Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಆರು ತಿಂಗಳು ಇರ್ತೀರಿ ಎಂದ ಮತದಾರರಿಗೆ ಮುಂದೆಯೂ ನಾನೇ ಶಾಸಕ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ. ಕೊಪ್ಫಳದಲ್ಲಿ ನೀವು ಇರೋದು ಬರೀ 6 ತಿಂಗಳು ನಮಗೆ ಕೆಲಸ ಮಾಡಿಕೊಡಿ ಎಂದ ಜನರು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಹಾಲಪ್ಪ ಆಚಾರ್ ನಾನೇ ಮುಂದೆ ಶಾಸಕನಾಗ್ತಿನಿ ಎಂದು ಹೇಳಿದ್ದಾರೆ. ಕೊಪ್ಪಳದ ಕುಕನೂರು ತಾಲೂಕಿನ ಶಿರೂರು ಗ್ರಾಮದಲ್ಲಿ ಸಮಾರಂಭದ ವೇದಿಕೆಯಲ್ಲಿ ಮತ್ತೊಮ್ಮೆ ತಾವು ಶಾಸಕರಾಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಜನರ ಸಮಸ್ಯೆ ಆಲಿಸಿ, ನಮ್ಮ ಕೆಲಸ ಮಾಡಿಕೊಡಿ ಎಂದ ಮತದಾರರು ಕೇಳಿದ್ದಾರೆ. ಇದಕ್ಕೆ ನಾನೇ ಮುಂದೆ ಶಾಸಕನಾಗಿ ನಿಮ್ಮ ಕೆಲಸ ಮಾಡಿಕೊಡ್ತಿನಿ ಎಂದು ಹೇಳಿದ್ದಾರೆ.