Publish Date: Sun, 24 Mar 2019 (19:30 IST)
Updated Date: Sun, 24 Mar 2019 (19:32 IST)
ಉಮೇಶ್ ಜಾಧವ ಕಾಂಗ್ರೆಸ್ ರಾಜೀನಾಮೆ ನೀಡಿದ ಖರ್ಗೆ ವಿರುದ್ಧ ಕೈ ಮುಖಂಡರೇ ತಿರುಗಿ ಬೀಳುತ್ತಿದ್ದಾರೆ.
ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ 371 ಜೆ ತಂದಿದ್ದು ನಾನೇ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಮಾಜಿ ಸಚಿವ ವೈಜನಾಥ್ ಪಾಟೀಲ್ ತಿರುಗೇಟು ನೀಡಿದ್ದಾರೆ.
ಸಾರ್ವಜನಿಕರು, ಹೋರಾಟಗಾರು, ಜನಪ್ರತಿನಿಧಿಗಳ ಪ್ರಯತ್ನದಿಂದ 371(ಜೆ) ಮಂಜೂರಾಗಿದೆ. ಆದರೆ ನಾನೇ ಮಾಡಿದ್ದು ಎಂಬ ಖರ್ಗೆ ಹೇಳಿಕೆಗೆ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಖರ್ಗೆ ವಿರುದ್ಧ ತೊಡೆತಟ್ಟಿದ ವೈಜಿನಾಥ್ ಪಾಟೀಲ್, ನೀವು ಜನಪ್ರತಿನಿಧಿ ಅದು ನಿಮ್ಮ ಕರ್ತವ್ಯ, ಆದಾಗ್ಯೂ ನಾನೇ ಮಾಡಿದ್ದು ಅಂತಾ ಇನ್ನೊಮ್ಮೆ ಹೇಳಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದರು.
ದೇವರಾಜು ಅರಸು ಬಗ್ಗೆ ಮಾತನಾಡುವ ನೈತಿಕತೆ ಮಲ್ಲಿಕಾರ್ಜುನ ಖರ್ಗೆಗಿಲ್ಲ ಎಂದು ಕಲಬುರಗಿಯಲ್ಲಿ ಖರ್ಗೆ ವಿರುದ್ಧ ಮಾಜಿ ಸಚಿವ ವೈಜನಾಥ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಸು ಬೆನ್ನಿಗೆ ಚೂರಿ ಹಾಕಿದ್ದೆ ಮಲ್ಲಿಕಾರ್ಜುನ ಖರ್ಗೆ ಎಂದು ದೂರಿದ ಅವರು, ಈ ಮೂಲಕ ಅರಸು ಬಿಟ್ಟು ಆರ್. ಗುಂಡೂರಾವ್ ಬಳಿ ಖರ್ಗೆ ಹೋಗಿದ್ದರು ಎಂದರು.