Publish Date: Mon, 11 May 2020 (16:00 IST)
Updated Date: Mon, 11 May 2020 (16:03 IST)
ರಾಜಸ್ತಾನದ ಜೋಧಪುರಕ್ಕೆ ಬೈಕ್ ಗಳಲ್ಲಿಯೇ ಹೊರಟಿದ್ದಾರೆ ಕಾರ್ಮಿಕರು.
ಲಾಕ್ ಡೌನ್ ದಿಂದಾಗಿ ಕಾರ್ಮಿಕರ ಜೀವನ ಕಂಗಾಲಾಗಿದ್ದು, ಕೆಲಸವಿಲ್ಲ ಜೊತೆಗೆ ಮಾಲೀಕರ ಸಹಾಯವೂ ಕೂಡಾ ದೊರೆತಿಲ್ಲ.
ಹೀಗಾಗಿ ತಮ್ಮ ಊರುಗಳಿಗೆ ಶಿರಾದಿಂದ ಜೋಧಪುರಕ್ಕೆ ಹೊರಟಿರುವ ಸಂದರ್ಭದಲ್ಲಿ ಹುಬ್ಬಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಕ್ಕ ಇವರಿಗೆ ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್ ಗೆ ಒಳಪಡಿಸಲಾಯಿತು. 12 ಬೈಕಗಳಲ್ಲಿ 24 ಜನ ಕಾರ್ಮಿಕರು ರಸ್ತೆ ಮಾರ್ಗವಾಗಿ ಪಯಣ ಬೆಳೆಸಿದ್ದಾರೆ.
ಮಾರ್ಗ ಮಧ್ಯ ಹುಬ್ಬಳ್ಳಿಯಲ್ಲಿ ಸಿಕ್ಕ ಇವರಿಗೆ ಹುಬ್ಬಳ್ಳಿ ಡಿ.ಸಿ.ಪಿ. ಬಸರಗಿ ಅವರು ಕಾರ್ಮಿಕರ ಯೋಗಕ್ಷೇಮವನ್ನು ವಿಚಾರಿಸಿ, ಅವರಿಗೆ ಥರ್ಮಲ್ ಸ್ಕ್ರೀನಿಂಗ್ ಒಳಪಡಿಸಿ ಅವರಿಗೆ ಧೈರ್ಯವನ್ನು ತುಂಬಿ ಕಳುಹಿಸಿದ್ದಾರೆ.