Publish Date: Sun, 26 Apr 2020 (09:10 IST)
Updated Date: Sun, 26 Apr 2020 (09:12 IST)
ಮುಂಬೈ: ಕೊರೋನಾ ತಡೆಯಲು ಹಣ ಸಂಗ್ರಹಣೆಗೆ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ನಡೆಯಲಿ ಎಂದ ಪಾಕ್ ಕ್ರಿಕೆಟಿಗ ಶೊಯೇಬ್ ಅಖ್ತರ್ ಗೆ ಕಪಿಲ್ ದೇವ್ ಹೊಸ ಸಲಹೆ ಕೊಟ್ಟಿದ್ದಾರೆ.
ಹಣ ಬೇಕಿದ್ದರೆ ಗಡಿಯಲ್ಲಿ ಈಗ ನಡೆಸಲಾಗುತ್ತಿರುವ ಚಟುವಟಿಕೆಗಳನ್ನು ನಿಲ್ಲಿಸಿ. ಶಾಲೆ, ಕಾಲೇಜು, ಆಸ್ಪತ್ರೆಗಳನ್ನು ತೆರೆಯಲು ಬಳಸಿ ಎಂದು ಕಪಿಲ್ ದೇವ್ ಹೇಳಿದ್ದಾರೆ.
‘ಭಾರತ-ಪಾಕ್ ನಡುವೆ ಕ್ರಿಕೆಟ್ ನಡೆಯಲಿ ಎಂದು ಭಾವುಕರಾಗಿ ಹೇಳುವುದು ಸುಲಭ. ಆದರೆ ಹಣ ಸಂಗ್ರಹಣೆಗೆ ಇದೊಂದೇ ದಾರಿಯಲ್ಲ. ಮೊದಲು ಶಾಲೆ, ಕಾಲೇಜುಗಳು ತೆರೆಯಲಿ. ನಂತರ ಕ್ರಿಕೆಟ್ ಮತ್ತಿತರ ಕ್ರೀಡಾ ಕೂಟಗಳು ಆರಂಭವಾಗಲಿ’ ಎಂದು ಕಪಿಲ್ ಹೇಳಿದ್ದಾರೆ.