ಸ್ವಾದಿಷ್ಠ ವೆಜ್ ಮಂಚೂರಿಯನ್

ಅತಿಥಾ
ಶುಕ್ರವಾರ, 2 ಫೆಬ್ರವರಿ 2018 (16:31 IST)
ಬೇಕಾಗುವ ಸಾಮಗ್ರಿಗಳು
 
2 ಕಪ್ ಎಲೆಕೋಸು (ಪಟ್ಟಾ ಗೋಬಿ) ಬಹಳ ಚಿಕ್ಕದಾಗಿ ಹೆಚ್ಚಿದ್ದು
1 ಕಪ್ ತುರಿದ ಕ್ಯಾರೆಟ್ 
3 ಚಮಚ ಬೆಳ್ಳುಳ್ಳಿ ಚಿಕ್ಕದಾಗಿ ಹೆಚ್ಚಿದ್ದು
3 ಚಮಚ ಶುಂಠಿ ಚಿಕ್ಕದಾಗಿ ಹೆಚ್ಚಿದ್ದು
1 ಚಮಚ ಕರಿಮೆಣಸಿನ ಪುಡಿ
2 ಚಮಚ ಉಪ್ಪು
2 ಚಮಚ ಸೋಯ್ ಸಾಸ್
4 ಚಮಚ ಮೈದಾ
5 ಚಮಚ ಕಾರ್ನ್ ಹಿಟ್ಟು
2 ಚಮಚ ಎಣ್ಣೆ
1 ಸಣ್ಣ ಹೆಚ್ಚಿದ ಈರುಳ್ಳಿ
1.5 ಕಪ್ ನೀರು
2 ಚಮಚ ಸ್ಪ್ರಿಂಗ್ ಒನಿಯನ್ (ಈರುಳ್ಳಿಯ ಎಲೆ ) ಹೆಚ್ಚಿದ್ದು
1 ಚಮಚ ಚಿಲಿ ಸಾಸ್
1 ಚಮಚ ವಿನೆಗರ್
ಮಾಡುವ ವಿಧಾನ
 
- ಒಂದು ಬಟ್ಟಲಲ್ಲಿ 2 ಕಪ್ ಎಲೆಕೋಸು, 1 ಕಪ್ ತುರಿದ ಕ್ಯಾರೆಟ್, 1 ಚಮಚ ಶುಂಠಿ, 1 ಚಮಚ ಬೆಳ್ಳುಳ್ಳಿ, 1 ಚಮಚ ಕರಿಮೆಣಸಿನ ಪುಡಿ, 1 ಚಮಚ ಉಪ್ಪು, 1 ಚಮಚ ಸೋಯಾ ಸಾಸ್, 4 ಚಮಚ ಮೈದಾ ಹಿಟ್ಟು ಮತ್ತು 3 ಚಮಚ ಕಾರ್ನ್ ಹಿಟ್ಟು ಸೇರಿಸಿ ಮತ್ತು ಎಲ್ಲವನ್ನೂ ಚೆನ್ನಾಗಿ ಸೇರಿಸಿ.
- ಮಿಶ್ರಣದ ಸಣ್ಣ ಭಾಗವನ್ನು ತೆಗೆದುಕೊಂಡು ಸಣ್ಣ ಉಂಡೆಯ ಆಕಾರಕ್ಕೆ ಮಾಡಿ 
- ಈಗ ಒಂದು ಪ್ಯಾನ್ ಬಿಸಿ ಮಾಡಿ ಮತ್ತು ಎಣ್ಣೆ ಹಾಕಿ ಬಿಸಿ ಮಾಡಿ
- ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವ ತನಕ ಎಲ್ಲಾ ಉಂಡೆಗಳನ್ನು ಫ್ರೈ ಮಾಡಿ.
-  ಈಗ, ಒಂದು ಪ್ಯಾನ್ ಬಿಸಿ ಮತ್ತು 2 ಚಮಚ ಎಣ್ಣೆ ಹಾಕಿ, ಇದಕ್ಕೆ 2 ಚಮಚ ಶುಂಠಿ ಮತ್ತು 2 ಚಮಚ ಬೆಳ್ಳುಳ್ಳಿ, ಹೆಚ್ಚಿದ ಈರುಳ್ಳಿ ಸೇರಿಸಿ ಮತ್ತು ಕಂದು ಬಣ್ಣ ಬರುವ ತನಕ ಬೇಯಿಸಿ.
- ಈಗ ಬಟ್ಟಲಲ್ಲಿ 2 ಚಮಚ ಕಾರ್ನ್ ಹಿಟ್ಟು ಮತ್ತು 1/2 ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಈ ಮಿಶ್ರಣವನ್ನು ಈರುಳ್ಳಿ ಮಿಶ್ರಣಕ್ಕೆ ಸೇರಿಸಿ.
- 1 ಚಮಚ ಸೋಯಾ ಸಾಸ್ ಮತ್ತು ಸ್ಪ್ರಿಂಗ್ ಒನಿಯನ್ ಸೇರಿಸಿ ಮತ್ತು ಮಿಶ್ರಣ ಮಾಡಿ.
- 1 ಚಮಚ ಚಿಲಿ ಸಾಸ್ ಮತ್ತು 1 ಕಪ್ ನೀರು ಸೇರಿಸಿ. ಚೆನ್ನಾಗಿ ಬೆರೆಸಿ.
- ಈಗ 1 ಚಮಚ ಉಪ್ಪು ಮತ್ತು 1 ಚಮಚ ವಿನೆಗರ್ ಸೇರಿಸಿ ಮತ್ತು ಮಿಶ್ರಣ ಮಾಡಿ.
- ಅದಕ್ಕೆ ತಯಾರಿಸಿದ ಉಂಡೆಗಳನ್ನು ಸೇರಿಸಿ ಮತ್ತು 2 ನಿಮಿಷ ಬೇಯಿಸಿ.
 
ಇದು ಫ್ರೈಡ್ ರೈಸ್ ಅಥವಾ ನೂಡಲ್ಸ್ ಜೊತೆ ಸವಿಯಲು ತುಂಬಾ ಚೆನ್ನಾಗಿರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದೇಹದಲ್ಲಿ ಬಿಳಿ ರಕ್ತ ಕಣ ಮತ್ತು ಕೆಂಪು ರಕ್ತ ಕಣ ಸಮತೋಲನದಲ್ಲಿರಲು ಏನು ಮಾಡಬೇಕು

ಹೆರಿಗೆ ನಂತರ ಮಹಿಳೆಯರು ದಪ್ಪ ಆಗಲು ಕಾರಣವೇನು

ಕಹಿ ಬೇವನ್ನು ಪ್ರತಿನಿತ್ಯ ಸೇವನೆ ಮಾಡುವುದರ ಉಪಯೋಗವೇನು ತಿಳಿದುಕೊಳ್ಳಿ

ಮಾವಿನಕಾಯಿ ಸಿಕ್ರೆ ಈ ರೀತಿ ಚಟ್ನಿ ಮಾಡಿ ಗಂಜಿ ಜತೆ ಸೇವಿಸಿ, ಅದ್ಭುತ

ರಸಗುಲ್ಲಾ ಗಂಟಲಲ್ಲಿ ಸಿಲುಕಿ ಯುವಕ ವ್ಯಕ್ತಿ ಸಾವು: ಮದುವೆ ಮನೆಯಲ್ಲಿ ಸೂತಕದ ಛಾಯೆ

ಮುಂದಿನ ಸುದ್ದಿ
Show comments