Publish Date: Wed, 04 Nov 2020 (11:11 IST)
Updated Date: Wed, 04 Nov 2020 (11:13 IST)
ದುಬೈ: ಐಪಿಎಲ್ 13 ರಲ್ಲಿ ಯಾಕೋ ಚೆನ್ನೈ ಅದೃಷ್ಟ ಆರಂಭದಿಂದಲೂ ಕೈಕೊಟ್ಟಿತ್ತು. ಕಳಪೆ ಪ್ರದರ್ಶನದೊಂದಿಗೆ ಐಪಿಎಲ್ 13 ರ ಯಾತ್ರೆ ಮುಗಿಸಿರುವ ಸಿಎಸ್ ಕೆ ಹುಡುಗರು ತವರಿಗೆ ಮರಳಿದ್ದಾರೆ.
ಐಪಿಎಲ್ 13 ರಲ್ಲಿ ಸಿಎಸ್ ಕೆ ಮೊನ್ನೆ ಪಂಜಾಬ್ ವಿರುದ್ಧ ಕೊನೆಯ ಪಂದ್ಯವಾಡಿತ್ತು. ಇದೀಗ ಪ್ಲೇ ಆಫ್ ಹಂತಕ್ಕೆ ತೇರ್ಗಡೆಯಾಗದ ಹಿನ್ನಲೆಯಲ್ಲಿ ಕ್ರಿಕೆಟಿಗರು ವಿಶೇಷ ವಿಮಾನದ ಮೂಲಕ ಭಾರತಕ್ಕೆ ಮರಳಿದ್ದಾರೆ. ಸಿಎಸ್ ಕೆ ಕ್ರಿಕೆಟಿಗ ಕರಣ್ ಶರ್ಮಾ ತವರಿಗೆ ಮರಳುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.