Publish Date: Sat, 20 Feb 2021 (12:15 IST)
Updated Date: Sat, 20 Feb 2021 (12:21 IST)
ಔರಂಗಾಬಾದ್ : ಹೆಂಡತಿಯನ್ನು ಕೊಂದ ಪತಿ ಪೊಲೀಸರಿಗೆ ಹೆದರಿ ಮನೆಬಿಟ್ಟು ಪರಾರಿಯಾದ ಘಟನೆ ಔರಂಗಾಬಾದ್ ನ ಹೊರವಲಯದಲ್ಲಿರುವ ಪಿಸಾದೇವಿ ಪ್ರದೇಶದಲ್ಲಿ ನಡೆದಿದೆ.
ದಂಪತಿಗಳ ನಡುವೆ ಜಗಳವಾಗಿದ್ದು, ಇದರಿಂದ ಕೋಪಗೊಂಡ ಪತಿ ಪತ್ನಿಗೆ ರಾಡ್ ನಿಂದ ತಲೆಗೆ ಹೊಡೆದು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಬಳಿಕ ಭಯಗೊಂಡ ಆತ ತನ್ನ ಇಬ್ಬರು ಮಕ್ಕಳನ್ನು ಬಿಟ್ಟು ಮನೆಬಿಟ್ಟು ಪರಾರಿಯಾಗಿದ್ದಾನೆ. ಮಕ್ಕಳ ಕೂಗಾಟ ಕೇಳಿ ಬಂದ ನೆರೆಮನೆಯವರು ದೃಶ್ಯವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತಿ ಪತ್ತೆಗಾಗಿ ತಂಡಗಳನ್ನು ರಚಿಸಿದ್ದಾರೆ.