Shorts

ನಿಮ್ಮ ಮನೆಯಲ್ಲಿ ಸರಣಿ ಕಳ್ಳತನಗಳಾಗುತ್ತಿದ್ದರೆ ನೀವೇನು ಮಾಡುತ್ತೀರಿ? ಸಿಸಿಟಿವಿ ಹಾಕಿಸುತ್ತೀರಿ ಅಥವಾ ಪೊಲೀಸರಿಗೆ ದೂರು ನೀಡುತ್ತೀರಿ. ಆದರೆ ಇಂಡೋನೇಷ್ಯಾದಲ್ಲೊಬ್ಬ ಮನೆ ಮಾಲೀಕ ತನ್ನ ನೆರೆಹೊರೆಯವರೊಂದಿಗೆ ಸೇರಿ ಕಳ್ಳರಿಗೆ ಕಲಿಸಿದ ಪಾಠ ಈಗ ಜಗತ್ತಿನಾದ್ಯಂತ ವೈರಲ್ ಆಗಿದೆ. ಕಳ್ಳತನ ಮಾಡಲು ಬಂದ ನಾಲ್ವರು ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದು, ಅವರಿಗೆ ಕಾರ್ಟೂನ್ ಪಾತ್ರಗಳಾದ 'ಟೆಲಿಟಬ್ಬೀಸ್' ವೇಷ ತೊಡಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ! ಇಂಡೋನೇಷ್ಯಾದ ಈ ನಿರ್ದಿಷ್ಟ ಮನೆಯಲ್ಲಿ ಸತತವಾಗಿ ಕಳ್ಳತನಗಳು ನಡೆಯುತ್ತಿದ್ದವು. ಇದರಿಂದ ತೀವ್ರ ಬೇಸತ್ತಿದ್ದ ಮನೆ ಮಾಲೀಕ, ಕಳ್ಳರನ್ನು ಹೇಗಾದರೂ ಮಾಡಿ ಹಿಡಿಯಲೇಬೇಕೆಂದು ನೆರೆಹೊರೆಯವರನ್ನು ಒಟ್ಟುಗೂಡಿಸಿ ರಾತ್ರಿಯ ವೇಳೆ ರಹಸ್ಯ ಕಾರ್ಯಾಚರಣೆ ನಡೆಸಲು ಯೋಜನೆ ರೂಪಿಸಿದ್ದರು.

ಬೆಂಗಳೂರು: ಪಡೆದುಕೊಂಡ ಮೇಲೆ ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ ಎಂದು ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ದರ್ಶನ್ ಜೊತೆಗೆ ಆಪ್ತರಾಗಿದ್ದ ಆ ಒಬ್ಬ ನಟನೊಂದಿಗೆ ವೈಮನಸ್ಯವಾಗಿದೆ ಎಂಬ ಗುಸು ಗುಸು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಎರಡೂ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಈ ನಡುವೆ ವಿಜಯಲಕ್ಷ್ಮಿ ಇನ್ ಸ್ಟಾಗ್ರಾಂ ಸ್ಟೋರಿಯೊಂದು ಗಮನ ಸೆಳೆಯುತ್ತಿದೆ. ವಿಜಯಲಕ್ಷ್ಮಿ ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ಪತಿ, ಮಗನ ಬಗ್ಗೆ ಆಗಾಗ ಪೋಸ್ಟ್ ಹಂಚಿಕೊಳ್ಳುತ್ತಿರುತ್ತಾರೆ. ತಮಗೆ ನೋವಾದರೂ ಅದನ್ನು ಇನ್ ಸ್ಟಾಗ್ರಾಂ ಪೋಸ್ಟ್ ಮೂಲಕ ಸಂದೇಶ ಬರೆಯುವ ಮೂಲಕ ಹಂಚಿಕೊಳ್ಳುತ್ತಾರೆ.

ಮೈಸೂರು: ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ನಂತರ ಬಹಳ ಆತುರಾತುರವಾಗಿ ಬಿಡದಿ ಟೌನ್‍ಶಿಪ್ ವಿಚಾರದಲ್ಲಿ ರೈತರ ಮೇಲೆ ದಬ್ಬಾಳಿಕೆ ಮಾಡುವಂಥ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರಿಸಿದರು. ನಾನು, ನಮ್ಮ ವಿಪಕ್ಷ ನಾಯಕರು ಸ್ಥಳಕ್ಕೆ ಭೇಟಿ ಕೊಟ್ಟಿದ್ದೇವೆ. ಒಂದು ಕಡೆ ಸರಕಾರವು ಶೇ 80ರಷ್ಟು ರೈತರು ಬಿಡದಿ ಟೌನ್‍ಶಿಪ್‍ಗೆ ಅನುಮತಿ ಕೊಟ್ಟಿದ್ದಾರೆಂದು ಹೇಳುತ್ತಿದೆ. ಆದರೆ, ವಾಸ್ತವಿಕವಾಗಿ ಶೇ 70-80 ರೈತರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೃಷಿ ಚಟುವಟಿಕೆಗೆ ಪೂರಕವಾದ ಜಮೀನನ್ನು ಕಸಿದುಕೊಳ್ಳಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದ ವೇಳೆ ಯುವ ಕ್ರಿಕೆಟ್ ಸಂವೇದನೆ ವೈಭವ್ ಸೂರ್ಯವಂಶಿ ಅವರ ಕ್ರೇಜ್ ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಇನ್ನು ಅವರಿಗೆ ಅಂತರರಾಷ್ಟ್ರೀಯ ಪಂದ್ಯದಲ್ಲಿ ಪದಾರ್ಪಣೆ ಮಾಡಲು ಅವಕಾಶ ನೀಡದೇ ನಿರ್ಲಕ್ಷಿಸುತ್ತಿರಬಹುದು, ಆದರೆ ಕ್ರಿಕೆಟ್ ಅಭಿಮಾನಿಗಳು ಮಾತ್ರ ಅವರನ್ನು ಆಗಲೇ ಒಬ್ಬ 'ಸೂಪರ್‌ಸ್ಟಾರ್' ಆಗಿ ಆಚರಿಸುತ್ತಿದ್ದಾರೆ.ಪಂದ್ಯದ ಆರಂಭಕ್ಕೂ ಮುನ್ನ ವೈಭವ್ ಸೂರ್ಯವಂಶಿ ಅಭ್ಯಾಸಕ್ಕಾಗಿ ಮೈದಾನಕ್ಕೆ ಪ್ರವೇಶಿಸುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಭವ್ಯವಾಗಿ ಸ್ವಾಗತಿಸಿದರು. ಕೇವಲ ಸ್ವಾಗತವಷ್ಟೇ ಅಲ್ಲದೆ, ಈ ಯುವ ಆಟಗಾರನನ್ನು ಹತ್ತಿರದಿಂದ ನೋಡಲು, ಅವರೊಂದಿಗೆ ಸೆಲ್ಫಿ ಹಾಗೂ ವಿಡಿಯೋಗಳನ್ನು ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.

ಇಂದು ಗುರುವಾರವಾಗಿದ್ದು ವಿವಾಹಾದಿ ಅಡ್ಡಿ ಆತಂಕಗಳ ನಿವಾರಣೆಗೆ ಶ್ರೀ ರಾಧಾ ಕೃಪಾಕಟಾಕ್ಷ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.ಮುನೀಂದ್ರ–ವೃಂದ–ವಂದಿತೇ ತ್ರಿಲೋಕ–ಶೋಕ–ಹಾರಿಣಿಪ್ರಸನ್ನ-ವಕ್ತ್ರ-ಪಣ್ಕಜೇ ನಿಕುಂಜ-ಭೂ-ವಿಲಾಸಿನಿವ್ರಜೇಂದ್ರ–ಭಾನು–ನಂದಿನಿ ವ್ರಜೇಂದ್ರ–ಸೂನು–ಸಂಗತೇಕದಾ ಕರಿಷ್ಯಸೀಹ ಮಾಂ ಕೃಪಾಕಟಾಕ್ಷ–ಭಾಜನಮ್ ॥1॥ ಅಶೋಕ–ವೃಕ್ಷ–ವಲ್ಲರೀ ವಿತಾನ–ಮಂಡಪ–ಸ್ಥಿತೇಪ್ರವಾಲಬಾಲ–ಪಲ್ಲವ ಪ್ರಭಾರುಣಾಂಘ್ರಿ–ಕೋಮಲೇ ।ವರಾಭಯಸ್ಫುರತ್ಕರೇ ಪ್ರಭೂತಸಂಪದಾಲಯೇಕದಾ ಕರಿಷ್ಯಸೀಹ ಮಾಂ ಕೃಪಾಕಟಾಕ್ಷ–ಭಾಜನಮ್ ॥2॥ ಅನಂಗ-ರಣ್ಗ ಮಂಗಲ-ಪ್ರಸಂಗ-ಭಂಗುರ-ಭ್ರುವಾಂಸವಿಭ್ರಮಂ ಸಸಂಭ್ರಮಂ ದೃಗಂತ–ಬಾಣಪಾತನೈಃ ।ನಿರಂತರಂ ವಶೀಕೃತಪ್ರತೀತನಂದನಂದನೇಕದಾ ಕರಿಷ್ಯಸೀಹ ಮಾಂ ಕೃಪಾಕಟಾಕ್ಷ–ಭಾಜನಮ್ ॥3॥ ತಡಿತ್–ಸುವರ್ಣ–ಚಂಪಕ –ಪ್ರದೀಪ್ತ–ಗೌರ–ವಿಗ್ರಹೇಮುಖ–ಪ್ರಭಾ–ಪರಾಸ್ತ–ಕೋಟಿ–ಶಾರದೇಂದುಮಂಡಲೇ ।ವಿಚಿತ್ರ-ಚಿತ್ರ ಸಂಚರಚ್ಚಕೋರ-ಶಾವ-ಲೋಚನೇಕದಾ ಕರಿಷ್ಯಸೀಹ ಮಾಂ ಕೃಪಾಕಟಾಕ್ಷ–ಭಾಜನಮ್ ॥4॥ಮದೋನ್ಮದಾತಿ–ಯೌವನೇ ಪ್ರಮೋದ–ಮಾನ–ಮಂಡಿತೇಪ್ರಿಯಾನುರಾಗ–ರಂಜಿತೇ ಕಲಾ–ವಿಲಾಸ – ಪಂಡಿತೇ ।ಅನನ್ಯಧನ್ಯ–ಕುಂಜರಾಜ್ಯ–ಕಾಮಕೇಲಿ–ಕೋವಿದೇಕದಾ ಕರಿಷ್ಯಸೀಹ ಮಾಂ ಕೃಪಾಕಟಾಕ್ಷ–ಭಾಜನಮ್ ॥5॥