Shorts

ದೇಶಾದ್ಯಂತ ತೀವ್ರ ಬಿರುಗಾಳಿ ಎಬ್ಬಿಸಿರುವ ನೀಟ್ ಪರೀಕ್ಷಾ ಅಕ್ರಮ ಮತ್ತು ಪೇಪರ್ ಸೋರಿಕೆ ವಿವಾದದ ಕುರಿತು ದಕ್ಷಿಣ ಭಾರತದ ಖ್ಯಾತ ನಟಿ ಜ್ಯೋತಿಕಾ ಅವರು ಗಂಭೀರವಾಗಿ ಸ್ಪಂದಿಸಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಜಿಎನ್‌ಝಿ ಯುವಜನರು ಮತ್ತು ವಿದ್ಯಾರ್ಥಿಗಳು ನಡೆಸುತ್ತಿರುವ ಸುದೀರ್ಘ ಹೋರಾಟಕ್ಕೆ ಬಹಿರಂಗ ಐಕ್ಯದಾರ್ಢ್ಯ ಪ್ರಕಟಿಸಿರುವ ಅವರು, "ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು" ಎಂದು ಖಾರವಾಗಿ ಆಗ್ರಹಿಸಿದ್ದಾರೆ.ಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತು ಭಾವನಾತ್ಮಕ ಹಾಗೂ ಖಡಕ್ ಸಂದೇಶವೊಂದನ್ನು ಹಂಚಿಕೊಂಡಿರುವ ಜ್ಯೋತಿಕಾ, ವಿದ್ಯಾರ್ಥಿಗಳ ಸತತ ಶ್ರಮ ಮತ್ತು ಅವರ ಭವಿಷ್ಯದ ಜೊತೆ ಚೆಲ್ಲಾಟವಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.

ಚೀನಾದ ವಿಮಾನ ನಿಲ್ದಾಣವೊಂದರಲ್ಲಿ ನಡೆದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿಮಾನ ನಿಲ್ದಾಣದ ಮಹಿಳಾ ಪ್ರಯಾಣಿಕರೊಬ್ಬರು ಅಲ್ಲಿದ್ದ ಸಿಬ್ಬಂದಿಯೊಬ್ಬರ ಮೇಲೆ ಹಿಂಸಾತ್ಮಕವಾಗಿ ನಿರಂತರವಾಗಿ ಹಲ್ಲೆ ನಡೆಸಿದ್ದು, ಸುತ್ತಲೂ ಇದ್ದ ಜನರು ಮೌನ ಪ್ರೇಕ್ಷಕರಾಗಿ ನೋಡುತ್ತಿದ್ದ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ. ಕೊನೆಗೆ ಸಹನೆಯ ಗಡಿ ದಾಟಿದಾಗ, ಆ ಸಿಬ್ಬಂದಿ ತಮ್ಮ ಆತ್ಮರಕ್ಷಣೆಗಾಗಿ ತಿರುಗಿ ಪೆಟ್ಟು ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ವರದಿಗಳ ಪ್ರಕಾರ, ವಿಮಾನ ವಿಳಂಬ ಅಥವಾ ತಾಂತ್ರಿಕ ಕಾರಣಗಳ ಕುರಿತು ಗೊಂದಲ ಏರ್ಪಟ್ಟಾಗ ಕೋಪಗೊಂಡ ಮಹಿಳಾ ಪ್ರಯಾಣಿಕರೊಬ್ಬರು ವಿಮಾನ ನಿಲ್ದಾಣದ ಗ್ರೌಂಡ್ ಸಿಬ್ಬಂದಿಯ ಬಳಿ ತೆರಳಿ ಗಲಾಟೆ ಆರಂಭಿಸಿದ್ದಾರೆ.

ನವದೆಹಲಿ: ನೀಟ್ ಸೇರಿದಂತೆ ದೇಶದ ವಿವಿಧ ಪರೀಕ್ಷಾ ಅಕ್ರಮ ಹಾಗೂ ಪೇಪರ್ ಸೋರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದ ರಾಜಕೀಯ ವಿಶ್ಲೇಷಕ ಮತ್ತು ಸೋಷಿಯಲ್ ಮೀಡಿಯಾ ಆಕ್ಟಿವಿಸ್ಟ್ ಅಭಿಜೀತ್ ದೀಪ್ಕೆ ಅವರಿಗೆ ಮಾಧ್ಯಮದವರು ಕೇಳಿದ ಒಂದು ನೇರ ಪ್ರಶ್ನೆ ಕ್ಷಣಕಾಲ ತಡವರಿಸಿದ ಘಟನೆ ನಡೆದಿದೆ. ಪ್ರಶ್ನೋತ್ತರ ಹಾಗೂ ಚರ್ಚೆಯ ವೇಳೆ ಪತ್ರಕರ್ತರೊಬ್ಬರು ಎಸೆದ ಪ್ರಶ್ನೆಗೆ ಏನು ಉತ್ತರಿಸಬೇಕೆಂದು ತಿಳಿಯದೇ ಅಭಿಜೀತ್ ದೀಪ್ಕೆ ಕೆಲ ಕ್ಷಣ ತಬ್ಬಿಬ್ಬಾದರು. ಪರೀಕ್ಷಾ ಅಕ್ರಮಗಳು ಮತ್ತು ಪೇಪರ್ ಸೋರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವರು ಮತ್ತು ಸರ್ಕಾರದ ಪ್ರಮುಖರ ರಾಜೀನಾಮೆಗೆ ಅಭಿಜೀತ್ ದೀಪ್ಕೆ ಗಟ್ಟಿಯಾಗಿ ಆಗ್ರಹಿಸುತ್ತಿದ್ದರು.

ಆನ್‌ಲೈನ್ ಪ್ರೀತಿ ಮತ್ತು ಸಾಮಾಜಿಕ ಜಾಲತಾಣಗಳ ಭ್ರಮಲೋಕದಲ್ಲಿ ಭಾವನೆಗಳಿಗಿಂತ ವಸ್ತುವಿನ ಬೆಲೆ ಹಾಗೂ ಪ್ರದರ್ಶನಕ್ಕೇ ಹೆಚ್ಚು ಬೆಲೆ ಸಿಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿ ಹೃದಯ ವಿದ್ರಾವಕ ಘಟನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ತನ್ನ ತಂದೆಯ ಔಷಧಿಗಾಗಿ ಇಟ್ಟಿದ್ದ ಸಣ್ಣ ಪ್ರಮಾಣದ ಹಣವನ್ನು ಕಷ್ಟಪಟ್ಟು ಉಳಿಸಿ, ಆನ್‌ಲೈನ್ ಪ್ರಿಯತಮೆಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಕೈಗಡಿಯಾರ ತಂದಿದ್ದ ಯುವಕನೊಬ್ಬನಿಗೆ ಆಕೆ ನೀಡಿದ ಆಘಾತಕಾರಿ ಪ್ರತಿಕ್ರಿಯೆ ಸಮಾಜಕ್ಕೆ ಕಟು ವಾಸ್ತವದ ಮುಖವನ್ನು ಪರಿಚಯಿಸಿದೆ.ಸಾಮಾನ್ಯ ಕುಟುಂಬದ ಯುವಕನೊಬ್ಬ ತಾನು ಇಷ್ಟಪಟ್ಟ ಆನ್‌ಲೈನ್ ಸ್ನೇಹಿತೆಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಲು ಆಸೆಪಟ್ಟಿದ್ದ. ಆದರೆ, ಆತನ ಬಳಿ ಹೆಚ್ಚು ಹಣವಿರಲಿಲ್ಲ.

ನವದೆಹಲಿ: ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂತರ್ ಮಂತರ್ ಮತ್ತು ದೇಶದ ಇತರ ಕಡೆಗಳಲ್ಲಿ ನಡೆದ ಪ್ರತಿಭಟನೆಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿದ್ದಾರೆ ಎಂದು ಆರೋಪಿಸುವ ಅರ್ಜಿಗಳ ವಿಚಾರಣೆಯನ್ನು ಜುಲೈ 27 ರಂದು ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ಒಪ್ಪಿಗೆ ಸೂಚಿಸಿತು. ಪ್ರತಿಭಟನಾಕಾರರ ವಿರುದ್ಧದ ಹಿಂಸಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ಎರಡು ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ಪೀಠದ ಮುಂದೆ ವಿಷಯವನ್ನು ಪ್ರಸ್ತಾಪಿಸಿದರು.

ಆಂಧ್ರಪ್ರದೇಶದಲ್ಲಿ ಗ್ರಾಮಸ್ಥರ ಸಮಯಪ್ರಜ್ಞೆ ಮತ್ತು ಜೀವದಯೆಯಿಂದಾಗಿ ದೊಡ್ಡದೊಂದು ರೈಲು ಅಪಘಾತ ಹಾಗೂ ಮೂಕಪ್ರಾಣಿಗಳ ಪ್ರಾಣಾಪಾಯ ತಪ್ಪಿದೆ. ರೈಲ್ವೆ ಹಳಿಯ ಮೇಲೆ ಗೋವುಗಳು ಮತ್ತು ಗೂಳಿಗಳು ಸಿಲುಕಿಕೊಂಡಿರುವುದನ್ನು ಕಂಡ ಸ್ಥಳೀಯರು, ತಕ್ಷಣವೇ ಚಲಿಸುತ್ತಿದ್ದ ರೈಲನ್ನು ತಡೆದು ಪ್ರಾಣಿಗಳನ್ನು ರಕ್ಷಿಸಿದ್ದಾರೆ. ಆಂಧ್ರಪ್ರದೇಶದ ರೈಲ್ವೆ ಮಾರ್ಗವೊಂದರಲ್ಲಿ ಸಾಗುತ್ತಿದ್ದ ಹಳಿಗಳ ಮೇಲೆ ಇದ್ದಕ್ಕಿದ್ದಂತೆ ದನ-ಗೂಳಿಗಳ ಹಿಂಡು ಬಂದು ಸಿಲುಕಿಕೊಂಡಿತ್ತು. ದೂರದಿಂದ ವೇಗವಾಗಿ ಬರುವ ರೈಲನ್ನು ಮತ್ತು ಹಳಿಯ ಮೇಲಿದ್ದ ಮೂಕಪ್ರಾಣಿಗಳನ್ನು ಗಮನಿಸಿದ ಸ್ಥಳೀಯರು, ತಕ್ಷಣವೇ ಎಚ್ಚೆತ್ತುಕೊಂಡಿದ್ದಾರೆ. ಸಮಯಪ್ರಜ್ಞೆ ಮೆರೆದ ಸಾರ್ವಜನಿಕರು ಕೆಂಪು ಬಟ್ಟೆ ಹಾಗೂ ಸೈನ್ ಮಾಡಿ ಚಾಲಕನಿಗೆ ಸುಳಿವು ನೀಡಿ, ಬರುವ ರೈಲನ್ನು ಸುರಕ್ಷಿತವಾಗಿ ನಿಲ್ಲಿಸುವಲ್ಲಿ ಯಶಸ್ವಿಯಾದರು.

ಹೈದರಾಬಾದ್‌: ‌ತೆಲುಗು ಚಿತ್ರರಂಗದ ಹಿರಿಯ ನಟ ಮತ್ತು ಶಾಸಕ ನಂದಮೂರಿ ಬಾಲಕೃಷ್ಣ ಅವರಿಗೆ ಇತ್ತೀಚೆಗೆ ತಮ್ಮ ಮುಂಬರುವ ಚಿತ್ರದ ಸಾಹಸ ಸನ್ನಿವೇಶದ ಚಿತ್ರೀಕರಣದ ವೇಳೆ ಸಣ್ಣಪುಟ್ಟ ಗಾಯಗಳಾಗಿದೆ. ಇದೀಗ ಬಾಲಯ್ಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ.ಆಂಧ್ರಪ್ರದೇಶದ ಕಾಕಿನಾಡ ಪೋರ್ಟ್ ಬಳಿ ಬಾಲಯ್ಯ ನಟನೆಯ ಮುಂಬರುವ ಹೆಸರಿಡದ ಎನ್‌ಬಿಕೆ 111 ಚಿತ್ರದ ಸಾಹಸ ಚಿತ್ರೀಕರಣ ನಡೆದಿತ್ತು. ಈ ವೇಳೆ ಬಾಲಯ್ಯಗೆ ಸಣ್ಣ ಅಪಘಾತವಾಗಿದೆ. ಈ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ 66 ವರ್ಷದ ಬಾಲಯ್ಯ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಸಿನಿಮಾ ಹಾಗೂ ರಾಜಕೀಯದಲ್ಲಿ ಬ್ಯುಸಿ ಇರೋ ಬಾಲಯ್ಯ ಹೆಸರಿಡದ ಚಿತ್ರ ಗೋಪಿಚಂದ್ ಮಾನಿನೇನಿ ನಿರ್ದೇಶನದ ಸಿನಿಮಾದಲ್ಲಿ ತೊಡಗಿದ್ದರು. ಚಿತ್ರೀಕರಣ ಪ್ರಾರಂಭವಾಗಿ ತಿಂಗಳುಗಳೇ ಉರುಳಿದೆ.

ನವದೆಹಲಿ: ಸಂಸತ್ ಮುಂಗಾರು ಅಧಿವೇಶನದ 5ನೇ ದಿನವೂ ಯಾವುದೇ ಮಹತ್ವದ ಕಲಾಪ ನಡೆಯದೆ ಲೋಕಸಭೆಯನ್ನು ಸೋಮವಾರದವರೆಗೆ ಮುಂದೂಡಲಾಗಿದೆ. ಇದೇ ವೇಳೆ ರಾಜ್ಯಸಭೆ ಕಲಾಪವನ್ನೂ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಬೇಕು ಎಂದು ಲೋಕಸಭೆಯಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ ಶುಕ್ರವಾರವೂ ಮುಂದುವರಿಸಿದವು. ಈ ನಡುವೆ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಲೋಕಸಭೆಯಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಪ್ರತಿಪಕ್ಷಗಳಿಗೆ ಮನವಿ ಮಾಡಿದರು.ಪ್ರಧಾನಿ ಮೋದಿ ಅವರು ಈಗಾಗಲೇ ಈ ವಿಚಾರದಲ್ಲಿ ದೇಶಕ್ಕೆ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಮತ್ತೊಮ್ಮೆ ಚರ್ಚಿಸಿ, ಸದನದಲ್ಲಿ ಚರ್ಚೆಗೆ ಸಹಕರಿಸುವಂತೆ ಮನವಿ ಮಾಡಿರುವುದಾಗಿ ರಿಜಿಜು ಹೇಳಿದರು.

ಬೆಂಗಳೂರು: ಸೂಕ್ತ ವ್ಯಕ್ತಿಗೆ ಸೂಕ್ತ ಸ್ಥಾನ ಕೊಡುವುದು ಸರಕಾರದ ಬದ್ಧತೆಯಾಗಿರಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.ಅವರು ಇಂದು ಜಿ.ಕೆ.ವಿ.ಕೆ. ಯಲ್ಲಿ ನಡೆಯುವ ಕೃಷಿ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಇಲ್ಲಿವರೆಗೆ ವೈದ್ಯಕೀಯ, ಎಂಜಿನಿಯರಿಂಗ್ ಸೀಟುಗಳು ಮಾರಾಟವಾಗುತ್ತಿದ್ದವು. ಈಗ ರೈತ ಮಕ್ಕಳ ಸೀಟುಗಳೂ ಮಾರಾಟವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಸರಕಾರವು ನಿಮಗೆ ದ್ರೋಹ ಮಾಡುವುದನ್ನು ಯಾರಿಂದಲೂ ಸಹಿಸಲಸಾಧ್ಯ ಎಂದು ತಿಳಿಸಿದರು.ಸರಕಾರ ಅತಿ ಶೀಘ್ರವಾಗಿ ಧಾವಿಸಿ ಬಂದು ನಿಮ್ಮ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು. ಸರಕಾರ ಬೆಂಗಳೂರಲ್ಲಿ ಇಲ್ಲದಿರುವುದು ವಿಪರ್ಯಾಸ ಎಂದು ಟೀಕಿಸಿದರು.

ನೀಟ್ ಪೇಪರ್ ಸೋರಿಕೆ ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ತೀವ್ರ ವೈರಲ್ ಆಗುತ್ತಿದೆ. ದೆಹಲಿ ಪೊಲೀಸರು ಪ್ರತಿಭಟನಾ ಸ್ಥಳದಲ್ಲಿ ಅತೀ ಸುಧಾರಿತ 'ಫೇಸಿಯಲ್ ರೆಕಗ್ನಿಷನ್ ಸಿಸ್ಟಮ್' ತಂತ್ರಜ್ಞಾನ ಹೊಂದಿರುವ ವ್ಯಾನ್ ಒಂದನ್ನು ನಿಯೋಜಿಸಿದ್ದು, ಅದು ಕ್ಯಾಮೆರಾ ಕಣ್ಣಿಗೆ ಬೀಳುವ ಪ್ರತಿಯೊಬ್ಬ ವ್ಯಕ್ತಿಯ ಹೆಸರು, ವಿಳಾಸ ಹಾಗೂ ಹಿನ್ನೆಲೆಯನ್ನು ಪರದೆಯ ಮೇಲೆ ಕ್ಷಣಾರ್ಧದಲ್ಲಿ ಪ್ರದರ್ಶಿಸುತ್ತಿದೆ ಎಂದು ಈ ವಿಡಿಯೋದಲ್ಲಿ ಪ್ರತಿಪಾದಿಸಲಾಗಿದೆ. ಸಾಮಾಜಿಕ ಜಾಲತಾಣ 'X' ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ಜಂತರ್ ಮಂತರ್ ಬಳಿ ನಿಲ್ಲಿಸಲಾದ ಪೊಲೀಸ್ ವಾಹನವೊಂದರ ಒಳಗಿನ ಡಿಜಿಟಲ್ ಪರದೆಯನ್ನು ತೋರಿಸಲಾಗಿದೆ.

ಬಾಲಿವುಡ್‌ನ ಖ್ಯಾತ ನಟಿ ಕಾಜೋಲ್ ಅವರ ವಿಡಿಯೋವೊಂದು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಟಿಯನ್ನು ಕರೆಯುವಾಗ ಅಥವಾ ಅವರ ಗಮನ ಸೆಳೆಯುವಾಗ ವ್ಯಕ್ತಿಯೊಬ್ಬರ ಕೈ ಆಕಸ್ಮಿಕವಾಗಿ ಸ್ಪರ್ಶಿಸಿದ್ದು, ಈ ಘಟನೆಯ ತುಣುಕು ವೈರಲ್ ಆಗಿದೆ. ಜನನಿಬಿಡ ಕಾರ್ಯಕ್ರಮವೊಂದರಲ್ಲಿ ನಟಿ ಕಾಜೋಲ್ ಭಾಗವಹಿಸಿದ್ದಾಗ ಈ ಘಟನೆ ಸಂಭವಿಸಿದೆ. ಕಾಜೋಲ್ ಅವರನ್ನು ಕರೆಯಲು ಅಥವಾ ಅವರ ಗಮನ ಸೆಳೆಯಲು ಯತ್ನಿಸಿದ ವ್ಯಕ್ತಿಯೊಬ್ಬರ ಕೈ ಆಕಸ್ಮಿಕವಾಗಿ ಅವರ ದೇಹಕ್ಕೆ ತಾಗಿದೆ. ಈ ಅನಿರೀಕ್ಷಿತ ಸ್ಪರ್ಶದಿಂದ ನಟಿ ಕ್ಷಣಕಾಲ ಆಶ್ಚರ್ಯಚಕಿತರಾಗಿದ್ದು, ಮುಜುಗರಕ್ಕೊಳಗಾದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ತಕ್ಷಣವೇ ಸುತ್ತಮುತ್ತಲಿದ್ದ ಭದ್ರತಾ ಸಿಬ್ಬಂದಿ ಹಾಗೂ ಜನರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಇಂದು ಶುಕ್ರವಾರವಾಗಿದ್ದು ದೇವಿಯ ಆರಾಧನೆಗೆ ಸೂಕ್ತವಾದ ದಿನವಾಗಿದೆ. ಇಂದು ಪದ್ಮಾವತಿ ನವರತ್ನ ಮಾಲಿಕಾ ಸ್ತುತಿಯನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.ಶ್ರೀಮಾನ್ ಯಸ್ಯಾಃ ಪ್ರಿಯಸ್ಸನ್ ಸಕಲಮಪಿ ಜಗಜ್ಜಂಗಮಸ್ಥಾವರಾದ್ಯಂಸ್ವರ್ಭೂಪಾತಾಲಭೇದಂ ವಿವಿಧವಿಧಮಹಾಶಿಲ್ಪಸಾಮರ್ಥ್ಯಸಿದ್ಧಮ್ ।ರಂಜನ್ ಬ್ರಹ್ಮಾಮರೇಂದ್ರೈಸ್ತ್ರಿಭುವನಜನಕಃ ಸ್ತೂಯತೇ ಭೂರಿಶೋ ಯಃಸಾ ವಿಷ್ಣೋರೇಕಪತ್ನೀ ತ್ರಿಭುವನಜನನೀ ಪಾತು ಪದ್ಮಾವತೀ ನಃ ॥ 1 ॥ ಶ್ರೀಶೃಂಗಾರೈಕದೇವೀಂ ವಿಧಿಮುಖಸುಮನಃಕೋಟಿಕೋಟೀರಜಾಗ್ರ-ದ್ರತ್ನಜ್ಯೋತ್ಸ್ನಾಪ್ರಸಾರಪ್ರಕಟಿತಚರಣಾಂಭೋಜನೀರಾಜಿತಾರ್ಚಾಮ್ ।ಗೀರ್ವಾಣಸ್ತ್ರೈಣವಾಣೀಪರಿಫಣಿತಮಹಾಕೀರ್ತಿಸೌಭಾಗ್ಯಭಾಗ್ಯಾಂಹೇಲಾನಿರ್ದಗ್ಧದೈನ್ಯಶ್ರಮವಿಷಮಮಹಾರಣ್ಯಗಣ್ಯಾಂ ನಮಾಮಿ ॥ 2 ॥ ವಿದ್ಯುತ್ಕೋಟಿಪ್ರಕಾಶಾಂ ವಿವಿಧಮಣಿಗಣೋನ್ನಿದ್ರಸುಸ್ನಿಗ್ಧಶೋಭಾ-ಸಂಪತ್ಸಂಪೂರ್ಣಹಾರಾದ್ಯಭಿನವವಿಭವಾಲಂಕ್ರಿಯೋಲ್ಲಾಸಿಕಂಠಾಮ್ ।ಆದ್ಯಾಂ ವಿದ್ಯೋತಮಾನಸ್ಮಿತರುಚಿರಚಿತಾನಲ್ಪಚಂದ್ರಪ್ರಕಾಶಾಂಪದ್ಮಾಂ ಪದ್ಮಾಯತಾಕ್ಷೀಂ ಪದನಲಿನನಮತ್ಪದ್ಮಸದ್ಮಾಂ ನಮಾಮಿ ॥ 3 ॥