Publish Date: Sat, 07 Nov 2020 (09:29 IST)
Updated Date: Sat, 07 Nov 2020 (09:31 IST)
ದುಬೈ: ಐಪಿಎಲ್ 13 ರಿಂದ ಹೊರಬಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಸೋಲಿನ ಬಳಿಕ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿ ಸಂದೇಶ ನೀಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆರ್ ಸಿಬಿ ಗ್ರೂಪ್ ಫೋಟೋ ಪ್ರಕಟಿಸಿದ ಕೊಹ್ಲಿ ಇಷ್ಟು ದಿನ ಬೆಂಬಲಿಸಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದೇವೆ. ತಂಡವಾಗಿ ಇದು ಒಂದು ಅದ್ಭುತ ಪಯಣವಾಗಿತ್ತು. ಎಲ್ಲವೂ ನಾವು ಅಂದುಕೊಂಡಂತೆ ನಡೆಯಲಿಲ್ಲ. ಆದರೆ ನಾವು ಹೋರಾಡಿದ ರೀತಿಗೆ ಹೆಮ್ಮೆಯಿದೆ. ನಮ್ಮನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದ. ನಿಮ್ಮ ಪ್ರೀತಿ ನಮ್ಮನ್ನು ಪ್ರಬಲರನ್ನಾಗಿ ಮಾಡಿದೆ. ಸದ್ಯದಲ್ಲೇ ಮತ್ತೆ ಭೇಟಿಯಾಗೋಣ ಎಂದು ಬರೆದುಕೊಂಡಿದ್ದಾರೆ.