ಎನ್ ಸಿಎ ಮುಖ್ಯಸ್ಥರ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ ಬಿಸಿಸಿಐ: ರಾಹುಲ್ ದ್ರಾವಿಡ್ ಗೆ ದೊಡ್ಡ ಹೊಣೆ?

Webdunia
ಬುಧವಾರ, 11 ಆಗಸ್ಟ್ 2021 (08:45 IST)
ಮುಂಬೈ: ಎನ್ ಸಿಎ ಮುಖ್ಯಸ್ಥ ಸ್ಥಾನಕ್ಕೆ ಬಿಸಿಸಿಐ ಹೊಸದಾಗಿ ಅರ್ಜಿ ಆಹ್ವಾನಿಸಿದೆ. ಇದರಿಂದಾಗಿ ಹಾಲಿ ಅಧ್ಯಕ್ಷ ರಾಹುಲ್ ದ್ರಾವಿಡ್ ರನ್ನು ಆ ಸ್ಥಾನದಿಂದ ತೆರವುಗೊಳಿಸಿ ದೊಡ್ಡ ಹೊಣೆ ನೀಡಲು ತಯಾರಿ ನಡೆದಿದೆ ಎನ್ನಲಾಗಿದೆ.


ಇತ್ತೀಚೆಗೆ ದ್ರಾವಿಡ್ ರನ್ನು ಟೀಂ ಇಂಡಿಯಾದ ಶ್ರೀಲಂಕಾ ಸರಣಿಗೆ ತಾತ್ಕಾಲಿಕವಾಗಿ ಕೋಚ್ ಆಗಿ ನೇಮಿಸಲಾಗಿತ್ತು. ಆ ವೇಳೆ ದ್ರಾವಿಡ್ ಟೀಂ ಇಂಡಿಯಾದ ಖಾಯಂ ಕೋಚ್ ಆಗಬೇಕೆಂದು ಕೂಗು ಜೋರಾಗಿತ್ತು.

ಇನ್ನೇನು ಖಾಯಂ ಕೋಚ್ ರವಿಶಾಸ್ತ್ರಿ ಗುತ್ತಿಗೆ ಅವಧಿ ಮುಗಿಯಲಿದ್ದು, ಅದಾದ ಬಳಿಕ ದ್ರಾವಿಡ್ ರನ್ನೇ ಆ ಸ್ಥಾನಕ್ಕೆ ನೇಮಿಸಲು ಈ ತಯಾರಿ ನಡೆದಿರಬಹುದು. ಅಥವಾ ಮುಂದಿನ ದಿನಗಳಲ್ಲಿ ಬಿಡುವಿಲ್ಲದ ಕ್ರಿಕೆಟ್ ಗಮನದಲ್ಲಿಟ್ಟುಕೊಂಡು ಎರಡು ತಂಡಗಳನ್ನು ಏಕಕಾಲಕ್ಕೆ ಆಡಿಸುವ ಯೋಚನೆ ಬಿಸಿಸಿಐಗಿದೆ. ಇಂತಹ ಸನ್ನಿವೇಶದಲ್ಲಿ ಒಂದು ತಂಡಕ್ಕೆ ದ್ರಾವಿಡ್ ರನ್ನೇ ಕೋಚ್ ಆಗಿ ಮಾಡುವ ಯೋಚನೆಯೂ ಬಿಸಿಸಿಐಗಿರಬಹುದು. ಹೀಗಾಗಿಯೇ ಎನ್ ಸಿಎಗೆ ಹೊಸ ಅಧ‍್ಯಕ್ಷನ ಹುಡುಕಾಟ ನಡೆದಿದೆ ಎನ್ನಲಾಗಿದೆ. 2019 ರಲ್ಲಿ ಎ ತಂಡದ ಕೋಚ್ ಆಗಿದ್ದ ದ್ರಾವಿಡ್ ಎನ್ ಸಿಎ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

T20 WC: ಟೀಂ ಇಂಡಿಯಾ ಸೋಲಿಗೆ ಗಂಭೀರ್, ಸೂರ್ಯ ಮಾಡಿದ ಈ ಮೂರು ತಪ್ಪುಗಳೇ ಕಾರಣ

T20 WC: ರೋಹಿತ್ ಶರ್ಮಾರನ್ನು ಕಾಪಿ ಮಾಡಿ ಗತ್ತು ತೋರಿಸಿದ ಸೂರ್ಯಕುಮಾರ್ ಯಾದವ್ ಫುಲ್ ಟ್ರೋಲ್

T20 WC: ಟೀಂ ಇಂಡಿಯಾಗೆ ಸೆಮಿಫೈನಲ್ ತಲುಪಲು ಏನು ಮಾಡಬೇಕು

ಲವರ್‌ಗೆ ಅದ್ಧೂರಿ ಪಾರ್ಟಿ ಕೊಟ್ಟ ಬೆನ್ನಲ್ಲೇ ಮಗ ಅಗಸ್ತ್ಯನಿಗೆ ಸರ್ಪ್ರೈಸ್ ಕೊಟ್ಟ ಹಾರ್ದಿಕ್‌, ಮಾಜಿ ಪತ್ನಿಯೂ ಭಾಗಿ

ದೀರ್ಘಕಾಲದ ಗೆಳತಿ ಸೋಫಿ ಶೈನ್ ಜೊತೆ ಎರಡನೇ ಇನಿಂಗ್ಸ್‌ ಆರಂಭಿಸಿದ ಕ್ರಿಕೆಟಿಗ ಶಿಖರ್‌ ಧವನ್‌

ಮುಂದಿನ ಸುದ್ದಿ
Show comments