Publish Date: Mon, 27 Apr 2020 (09:05 IST)
Updated Date: Mon, 27 Apr 2020 (09:06 IST)
ಬೆಂಗಳೂರು: ಮಾರುಕಟ್ಟೆಯಿಂದ ತರಕಾರಿ, ಹಣ್ಣು ತರುವಾಗ ಸರಿಯಾಗಿ ಪರಿಶೀಲಿಸಿ ತರುವುದು ಈಗ ಅತೀ ಅನಿವಾರ್ಯ. ಇಲ್ಲವಾದರೆ ಕೊರೋನಾ ರೂಪದಲ್ಲಿ ಮಹಾಮಾರಿ ನಿಮ್ಮ ಬೆನ್ನ ಹಿಂದೆ ಬೀಳಬಹುದು.
ಗಾಯವಾದ, ಒಡೆದ ತರಕಾರಿ, ಹಣ್ಣುಗಳನ್ನು ಬಳಸಲೇಬೇಡಿ. ಕೆಲವೊಮ್ಮೆ ಹಣ್ಣು ಅಥವಾ ತರಕಾರಿ ಮೇಲೆ ಪರಚಿದ ಗುರುತುಗಳೂ ಇರುತ್ತವೆ. ಇವು ಬಾವಲಿ ಅಥವಾ ಇನ್ನಿತರ ಪ್ರಾಣಿಗಳು ಮಾಡಿದ ಗಾಯವಾಗಿರಲೂ ಬಹುದು.
ಇಂದಿನ ಕೊರೋನಾ ದಿನಗಳಲ್ಲಿ ಇಂತಹ ತರಕಾರಿಗಳನ್ನು ಸೇವಿಸುವುದು ಅತೀ ಅಪಾಯಕಾರಿ. ಆದಷ್ಟು ಮನೆಗೆ ಬಂದ ತರಕಾರಿಗಳನ್ನು ಒಂದು ಗಂಟೆ ಕಾಲವಾದರೂ ಉಪ್ಪು ನೀರಿನಲ್ಲಿ ಮುಳುಗಿಸಿ ಚೆನ್ನಾಗಿ ತೊಳೆದೇ ಬಳಸಿ, ಆರೋಗ್ಯ ಕಾಪಾಡಿಕೊಳ್ಳಿ.