Select Your Language

Notifications

webdunia
webdunia
webdunia
webdunia

ಅರಮನೆ ಶಂಕರ್ ಯಿಂದ ಬಸವನಗುಡಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ

ಅರಮನೆ ಶಂಕರ್ ಯಿಂದ ಬಸವನಗುಡಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ
bangalore , ಗುರುವಾರ, 4 ಮೇ 2023 (14:30 IST)
ಅರಮನೆ ಶಂಖರ್ ಸಧ್ಯ ಈ ಹೆಸರು ಅರಿ ದಾಡ್ತಿರೋದು ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ, ಯಂಗ್ ಅಂಡ್ ಎನರ್ಜಿಟಿಕ್ಆಗಿ ಮತಯಾಚನೆ ಮಾಡ್ತಾ, ಏನಾದ್ರು ಆಗ್ಲಿ ಈ ಭಾರಿ ಬಸವನಗುಡಿ ಕ್ಷೇತ್ರ ದಲ್ಲಿ ಜೆಡಿಎಸ್ ಭಾವುಟವನ್ನ ಹರಿಸಲೇ ಬೇಕು ಅಂತ ಪಣ ತೊಟ್ಟಂತೆ ಕಾಣ್ತಿದೆ.

 
ಎಸ್ 3ತಿಂಗಳ ಹಿಂದೆ ಬಸವನ ಗುಡಿಯಲ್ಲಿ ಅರಮನೆ ಶಂಕರ್ ಅಂದ್ರೆ ಯಾರಿಗೂ ಅಷ್ಟಾಗಿ ಗೊತ್ತಿರ್ಲಿಲ್ಲ ಆದ್ರೆ ಈಗ ನಮ್ಮನೆ ಮಗ ಅಂತ ಪೂಜೆ ಮಾಡೋ ಜನಗಳನ್ನ ಅರಮನೆ ಶಂಕರ್ ಸಂಪಾದಿಸಿಕೊಂಡಿದ್ದಾರೆ, ಇಷ್ಟೇ ಯಾಕೆ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎರಡು ಭಾರಿ ಇಂದ 2 ನೇ ಸ್ಥಾನ ಗಿಟ್ಟಿಸಿಗೊಳ್ಳುತ್ತಿರುವ ಜೆಡಿಎಸ್ ನನ್ನು ಗೆಲುವಿನ ಪಟ್ಟಕ್ಕೇರಿಸಲು ಅರಮನೆ ಶಂಕರ್ ಪಣ ತೊಟ್ಟಿದ್ದಾರೆ.

ಖಾಸಗಿ ಪತ್ರಿಕೆಯೊಂದರ ಸಂದರ್ಶನದಲ್ಲಿ ಹಿಂದುತ್ವದ ಬಗ್ಗೆ ಮಾತನಾಡಿದ್ದ ಅರಮನೆ ಶಂಕರ್ ನಮ್ಮ ಹಿಂದುತ್ವ -ಎಲ್ಲರ ಬಂಧುತ್ವ ಎಂಬ ಯೋಜನೆಯೊಂದಿಗೆ ಶ್ರೀರಾಮನ ಹೆಸರಿನಲ್ಲಿ ಜನರ ಅನುಕೂಲಕ್ಕೆ ಕಲ್ಯಾಣ ಮಂಟಪ ಕಟ್ಟಿಸುತ್ತೇನೆಂಬ ಮಾತು ಸದ್ಯ ಬಸವನಗುಡಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ

ಅರಮನೆ ಶಂಕರ್ ರ ಈ ಹೇಳಿಕೆಗೆ ಬಸವನಗುಡಿ ಕ್ಷೇತ್ರದ ಜನತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ , ಶಂಕರ್ ಅವರು ಹೊಸಬರೇ ಇರಬಹುದು ನಾಗಮಂಗಳಲದಲ್ಲಿ ಫ್ರೀ ಬಸ್ ಬಿಟ್ಟಂತ ಇವರು ಇಲ್ಲಿ ಶ್ರೀ ರಾಮ ಕಲ್ಯಾಣ ಮಂಟಪ ಕಟ್ಟಿಸದಿರಲು ಸಾಧ್ಯವೇ.ಹಿಂದುತ್ವದ ಹೆಸರೇಳಿ ಸುಖಾ ಸುಮ್ಮನೆ ಬರವಸೆ ನೀಡುವ ಪಕ್ಷಗಳಿಗೆ ಬಲಿಯಾಗದೆ ಇಂತ ಒಳ್ಳೆಯ ನಂಬಿಕಸ್ತ ವ್ಯಕ್ತಿಯನ್ನ ಗೆಲ್ಲಿಸೋದು ನಮ್ಮ ಕರ್ತವ್ಯ ಎಂದ್ರು,ಒಟ್ಟಾರೆ ಬಸವನಗುಡಿ ಕ್ಷೇತ್ರದಲ್ಲಿ ಅರಮನೆ ಶಂಕರ್ ಮಳೆ ಬಿಸಿಲು ಎನ್ನದೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡ್ತಿದ್ದು, ಅವರ ಭರವಸೆಗಳನ್ನ ಜನ ಪ್ರೋತ್ಸಾಹಿಸುತ್ತಿದ್ದಾರೆ, ಬಸವನ ಗುಡಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅರಮನೆ ಶಂಕರ್ ಇತಿಹಾಸ ಸೃಷ್ಟಿಸಲು ಹೊರಟಿದ್ದಾರೆ ಎಂದರೆ ತಪ್ಪಾಗಲ್ಲ
 

Share this Story:

Follow Webdunia kannada

ಮುಂದಿನ ಸುದ್ದಿ

ನಿಂತಿರೋ ಗಾಡಿಗೆ ಬೈಕ್ ಡಿಕ್ಕಿಯಾಗಿ ಅಪಘಾತ, ಸವಾರ ಸಾವು.