Publish Date: Tue, 16 May 2023 (10:32 IST)
Updated Date: Tue, 16 May 2023 (10:34 IST)
ಕೋಲಾರ : ಕರ್ನಾಟಕದಲ್ಲಿ ಬಹುಮತದಿಂದ ಕಾಂಗ್ರೆಸ್ ಗದ್ದುಗೆ ಏರಿದ್ದು, ಸಿಎಂ ಸ್ಥಾನಕ್ಕೆ ಈಗ ಪೈಪೋಟಿ ಶುರುವಾಗಿದೆ. ಒಂದೆಡೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ರೇಸ್ನಲ್ಲಿ ಇದ್ದರೆ, ಇದೀಗ ಜಿ. ಪರಮೇಶ್ವರ್ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದ್ದಾರೆ.
ಕಳೆದ 70 ವರ್ಷಗಳಿಂದ ಪರಿಶಿಷ್ಟ ಜನಾಂಗ ಕಾಂಗ್ರೆಸ್ ಜೊತೆಗಿದೆ. ಅದಕ್ಕಾಗಿ ಪರಿಶಿಷ್ಟರ ಮುಖಂಡರಿಗೆ ಸಿಎಂ ಸ್ಥಾನ ನೀಡಬೇಕು. ಅದಕ್ಕೆ ಸೂಕ್ತ ವ್ಯಕ್ತಿ ಪರಮೇಶ್ವರ್ ಆಗಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ರೀನಿವಾಸಪುರದ ಶ್ರೀನಿವಾಸನ್ ಹೇಳಿದ್ದಾರೆ.