Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಯಾದಗಿರಿ ಜಿಲ್ಲೆಯ ಏಕಲವ್ಯ ವಸತಿನ ಶಾಲೆ ಉದ್ಘಾಟನೆಗೆ ಆಹ್ವಾನ ನೀಡದಿದ್ದಕ್ಕೆ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ವಾಲ್ಮೀಕಿ ನಿಗಮದ ಅಧಿಕಾರಿ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ್ರು. ಇದಕ್ಕೆ ರಾಜ್ಯ ಬಿಜೆಪಿ ಹಾಗೂ ಆರ್ ಆರ್ ಎಸ್ ಎಸ್ ಮುಖಂಡರು ಚಿಂಚನಸೂರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನು ಚಿಂಚನಸೂರ್ ಸಚಿವ ಶ್ರೀರಾಮುಲು ಮುಂದೆಯೇ ಅವಾಚ್ಯ ಶಬ್ದ ಬಳಸಿದಕ್ಕೆ ಶ್ರೀರಾಮುಲು ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ರು. ಈ ಹಿನ್ನೆಲೆ ಕಾರ್ಯಕ್ರಮದ ವೇದಿಕೆಯ ಮೇಲೆ ಚಿಂಚನಸೂರ್ ಬರದೇ ಯಾದಗಿರಿಯಿಂದ ಎಸ್ಕೇಪ್ ಆಗಿದ್ದಾರೆ.