡ್ಯಾನ್ಸ್ ಮಾಡುತ್ತಿರುತ್ತಾರೆ. ಅಲ್ಲಿಯೇ ನಾಯಿಯೊಂದು ಓಡಾಡುತ್ತಿರುತ್ತದೆ.
ಬೆಂಗಳೂರು: ಮೊದಲ ಸಿನಿಮಾ ಸಿದ್ಧಾರ್ಥ ಬಿಡುಗಡೆಯಾದಾಗ ಹಲವರು ಅವರ ಲುಕ್ ನೋಡಿ ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದರು. ಆದರೆ ಅಂದಿನಿಂದ ವ್ಯತ್ಯಸ್ಥ ಸಿನಿಮಾಗಳನ್ನು ಮಾಡಿಕೊಂಡೇ ಬಂದ ವಿನಯ್ ಗ್ರಾಮಾಯಣ ಸಿನಿಮಾ ನೋಡಿ ಪ್ರೇಕ್ಷಕರ ಅಭಿಪ್ರಾಯವೇ ಬದಲಾಗುತ್ತಿದೆ. ಮೊದಲ ಸಿನಿಮಾ ನೋಡಿ ಕೋತಿ, ಚಿಂಪಾಂಜಿ ಎಂದೆಲ್ಲಾ ಅವರನ್ನು ಟ್ರೋಲ್ ಮಾಡಿ ಅವಮಾನ ಮಾಡಿದವರೂ ಇದ್ದಾರೆ. ತಾತನ ಹೆಸರಿನಿಂದ ಸಿನಿಮಾ ರಂಗಕ್ಕೆ ಬಂದಿದ್ದಾರೆ ಎಂದು ಕಾಲೆಳೆದಿದ್ದರು. ಆದರೆ ಇತ್ತೀಚೆಗೆ ವಿನಯ್ ರಾಜ್ ಕುಮಾರ್ ಆಯ್ಕೆ ಮಾಡುತ್ತಿರುವ ಸಿನಿಮಾಗಳು, ಅವರ ಅಭಿನಯದಲ್ಲಿ ಬಂದಿರುವ ಪಕ್ವತೆ ನೋಡಿದರೆ ಪ್ರೇಕ್ಷಕರ ಅಭಿಪ್ರಾಯಗಳು ಬದಲಾಗುತ್ತಿವೆ. ಟೀಕಾಕಾರರೇ ಅವರನ್ನು ಹೊಗಳುತ್ತಿದ್ದಾರೆ.
ಬೆಂಗಳೂರು: ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ನಿನ್ನೆ ರಾತ್ರಿ ನೈಟ್ ಔಟ್ ಮಾಡಿದ್ದು, ಅಧಿಕಾರಿಗಳನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋಗಳು ಇಲ್ಲಿವೆ ನೋಡಿ. ಹೊರವರ್ತುಲ ರಸ್ತೆ ಹಾಗೂ ಬೆಳ್ಳಾರಿ ರಸ್ತೆಯ ನಾಗವಾರ ಜಂಕ್ಷನ್ನಿಂದ ಯಲಹಂಕವರೆಗಿನ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಸಚಿವರು ತಡರಾತ್ರಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಈ ಹೈಡ್ರಾಮಾ ನಡೆದಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ನೀವು ನಿಮ್ಮ ಕರ್ತವ್ಯ ನಿರ್ವಹಿಸಲು ನಾವು ನಿಮಗೆ ಗೋಗರೆಯಬೇಕೇ?
ಕಲಬುರಗಿ: ಗೃಹ ಸಚಿವರ ತವರು ಜಿಲ್ಲೆಯಾದ ಕಲಬುರಗಿಯಲ್ಲಿ ಪೊಲೀಸರ ಭಾರಿ ನಿರ್ಲಕ್ಷ್ಯವೊಂದು ಬೆಳಕಿಗೆ ಬಂದಿದ್ದು, ಠಾಣೆಯಲ್ಲೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪೋಕ್ಸೊ ಪ್ರಕರಣದ ಆರೋಪಿಯೊಬ್ಬ ಪರಾರಿಯಾಗಿರುವ ಆಘಾತಕಾರಿ ಘಟನೆ ಸಂಭವಿಸಿದೆ. ಜಿಲ್ಲೆಯ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಪರಾರಿಯಾದ ಆರೋಪಿಯನ್ನು 24 ವರ್ಷದ ಮಂಜುನಾಥ್ ಎಂದು ಗುರುತಿಸಲಾಗಿದೆ.ಕಳೆದ ಒಂದು ವಾರದ ಹಿಂದೆ ಅಪ್ರಾಪ್ತ ಬಾಲಕಿಯ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪೋಕ್ಸೊ ಕಾಯ್ದೆಯಡಿ ಈತನನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆತಂದಿದ್ದರು. ಜುಲೈ 2 ರ ನಸುಕಿನ ಜಾವ ಠಾಣೆಯಲ್ಲಿದ್ದ ಪೊಲೀಸ್ ಸಿಬ್ಬಂದಿ ಕರ್ತವ್ಯದ ಅವಧಿಯಲ್ಲೇ ಆಯಾಸದಿಂದ ನಿದ್ರೆಗೆ ಜಾರಿದ್ದಾರೆ.
ಪುಣೆ: ಮಹಾರಾಷ್ಟ್ರದ ಪುಣೆಯ ಲೋಹಗಢ್ ಕೋಟೆಯಲ್ಲಿ ತನ್ನ ಭಾವಿ ಪತಿ, ಉದ್ಯಮಿ ಕೆತನ್ ಅಗರ್ವಾಲ್ (26) ಎಂಬುವವರನ್ನು ಬೆಟ್ಟದಿಂದ ತಳ್ಳಿ ಕೊಲೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ 20 ವರ್ಷದ ಯುವತಿ ಸಿಯಾ ಗೋಯಲ್ ಅವರ ಮುಜೋರೊ ಮತ್ತು ಉದ್ಧಟತನದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಜನಾಕ್ರೋಶಕ್ಕೆ ಕಾರಣವಾಗಿದೆ.ಸಿಯಾಳನ್ನು ಸಾಕ್ಷ್ಯ ಸಂಗ್ರಹಕ್ಕಾಗಿ ಪೊಲೀಸರು ನಿನ್ನೆ ಆಕೆಯ ಮನೆಗೆ ಕರೆ ತಂದಿದ್ದರು. ಈ ವೇಳೆ ಮಾಧ್ಯಮಗಳ ಕ್ಯಾಮರಾಗಳನ್ನು ನೋಡುತ್ತಿದ್ದಂತೇ ಸಿಯಾ ಇಂತಹ ಅಶ್ಲೀಲ ಸನ್ನೆ ಮಾಡಿದ್ದಾಳೆ. ಈ ಸನ್ನೆ ಮಾಡಿದ್ದು ಮಾಧ್ಯಮಗಳಿಗಾಗಿ ಇಲ್ಲವೇ ತನಗೆ ಏನೂ ಮಾಡಕ್ಕಾಗಲ್ಲ ಎನ್ನುವ ಉದ್ಧಟತನದ ಸಂದೇಶ ನೀಡಿದ್ದಾರೆ ಎಂಬ ಕುರಿತು ಚರ್ಚೆಯಾಗುತ್ತಿದೆ.
ಬೆಂಗಳೂರು: ಬೆಂಗಳೂರು ಹೊರವಲಯದ ತಾವರೆಕೆರೆ ಪೊಲೀಸ್ ವ್ಯಾಪ್ತಿಯ ಮಾದಪಟ್ಟಣ ಗ್ರಾಮದಲ್ಲಿ ನಡೆದ ಕಲ್ಲು ಕ್ವಾರಿ ದುರಂತವು ಕೇವಲ ಆಕಸ್ಮಿಕ ಅಪಘಾತವಲ್ಲ, ಅದೊಂದು ವ್ಯವಸ್ಥಿತ ಮಾನವ ನಿರ್ಮಿತ ದುರಂತ ಎಂಬ ಸತ್ಯ ಈಗ ಹೊರಬರುತ್ತಿದೆ. ನಿಯಮಗಳನ್ನು ಗಾಳಿಗೆ ತೂರಿ ನಡೆಸಲಾಗುತ್ತಿದ್ದ ಗಣಿಗಾರಿಕೆಯೇ ಕನಿಷ್ಠ 7 ಮಂದಿ ಬಡ ಕಾರ್ಮಿಕರ ಸಾವಿಗೆ ನೇರ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಜಂಟಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಭಾರತೀಯ ಹವಾಮಾನ ಇಲಾಖೆ ಇಂದಿನ ಹವಾಮಾನ ಮುನ್ಸೂಚನೆಯನ್ನು ಬಿಡುಗಡೆ ಮಾಡಿದೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆಯ ತೀವ್ರತೆ ಗಣನೀಯವಾಗಿ ಹೆಚ್ಚಾಗಲಿದ್ದು, ದಕ್ಷಿಣ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ಮಳೆ ಮತ್ತು ಹವಾಮಾನದ ಸಂಪೂರ್ಣ ವಿವರ ಇಲ್ಲಿದೆ: ಕರಾವಳಿ ಕರ್ನಾಟಕ: ಭಾರಿ ಮಳೆಯ ಮುನ್ಸೂಚನೆ, 'ರೆಡ್ ಅಲರ್ಟ್'ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜುಲೈ 3 ರಂದು ಅತ್ಯಂತ ಭಾರಿ ಮಳೆಯಾಗುವ (204.5 mm ಗಿಂತ ಹೆಚ್ಚು) ಸಾಧ್ಯತೆ ಇರುವುದರಿಂದ 'ರೆಡ್ ಅಲರ್ಟ್' ಘೋಷಿಸಲಾಗಿದೆ.
ಶುಕ್ರವಾರದ ದಿನವನ್ನು ಲಕ್ಷ್ಮಿ ದೇವಿಯ ಆರಾಧನೆಗೆ ಅತ್ಯಂತ ಶ್ರೇಷ್ಠ ಮತ್ತು ಪವಿತ್ರವಾದ ದಿನವೆಂದು ಪರಿಗಣಿಸಲಾಗುತ್ತದೆ. ಶುಕ್ರವಾರದಂದು ಭಕ್ತಿಯಿಂದ ಮಹಾಲಕ್ಷ್ಮಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಐಶ್ವರ್ಯ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಆದರೆ, ಶಾಸ್ತ್ರಗಳ ಪ್ರಕಾರ ಲಕ್ಷ್ಮಿ ಪೂಜೆಯನ್ನು ನಿರ್ದಿಷ್ಟ ಮತ್ತು ಶುಭ ಮುಹೂರ್ತದಲ್ಲಿ ಮಾಡುವುದರಿಂದ ಪೂಜೆಯ ಫಲ ದುಪ್ಪಟ್ಟಾಗುತ್ತದೆ. ಶುಕ್ರವಾರ ಲಕ್ಷ್ಮಿ ಪೂಜೆಗೆ ಅತ್ಯುತ್ತಮ ಸಮಯಗಳು:1. ಗೋಧೂಳಿ ಮುಹೂರ್ತ (ಸಂಜೆ ಸಮಯ - ಅತ್ಯಂತ ಶ್ರೇಷ್ಠ): ಸಮಯ: ಸಂಜೆ 5:30 ರಿಂದ ರಾತ್ರಿ 7:00 ರ ನಡುವೆ (ಸೂರ್ಯಾಸ್ತದ ಸಮಯ).
ಬೆಂಗಳೂರು: ಮೇಡಂ ಥೇಟ್ ರಾಜ ರಾಜೇಶ್ವರಿ ದೇವಿ ಥರಾನೇ ಕಾಣಿಸ್ತಿದ್ದೀರಾ.. ಎಂದು ಕಾರ್ಯಕ್ರಮವೊಂದರಲ್ಲಿ ಹೊಗಳಿದಾಗ ಡಿಂಪಲ್ ಕ್ವೀನ್ ರಚಿತಾ ರಾಮ್ ರಿಯಾಕ್ಷನ್ ಹೇಗಿತ್ತು ಗೊತ್ತಾ? ನಟಿ ರಚಿತಾ ರಾಮ್ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ನಟಿ. ಅವರು ಎಲ್ಲೇ ಹೋದರೂ ಸೀರೆಯಲ್ಲೇ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಾರೆ. ಇದೀಗ ಖಾಸಗಿ ಕಾರ್ಯಕ್ರಮವೊಂದಕ್ಕೆ ಅವರು ಸೀರೆಯಲ್ಲಿ ಮುದ್ದಾಗಿ ರೆಡಿಯಾಗಿ ಬಂದಿದ್ದರು. ಈ ವೇಳೆ ನಿರೂಪಕಿ ಅವರನ್ನು ಮೇಡಂ ಥೇಟ್ ರಾಜ ರಾಜೇಶ್ವರಿ ದೇವಿ ಥರಾ ಕಾಣಿಸ್ತಿದ್ದೀರಿ ಎಂದು ಹೊಗಳಿದ್ದಾರೆ. ಇದಕ್ಕೆ ರಚಿತಾ ತಕ್ಷಣ ಖಂಡಿತಾ ಹಾಗೆಲ್ಲಾ ಹೇಳಬೇಡಿ ಎಂದು ಕೈ ಆಡಿಸಿ ನಿರಾಕರಿಸಿದ್ದಾರೆ.
ಮುಂಬೈ: ಟೀಂ ಇಂಡಿಯಾ ವಾಲ್ ಎಂದೇ ಜನಜನಿತವಾಗಿದ್ದ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮಕ್ಕಳು ಈಗ ಕಿರಿಯರ ಕ್ರಿಕೆಟ್ ತಂಡದಲ್ಲಿ ಮಿಂಚುತ್ತಿದ್ದಾರೆ. ಅದರಲ್ಲೂ ಸಮಿತ್ ದ್ರಾವಿಡ್ ಬ್ಯಾಟಿಂಗ್ ನೋಡುತ್ತಿದ್ದರೆ ನಿಮಗೆ ಥೇಟ್ ರಾಹುಲ್ ದ್ರಾವಿಡ್ ರನ್ನು ನೋಡಿದಂತೇ ಆಗುತ್ತದೆ. ಆ ವಿಡಿಯೋ ಇಲ್ಲಿದೆ ನೋಡಿ. ಪ್ರಸ್ತುತ ನಡೆಯುತ್ತಿರುವ ಮಹಾರಾಜ ಟ್ರೋಫಿ KSCA T20 2026 ಟೂರ್ನಿಯಲ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಸಮಿತ್ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಜುಲೈ 1 ರಂದು ನಡೆದ ಹುಬ್ಳಿ ಟೈಗರ್ಸ್ ವಿರುದ್ಧದ ಪಂದ್ಯದಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ಪರ ಕಣಕ್ಕಿಳಿದಿದ್ದ ಸಮಿತ್, 'ಮಿಸ್ಟರ್ 360 ಡಿಗ್ರಿ' ಅವತಾರವೆತ್ತಿ ಅಬ್ಬರಿಸಿದ್ದಾರೆ.
ಬೆಂಗಳೂರು: ಮಾದಪಟ್ಟಣ ಕಲ್ಲು ಕ್ವಾರಿ ದುರಂತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರನ್ನು ಭೇಟಿ ಮಾಡಿದ ವಿಪಕ್ಷ ನಾಯಕ ಆರ್ ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಇಂದು ಬೆಂಗಳೂರಿನ ಸಮೀಪ ಕಲ್ಲು ಕ್ವಾರಿಯಲ್ಲಿ ಬಂಡೆ ಜಾರಿ ದುರಂತ ಸಂಭವಿಸಿದೆ. ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದು ಹಲವರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಕೆಂಗೇರಿಯ ಆರ್ ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿಗೆ ವಿಪಕ್ಷ ನಾಯಕ ಆರ್ ಅಶೋಕ್, ಛಲವಾದಿ ನಾರಾಯಣಸ್ವಾಮಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಬಳಿಕ ಮಾತನಾಡಿರುವ ಅಶೋಕ್ ‘ಈ ದುರಂತವು ರಾಜ್ಯ ಸರ್ಕಾರದ ನಿರ್ಲಕ್ಷ್ಯ, ಬೇಜವಾಬ್ದಾರಿತನ ಮತ್ತು ಸುರಕ್ಷತಾ ನಿಯಮಗಳ ಅನುಷ್ಠಾನದಲ್ಲಿನ ಸಂಪೂರ್ಣ ವೈಫಲ್ಯವನ್ನು ಮತ್ತೊಮ್ಮೆ ಬಯಲಿಗೆಳೆದಿದೆ.
ಮೇಘಾಲಯ: ಹನಿಮೂನ್ ಹೋಗಿದ್ದಾಗ ಪತಿ ರಾಜ ರಘುವಂಶಿಯನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಸೋನಂ ರಘುವಂಶಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೇತನ್ ಅಗರ್ವಾಲ್ ಪ್ರಕರಣ ಮಾದರಿಯಲ್ಲೇ ರಾಜ ರಘುವಂಶಿ ಮರ್ಡರ್ ನಡೆದಿತ್ತು. ಮೇಘಾಲಯದ ಸೊಹ್ರಾ ವಲಯಕ್ಕೆ ಪತ್ನಿ ಸೋನಂ ಜೊತೆ ಹನಿಮೂನ್ ಗೆ ಹೋಗಿದ್ದಾಗ ರಾಜ ರಘುವಂಶಿ ಕೆಲವು ದಿನ ನಾಪತ್ತೆಯಾಗಿದ್ದರು. ಬಳಿಕ ರಾಜ ರಘುವಂಶಿ ಮೃತದೇಹ ಆಳವಾದ ಕಂದಕದಲ್ಲಿ ಪತ್ತೆಯಾಗಿತ್ತು. ತನಿಖೆ ಬಳಿಕ ಪತ್ನಿ ಸೋನಂ ರಘುವಂಶಿ ಮತ್ತು ಆಕೆಯ ಪ್ರಿಯಕರ ಸೇರಿಕೊಂಡು ಸುಪಾರಿ ಕೊಟ್ಟು ರಾಜ ರಘುವಂಶಿಯನ್ನು ಆಳದ ಕಂದಕಕ್ಕೆ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಆರೋಪ ಬಂದಿತ್ತು.
ಪುಣೆ: ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದಲ್ಲಿ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಆರೋಪಿಗಳಾಗಿದ್ದಾರೆ. ಆದರೆ ಇಬ್ಬರ ಮೇಲಿನ ಆರೋಪಗಳು ಸಾಬೀತಾಗಿ ಶಿಕ್ಷೆಯಾಗುವುದು ಅಷ್ಟು ಸುಲಭವಲ್ಲ. ಈ ಪ್ರಕರಣ ಸಾಕ್ಷ್ಯಗಳ ಕೊರತೆಯಿಂದ ಬಿದ್ದು ಹೋಗುವ ಅಪಾಯವೂ ಇದೆ ಎನ್ನಲಾಗುತ್ತಿದೆ. ಪುಣೆ ಉದ್ಯಮಿ ಕೇತನ್ ಅಗರ್ವಾಲ್ ರನ್ನು ಆತನ ಭಾವೀ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಲೋಹಗಢ್ ಕೋಟೆಯ 400 ಅಡಿ ಕಂದಕಕ್ಕೆ ತಳ್ಳಿ ಕೊಲೆ ಮಾಡಿದ್ದಾರೆ ಎಂಬುದು ಆರೋಪವಾಗಿದೆ. ಈ ಸಂಬಂಧ ಇಬ್ಬರನ್ನೂ ಬಂಧಿಸಿ ಪೊಲೀಸರು ಹಲವು ಸಾಕ್ಷ್ಯ ಸಂಗ್ರಹ ಮಾಡುತ್ತಿದ್ದಾರೆ.
ಮೈಸೂರು: ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ನಂತರ ಬಹಳ ಆತುರಾತುರವಾಗಿ ಬಿಡದಿ ಟೌನ್ಶಿಪ್ ವಿಚಾರದಲ್ಲಿ ರೈತರ ಮೇಲೆ ದಬ್ಬಾಳಿಕೆ ಮಾಡುವಂಥ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರಿಸಿದರು. ನಾನು, ನಮ್ಮ ವಿಪಕ್ಷ ನಾಯಕರು ಸ್ಥಳಕ್ಕೆ ಭೇಟಿ ಕೊಟ್ಟಿದ್ದೇವೆ. ಒಂದು ಕಡೆ ಸರಕಾರವು ಶೇ 80ರಷ್ಟು ರೈತರು ಬಿಡದಿ ಟೌನ್ಶಿಪ್ಗೆ ಅನುಮತಿ ಕೊಟ್ಟಿದ್ದಾರೆಂದು ಹೇಳುತ್ತಿದೆ. ಆದರೆ, ವಾಸ್ತವಿಕವಾಗಿ ಶೇ 70-80 ರೈತರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೃಷಿ ಚಟುವಟಿಕೆಗೆ ಪೂರಕವಾದ ಜಮೀನನ್ನು ಕಸಿದುಕೊಳ್ಳಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಒಂಬತ್ತು ತಿಂಗಳು ಗರ್ಭದಲ್ಲಿಟ್ಟು ಹೊತ್ತು, ಹೆತ್ತು, ತುತ್ತು ಉಣಿಸಿ, ತನ್ನ ಕಾಲಿನ ಮೇಲೆ ತಾನು ನಿಲ್ಲುವಂತೆ ಬೆಳೆಸಿದ ಅದೇ ಹೆತ್ತ ತಾಯಿ ಇಂದು ಮಗನಿಗೆ ಭಾರವಾಗಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತುತ ವೈರಲ್ ಆಗಿರುವ ಭೀಕರ ವಿಡಿಯೋವೊಂದು ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ.ವೈರಲ್ ಆಗಿರುವ ವಿಡಿಯೋದಲ್ಲಿ, ಜನ್ಮ ನೀಡಿದ ತಾಯಿಯನ್ನೇ ಮಗನೊಬ್ಬ ಕೋಲಿನಿಂದ ಅಮಾನುಷವಾಗಿ ಹೊಡೆಯುತ್ತಿರುವುದು ಕಂಡುಬಂದಿದೆ. ಆ ವೃದ್ಧ ತಾಯಿ ಮಗನ ಹೊಡೆತಕ್ಕೆ ತಾಳಲಾರದೆ, ತನ್ನ ಪ್ರಾಣ ಉಳಿಸಿಕೊಳ್ಳಲು ಕಿರುಚುತ್ತಾ ಓಡುತ್ತಿರುವ ದೃಶ್ಯ ಹೃದಯ ಕಲಕುವಂತಿದೆ.
ಬೆಂಗಳೂರು: ಇಲ್ಲಿನ ದಕ್ಷಿಣ ತಾಲೂಕಿನ ಮಾದಪಟ್ಟಣದಲ್ಲಿ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿತದಿಂದ 7 ಮಂದಿ ಸಾವನ್ನಪ್ಪಿದ ಘಟನೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣದಲ್ಲಿ ಕ್ರಷರ್ ಬಂಡೆ ಕುಸಿದು 7 ಮಂದಿ ಕಾರ್ಮಿಕರು ಮೃತಪಟ್ಟಿರುವುದು ತೀವ್ರ ದುಃಖವನ್ನುಂಟು ಮಾಡಿದೆ. ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲಿ, ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲಿ ಹಾಗೂ ಗಾಯಾಳುಗಳು ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಜೀವ ರಕ್ಷಣೆ ಹಾಗೂ ಭದ್ರತೆ ಒದಗಿಸುವುದು ಕ್ವಾರಿ ಮಾಲೀಕರ ಕರ್ತವ್ಯವಾಗಿದೆ.
ಮೇಡಂ ನನ್ನ ಸೀಟ್ ಹೆಂಡ್ತಿ ತಗೊಂಡಿದ್ದಾಳೆ. ಅವಳನ್ನು ಎಬ್ಬಿಸಿ ಎಂದು ಅರೆಬರೆ ಇಂಗ್ಲಿಷ್ ನಲ್ಲಿ ಪತಿ ಗಗನಸಖಿ ಬಳಿ ಕಂಪ್ಲೇಂಟ್ ಮಾಡುತ್ತಿದ್ದರೆ ಇಡೀ ವಿಮಾನದಲ್ಲಿ ನಗುವೋ ನಗು.. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಮಾನಯಾನದ ವೇಳೆ ಹಲವು ಫನ್ನಿ ಸಂದರ್ಭಗಳು ನಡೆಯುತ್ತವೆ. ಹಲವು ಬಾರಿ ತಮ್ಮ ಸೀಟ್ ಗಾಗಿ ಪ್ರಯಾಣಿಕರು ಕಿತ್ತಾಡುವುದಿದೆ. ಆದರೆ ಇಲ್ಲಿ ಯಾರೋ ಸಹ ಪ್ರಯಾಣಿಕರಲ್ಲ ತನ್ನ ಸ್ವಂತ ಹೆಂಡತಿ ಬಗ್ಗೆಯೇ ಓರ್ವ ವ್ಯಕ್ತಿ ಗಗನ ಸಖಿಗೆ ದೂರು ನೀಡಿದ್ದಾನೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಚಿನ್ನದ ದರ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ. ಚಿನ್ನದ ದರ ಏರಿಕೆಕಳೆದ ಕೆಲವು ದಿನಗಳಿಂದ ಚಿನ್ನದ ದರ ಇಳಿಕೆಯಾಗುತ್ತಲೇ ಇತ್ತು. ಆದರೆ ಇಂದು ಮತ್ತೆ ಚಿನ್ನದ ದರದಲ್ಲಿ ವ್ಯತ್ಯಾಸ ಕಂಡುಬಂದಿದೆ. ಮೊನ್ನೆ ಚಿನ್ನದ ದರದಲ್ಲಿ ಕೊಂಚ ಇಳಿಕೆಯಾಗಿತ್ತು. ಇಂದು ಚಿನ್ನದ ದರ ಮತ್ತೆ ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳು ಭಾರತದಲ್ಲೂ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುತ್ತಲೇ ಇರುತ್ತವೆ. ಇಂದು ಪರಿಶುದ್ಧ ಚಿನ್ನದ ದರ ಏರಿಕೆಯಾಗಿದ್ದು 1,46,275 ರೂ.ಗಳಾಗಿವೆ.
ರೈಲು ನಿಲ್ದಾಣದಲ್ಲಿ ಹಳಿಗಳ ಮೇಲೆ ಅತ್ತಿತ್ತ ಓಡಾಡುತ್ತಿದ್ದ ವ್ಯಕ್ತಿಯನ್ನು ರೋಚಕವಾಗಿ ರಕ್ಷಿಸಿದ ಬಳಿಕ ರೈಲ್ವೇ ಪೊಲೀಸ್ ಸಿಬ್ಬಂದಿ ಮಾಡಿದ ಕೆಲಸಕ್ಕೆ ನೆಟ್ಟಿಗರು ಸರಿಯಾಗಿಯೇ ಮಾಡಿದ್ದೀರಿ ಎಂದು ಕೊಂಡಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ನಮ್ಮ ದೇಶದಲ್ಲಿ ರೈಲು ನಿಲ್ದಾಣಗಳಲ್ಲಿ ಇನ್ನೊಂದು ಸೈಡ್ ಗೆ ತೆರಳಲು ಮೆಟ್ಟಿಲುಗಳ ವ್ಯವಸ್ಥೆಯಿದ್ದರೂ ಅಷ್ಟೆಲ್ಲಾ ಹತ್ತಿ ಇಳಿದು ಯಾರು ಮಾಡುತ್ತಾರೆ ಎಂದು ಅಪಾಯಕಾರಿಯಾಗಿ ರೈಲು ಹಳಿಗಳನ್ನೇ ಅಡ್ಡ ಹಾರಲು ಯತ್ನಿಸುತ್ತಾರೆ. ಈ ರೀತಿ ಮಾಡುವಾಗ ಎಷ್ಟೋ ಜನ ಪ್ರಾಣವನ್ನೇ ಕಳೆದುಕೊಂಡ ಉದಾಹರಣೆಗಳಿವೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹೊರವಲಯದ ಕಲ್ಲು ಕ್ವಾರಿಯೊಂದರಲ್ಲಿ ಭೀಕರ ದುರಂತ ಸಂಭವಿಸಿದ್ದು, ಭಾರಿ ಗಾತ್ರದ ಬಂಡೆಯೊಂದು ಕುಸಿದು ಬಿದ್ದ ಪರಿಣಾಮ ಕನಿಷ್ಠ ಎಂಟು ಜನ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘೋರ ಘಟನೆ ನಡೆದಿದೆ.ಕ್ವಾರಿಯಲ್ಲಿ ಕಾರ್ಮಿಕರು ಎಂದಿನಂತೆ ಕಲ್ಲು ಒಡೆಯುವ ಮತ್ತು ಲಾರಿಗಳಿಗೆ ತುಂಬಿಸುವ ಕೆಲಸದಲ್ಲಿ ನಿರತರಾಗಿದ್ದಾಗ ಈ ದುರಂತ ಸಂಭವಿಸಿದೆ. ಯಾವುದೇ ಮುನ್ಸೂಚನೆ ಇಲ್ಲದೆ ಮೇಲ್ಭಾಗದಲ್ಲಿದ್ದ ಬೃಹತ್ ಬಂಡೆಯೊಂದು ಭಾರಿ ಸದ್ದಿನೊಂದಿಗೆ ಕಾರ್ಮಿಕರ ಮೇಲೆ ಉರುಳಿ ಬಿದ್ದಿದೆ. ಬಂಡೆಯ ಅಡಿಯಲ್ಲಿ ಸಿಲುಕಿದ ಎಂಟು ಜನ ಕಾರ್ಮಿಕರು ತೀವ್ರ ರಕ್ತಸ್ರಾವ ಹಾಗೂ ಉಸಿರುಗಟ್ಟಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಬೆಂಗಳೂರು: ಗೃಹಜ್ಯೋತಿ ಯೋಜನೆಗೆ ಜಾತಿ ಸರ್ಟಿಫಿಕೇಟ್ ಕೇಳ್ತಿರೋದು ಯಾಕೆ? ಫ್ರೀ ವಿದ್ಯುತ್ ಕೊಡಲೂ ಜಾತಿ ಬೇಕಾ ಎಂದು ಬಿಜೆಪಿ ನಾಯಕ ಆರ್ ಅಶೋಕ್ ಕಿಡಿ ಕಾರಿದ್ದಾರೆ. ಜೊತೆಗೆ ಈಗ ಸಾರ್ವಜನಿಕರಿಂದಲೂ ಈ ಪ್ರಶ್ನೆ ಕೇಳಿಬರುತ್ತಿದೆ. ನಿನ್ನೆಯಿಂದ ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆ ಮರುಪರಿಷ್ಕರಣೆಗೆ ಮುಂದಾಗಿದೆ. ಮನೆ ಮನೆಗೆ ಅಧಿಕಾರಿಗಳು ಬಂದು ದಾಖಲೆಗಳ ಪರಿಶೀಲನೆ ನಡೆಸಲಿದ್ದಾರೆ. ಕರ್ನಾಟಕದ ನಿವಾಸಿಗಳಿಗೆ ಮಾತ್ರ ಗೃಹಜ್ಯೋತಿ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ. ಇದೀಗ ಅಧಿಕಾರಿಗಳಿಗೆ ಗೃಹಜ್ಯೋತಿ ಯೋಜನೆಗೆ ದಾಖಲೆಗಳನ್ನು ನೀಡುವಾಗ ಜಾತಿ ಸರ್ಟಿಫಿಕೇಟ್ ನ್ನೂ ಕೇಳಲಾಗುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದ ವೇಳೆ ಯುವ ಕ್ರಿಕೆಟ್ ಸಂವೇದನೆ ವೈಭವ್ ಸೂರ್ಯವಂಶಿ ಅವರ ಕ್ರೇಜ್ ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಇನ್ನು ಅವರಿಗೆ ಅಂತರರಾಷ್ಟ್ರೀಯ ಪಂದ್ಯದಲ್ಲಿ ಪದಾರ್ಪಣೆ ಮಾಡಲು ಅವಕಾಶ ನೀಡದೇ ನಿರ್ಲಕ್ಷಿಸುತ್ತಿರಬಹುದು, ಆದರೆ ಕ್ರಿಕೆಟ್ ಅಭಿಮಾನಿಗಳು ಮಾತ್ರ ಅವರನ್ನು ಆಗಲೇ ಒಬ್ಬ 'ಸೂಪರ್ಸ್ಟಾರ್' ಆಗಿ ಆಚರಿಸುತ್ತಿದ್ದಾರೆ.ಪಂದ್ಯದ ಆರಂಭಕ್ಕೂ ಮುನ್ನ ವೈಭವ್ ಸೂರ್ಯವಂಶಿ ಅಭ್ಯಾಸಕ್ಕಾಗಿ ಮೈದಾನಕ್ಕೆ ಪ್ರವೇಶಿಸುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಭವ್ಯವಾಗಿ ಸ್ವಾಗತಿಸಿದರು. ಕೇವಲ ಸ್ವಾಗತವಷ್ಟೇ ಅಲ್ಲದೆ, ಈ ಯುವ ಆಟಗಾರನನ್ನು ಹತ್ತಿರದಿಂದ ನೋಡಲು, ಅವರೊಂದಿಗೆ ಸೆಲ್ಫಿ ಹಾಗೂ ವಿಡಿಯೋಗಳನ್ನು ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಮೊದಲ ಟಿ20 ಪಂದ್ಯದಲ್ಲಿ ರನ್ ಔಟ್ ವಿಚಾರವಾಗಿ ಭಾರತೀಯ ಬ್ಯಾಟರ್ಗಳಾದ ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ನಡುವೆ ಮೈದಾನದಲ್ಲೇ ಮಾತಿನ ಚಕಮಕಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ಸ್ಟಂಪ್ ಮೈಕ್ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.ಪಂದ್ಯದ ಆರಂಭದಲ್ಲೇ ಇಶಾನ್ ಕಿಶನ್ ಚೆಂಡನ್ನು ಮಿಡ್ವಿಕೆಟ್ ಕಡೆಗೆ ತಳ್ಳಿ ಸಿಂಗಲ್ ರನ್ ಓಡಲು ಮುಂದಾದರು. ಆದರೆ, ಇಂಗ್ಲೆಂಡ್ ತಂಡದ ಹ್ಯಾರಿ ಬ್ರೂಕ್ ಅತ್ಯಂತ ವೇಗವಾಗಿ ಚೆಂಡನ್ನು ತಡೆದಿದ್ದನ್ನು ನೋಡಿದ ಅಭಿಷೇಕ್ ಶರ್ಮಾ ರನ್ ಬೇಡ ಎಂದು ನಿರಾಕರಿಸಿದರು.
ಮುಂಬೈ: ಮುಂಬೈನ ಜೀವಾಳವಾಗಿರುವ ಲೋಕಲ್ ಟ್ರೈನ್ನಲ್ಲಿ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸುವ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಚಲಿಸುತ್ತಿದ್ದ ರೈಲಿನಲ್ಲಿ ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕನೊಬ್ಬ, "ನಾನು ಈಗಾಗಲೇ 4 ಕೊಲೆಗಳನ್ನು ಮಾಡಿದ್ದೇನೆ, ಮುಂದಿನ ಸರದಿ ನಿನ್ನದೇ!" ಎಂದು ಸಹ-ಪ್ರಯಾಣಿಕರಿಗೆ ಬಹಿರಂಗವಾಗಿ ಮರಣ ಬೆದರಿಕೆ ಹಾಕಿದ್ದು, ಇಡೀ ಬೋಗಿಯಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ.ಕೆಲವೇ ದಿನಗಳ ಹಿಂದಷ್ಟೇ ಮುಂಬೈ ಲೋಕಲ್ ಟ್ರೈನ್ನಲ್ಲಿ ರೈಲಿನ ಬಾಗಿಲು ಮುಚ್ಚುವ ವಿಚಾರವಾಗಿ ನಡೆದ ಗಲಾಟೆಯಲ್ಲಿ 22 ವರ್ಷದ ಯುವಕ ಮಾಯಾಂಕ್ ಲೋಹರ್ ಎಂಬಾತನನ್ನು ಸಾರ್ವಜನಿಕವಾಗಿ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿತ್ತು.
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ. ದರ್ಶನ್ ಅಭಿಮಾನಿಗಳು ಎನ್ನಲಾದ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರೇಣುಕಾಸ್ವಾಮಿ ಮರ್ಡರ್ ಕೇಸ್ ಟ್ರಯಲ್ ನಡೆಯುತ್ತಿದೆ. ಮೊನ್ನೆಯಷ್ಟೇ ಕೋರ್ಟ್ ನಲ್ಲಿ ಓರ್ವ ಸಾಕ್ಷಿದಾರ ನನಗೆ ಓರ್ವ ವ್ಯಕ್ತಿ ತಾನು ಹೇಳಿದಂತೆ ಸಾಕ್ಷಿ ನುಡಿಯುವಂತೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದರು. ಇದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಆತ ಹೇಳಿದ ವ್ಯಕ್ತಿಗಳನ್ನು ವಶಕ್ಕೆ ಪಡೆಯುವಂತೆ ಸೂಚಿಸಿತ್ತು. ನ್ಯಾಯಾಲಯದ ಸೂಚನೆ ಮೇರೆಗೆ ಕಾಮಾಕ್ಷಿಪಾಳ್ಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ದರ್ಶನ್ ಅಭಿಮಾನಿಗಳಾದ ಪುನೀತ್, ಸುಹಾಸ್ ಮತ್ತು ವೇಣು ಬಂಧಿತರು.
ಮುಂಬೈ: ಎತ್ತರದ ಕಟ್ಟಡದ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನೊಬ್ಬನನ್ನು ಸ್ಥಳೀಯ ನಿವಾಸಿಯೊಬ್ಬರು ತಮ್ಮ ತ್ವರಿತ ಚಿಂತನೆ ಮತ್ತು ಧೈರ್ಯದಿಂದ ರಕ್ಷಿಸಿದ ರೋಚಕ ಘಟನೆ ಮುಂಬೈನ ಅಂಧೇರಿ ವೆಸ್ಟ್ನ ಮನೀಶ್ ನಗರದಲ್ಲಿ ನಡೆದಿದೆ. ಮನೀಶ್ ನಗರದ ಬಹುಮಹಡಿ ಕಟ್ಟಡವೊಂದರ ಬಾಲ್ಕನಿಯ ಅಂಚಿನಲ್ಲಿ ನಿಂತಿದ್ದ ಯುವಕನೊಬ್ಬ ಕೆಳಗೆ ಹಾರಲು ಮುಂದಾಗಿದ್ದ. ಇದನ್ನು ಕಂಡು ಕೆಳಗೆ ಜಮಾಯಿಸಿದ್ದ ಜನರು ತೀವ್ರ ಆತಂಕಗೊಂಡು ಕಿರುಚಾಡಲಾರಂಭಿಸಿದರು. ಸ್ಥಳದಲ್ಲಿ ತೀವ್ರ ಗದ್ದಲ ಮತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕ್ಷಣಕ್ಷಣಕ್ಕೂ ಆತಂಕ ಹೆಚ್ಚಾಗುತ್ತಿದ್ದಂತೆ, ಯಾವುದೇ ಕ್ಷಣದಲ್ಲಾದರೂ ದುರಂತ ಸಂಭವಿಸುವ ಸಾಧ್ಯತೆ ಇತ್ತು.
ಮೈಸೂರು: ಇದೇ ಶುಕ್ರವಾರ ಆಷಾಢ ಮಾಸಕ್ಕೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಬರುವ ಹಿನ್ನೆಲೆ ಯಾರೊಬ್ಬರಿಗೂ ತೊಂದರೆಯಾಗದ ರೀತಿ ಕ್ರಮ ಕೈಗೊಳ್ಳಬೇಕೆಂದು ಸಚಿವ ಯತೀಂದ್ರ ಹೇಳಿದರು. ಬುಧವಾರ ಚಾಮುಂಡಿ ಬೆಟ್ಟದ ದಾಸೋಹ ಭವನದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಕ್ತರ ಸುರಕ್ಷತೆಯೇ ಮೊದಲ ಆದ್ಯತೆ ಎಂದು ಒತ್ತಿ ಹೇಳಿದ ಸಚಿವರು, ಜನಸಂದಣಿ ಹೆಚ್ಚಾಗುವ ಸಂದರ್ಭದಲ್ಲಿ ಕಾಲ್ತುಳಿತದಂತಹ ದುರ್ಘಟನೆಗಳು ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಸಬೇಕೆಂದು ಹೇಳಿದರು. ಈ ವರ್ಷ ಆಷಾಢ ಶುಕ್ರವಾರಗಳು ಜುಲೈ 17, ಜುಲೈ 24, ಜುಲೈ 31 ಹಾಗೂ ಆಗಸ್ಟ್ 7ರಂದು ನಡೆಯಲಿವೆ. ಆಗಸ್ಟ್ 4ರಂದು
ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಮುಂಗಾರು ಮಾರುತಗಳು ಚುರುಕಾಗಿದ್ದು, ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗಲಿದ್ದು, ಉಳಿದ ಜಿಲ್ಲೆಗಳಲ್ಲೂ ತಂಪಾದ ವಾತಾವರಣ ಇರಲಿದೆ. ಕರಾವಳಿ ಜಿಲ್ಲೆಗಳಿಗೆ 'ಭಾರಿ ಮಳೆ'ಯ ಮುನ್ನೆಚ್ಚರಿಕೆದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂಗಾರು ಅತ್ಯಂತ ಚುರುಕಾಗಲಿದ್ದು, ಹೆಚ್ಚಿನ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮಳೆಯೊಂದಿಗೆ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಇಂದು ಗುರುವಾರವಾಗಿದ್ದು ವಿವಾಹಾದಿ ಅಡ್ಡಿ ಆತಂಕಗಳ ನಿವಾರಣೆಗೆ ಶ್ರೀ ರಾಧಾ ಕೃಪಾಕಟಾಕ್ಷ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.ಮುನೀಂದ್ರ–ವೃಂದ–ವಂದಿತೇ ತ್ರಿಲೋಕ–ಶೋಕ–ಹಾರಿಣಿಪ್ರಸನ್ನ-ವಕ್ತ್ರ-ಪಣ್ಕಜೇ ನಿಕುಂಜ-ಭೂ-ವಿಲಾಸಿನಿವ್ರಜೇಂದ್ರ–ಭಾನು–ನಂದಿನಿ ವ್ರಜೇಂದ್ರ–ಸೂನು–ಸಂಗತೇಕದಾ ಕರಿಷ್ಯಸೀಹ ಮಾಂ ಕೃಪಾಕಟಾಕ್ಷ–ಭಾಜನಮ್ ॥1॥ ಅಶೋಕ–ವೃಕ್ಷ–ವಲ್ಲರೀ ವಿತಾನ–ಮಂಡಪ–ಸ್ಥಿತೇಪ್ರವಾಲಬಾಲ–ಪಲ್ಲವ ಪ್ರಭಾರುಣಾಂಘ್ರಿ–ಕೋಮಲೇ ।ವರಾಭಯಸ್ಫುರತ್ಕರೇ ಪ್ರಭೂತಸಂಪದಾಲಯೇಕದಾ ಕರಿಷ್ಯಸೀಹ ಮಾಂ ಕೃಪಾಕಟಾಕ್ಷ–ಭಾಜನಮ್ ॥2॥ ಅನಂಗ-ರಣ್ಗ ಮಂಗಲ-ಪ್ರಸಂಗ-ಭಂಗುರ-ಭ್ರುವಾಂಸವಿಭ್ರಮಂ ಸಸಂಭ್ರಮಂ ದೃಗಂತ–ಬಾಣಪಾತನೈಃ ।ನಿರಂತರಂ ವಶೀಕೃತಪ್ರತೀತನಂದನಂದನೇಕದಾ ಕರಿಷ್ಯಸೀಹ ಮಾಂ ಕೃಪಾಕಟಾಕ್ಷ–ಭಾಜನಮ್ ॥3॥ ತಡಿತ್–ಸುವರ್ಣ–ಚಂಪಕ –ಪ್ರದೀಪ್ತ–ಗೌರ–ವಿಗ್ರಹೇಮುಖ–ಪ್ರಭಾ–ಪರಾಸ್ತ–ಕೋಟಿ–ಶಾರದೇಂದುಮಂಡಲೇ ।ವಿಚಿತ್ರ-ಚಿತ್ರ ಸಂಚರಚ್ಚಕೋರ-ಶಾವ-ಲೋಚನೇಕದಾ ಕರಿಷ್ಯಸೀಹ ಮಾಂ ಕೃಪಾಕಟಾಕ್ಷ–ಭಾಜನಮ್ ॥4॥ಮದೋನ್ಮದಾತಿ–ಯೌವನೇ ಪ್ರಮೋದ–ಮಾನ–ಮಂಡಿತೇಪ್ರಿಯಾನುರಾಗ–ರಂಜಿತೇ ಕಲಾ–ವಿಲಾಸ – ಪಂಡಿತೇ ।ಅನನ್ಯಧನ್ಯ–ಕುಂಜರಾಜ್ಯ–ಕಾಮಕೇಲಿ–ಕೋವಿದೇಕದಾ ಕರಿಷ್ಯಸೀಹ ಮಾಂ ಕೃಪಾಕಟಾಕ್ಷ–ಭಾಜನಮ್ ॥5॥
ಬೆಂಗಳೂರಿನ ಡೇಕೇರ್ ಸೆಂಟರ್ವೊಂದರಲ್ಲಿ ಬಿಟ್ಟಿದ್ದ ಪುಟ್ಟ ಕಂದಮ್ಮಗಳ ಮೇಲೆ ಕೌರ್ಯ ಮೆರೆದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಜುಳಾ, ವಿಜಯಲಕ್ಷ್ಮಿ, ಭವಾನಿ, ಸಿಂಧು ಹಾಗೂ ಬಿಂದು ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.ಎಚ್ಎಎಲ್ ಆವರಣದ ‘ಕ್ಯಾಪ್ಜೆಮಿನಿ’ ಕಂಪನಿಯ ಆವರಣದಲ್ಲಿರುವ ಡೇ ಕೇರ್ನ ಐವರು ಸಿಬ್ಬಂದಿ, ಪುಟ್ಟ ಮಕ್ಕಳ ಮೇಲೆ ದೌರ್ಜನ್ಯ ಎಸಗಿರುವ ವಿಡಿಯೋವೊಂದು ವೈರಲ್ ಆಗಿತ್ತು.