Webdunia - Bharat's app for daily news and videos

Install App

ನಿಫಾ ವೈರಸ್ ಹರಡದಂತೆ ತಡೆಯಲು ಈ ರೀತಿ ಎಚ್ಚರಿಕೆಯಿಂದಿರಿ

Webdunia
ಶುಕ್ರವಾರ, 25 ಮೇ 2018 (08:50 IST)
ಬೆಂಗಳೂರು: ನಿಫಾ ವೈರಸ್ ಕೇರಳದಲ್ಲಿ ಈಗಾಗಲೇ ಒಂದೇ ಕುಟುಂಬದ ನಾಲ್ವರನ್ನು ಬಲಿತೆಗೆದುಕೊಂಡಿದೆ. ಈ ಮಾರಕ ರೋಗ ಹರಡದಂತೆ ತಡೆಯಲು ರಾಜ್ಯದಲ್ಲೂ ಎಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ.

ಬಾವಲಿ ತಿನ್ನುವ ಹಣ್ಣುಗಳು, ಆಹಾರ ವಸ್ತುಗಳನ್ನು ನಾವು ಸೇವಿಸುವುದರಿಂದ ಈ ಖಾಯಿಲೆ ಹರಡಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.

ಹೀಗಾಗಿ ಬಾವಲಿ, ಪಕ್ಷಿಗಳು ಅರ್ಧ ಕಚ್ಚಿದ, ಕೆರೆದ ಹಣ್ಣುಗಳನ್ನು ಸೇವಿಸಬೇಡಿ. ಆದಷ್ಟು ಸಂಸ್ಕರಿತ ಹಣ್ಣುಗಳನ್ನೇ ಸೇವಿಸುವುದು ಉತ್ತಮ. ಮಾವಿನ ಹಣ್ಣು, ಸೀಬೇಕಾಯಿ, ಹಲಸಿನ ಹಣ್ಣು ಸೇವಿಸುವಾಗ  ವಿಶೇಷವಾಗಿ ಎಚ್ಚರಿಕೆಯಿರಲಿ. ಬಾವಲಿ ಇರುವ ಸ್ಥಳದಲ್ಲಿ ಆಹಾರ, ನೀರು ಸೇವಿಸದಿರುವುದೇ ಉತ್ತಮ.

ಸೋಂಕು ಪೀಡಿತ ಪ್ರದೇಶಕ್ಕೆ ಸದ್ಯಕ್ಕೆ ತೆರಳದಿರುವುದೇ ಉತ್ತಮ. ಅನಿವಾರ್ಯವಾಗಿ ತೆರಳುವುದಿದ್ದರೆ ಗುಣಮಟ್ಟದ ಮಾಸ್ಕ್ ಧರಿಸಿ. ಅಂತಹ ಸ್ಥಳಕ್ಕೆ ಹೋದರೆ ಮರಳಿದ ಮೇಲೆ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆದುಕೊಳ್ಳಿ.  ಹಾಗೆಯೇ ಸರಿಯಾದ ಸೋಪ್ ಬಳಸಿ ಸ್ನಾನ ಮಾಡಿ.

ಹಣ್ಣು ಮತ್ತು ತರಕಾರಿಗಳನ್ನು ಸರಿಯಾಗಿ ಉಪ್ಪು ನೀರಿನಲ್ಲಿ ಕೆಲ ಹೊತ್ತು ನೆನೆಸಿ ತೊಳೆದು ನಂತರವೇ ಸೇವಿಸಿ. ಗಾಯವಾದ, ಕೆರೆತದ ಕಲೆಯಿರುವ ಹಣ್ಣು,ಗಳನ್ನು ಸೇವಿಸದಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಮುಂದಿನ ಸುದ್ದಿ
Show comments