Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚಿಂತಾಕಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಬೆಳೆದ ಗಾಂಜಾವನ್ನ ವಶ ಪಡೆಯಲಾಗಿದ್ದು, ಗಾಂಜಾ ಬೆಳೆದವನನ್ನು ಬಂಧಿಸಿದ್ದಾರೆ. ಔರಾದ್ ತಾಲೂಕಿನ ಚಿಕ್ಲಿ ಗ್ರಾಪಂ ವ್ಯಾಪ್ತಿಯ ಕೀಶನ್ ತಾಂಡಾದ ಹೊಲದಲ್ಲಿ 15 ಕೆ.ಜಿ.ಗಾಂಜಾ ಬೆಳೆ ಪತ್ತೆಯಾಗಿದೆ. ಪುಂಡಲಿಕ ತುಳಸಿರಾಂ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿ ಹತ್ತಿ ಬೆಳೆ ಮಧ್ಯೆ ಗಾಂಜಾ ಬೆಳೆಸಿದ್ದು , ಗಾಂಜಾ ಗಿಡದ ವಾಸನೆ ಎಲ್ಲೆಡೆ ಆವರಿಸಿದ್ದು, ಪ್ರಕರ ಬೆಳಕಿಗೆ ಬಂದಿದೆ. ಅಬಕಾರಿ ಪೊಲೀಸರ ಹಾಗೂ ಚಿಂತಾಕಿ ಪೊಲೀಸ್ರ ಜಂಟಿ ಕಾರ್ಯಾಚರಣೆ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ.