Publish Date: Thu, 12 Oct 2023 (13:49 IST)
Updated Date: Thu, 12 Oct 2023 (14:10 IST)
ಸುಮಾರು 40 ಕ್ಕೂ ಹೆಚ್ಚು ನಾಯಕ ಅರ್ಜಿ ನನ್ನ ಮುಂದಿದೆ.ಸ್ಥಳೀಯ ನಾಯಕರ ಜೊತೆ ಚರ್ಚೆ ಮಾಡಿ ಸೇರಿಸಿಕೊಳ್ಳುತ್ತೇವೆ.ಬೀದರ್ ನಿಂದ ಚಾಮರಾಜನಗರದವರೆಗೂ ಬರ್ತಾ ಇದ್ದಾರೆ.ಮೈತ್ರಿಗೆ ವಿರೋಧಿಸಿ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ.ಇದರ ನಡುವೆ 2024 ಚುನಾವಣೆ ನಡೆಯಲಿದೆ ಎಂದು ಕೆಲವರು ಹೇಳ್ತಾ ಇದ್ದಾರೆ.ಬಿಜೆಪಿಯ ಒಂದು ಟೀಮ್ ನಮ್ಮ ಶಾಸಕರನ್ನು ಭೇಟಿ ಮಾಡುತ್ತಿದೆ .ಸಿನಿಮಾ ಸ್ಟೈಲ್ ನಲ್ಲಿ ಬಂದು ಭೇಟಿ ಮಾಡಿ ಹೋಗುತ್ತಿದ್ದಾರೆ .ಯಾರ್ಯಾರನ್ನು ಭೇಟಿ ಮಾಡಿದ್ದಾರೆ ಎಂದು ನಮ್ಮ ಶಾಸಕರು ಹೇಳ್ತಾ ಇದ್ದಾರೆ.ಏನ್ ಏನೇನು ಆಗುತ್ತಿದೆ ಎಂಬ ಮಾಹಿತಿ ನನಗಿದೆ .ಇದರ ಬಗ್ಗೆ ಮಾತಾಡುತ್ತೇನೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ಅವರು ನನ್ನ ಬಳಿ ಒಂದು ದೊಡ್ಡ ಪಟ್ಟಿಯನ್ನ ತಂದು ಚರ್ಚೆ ಮಾಡಿದ್ದಾರೆ.ಆ ಹೆಸರಗಳನ್ನ ನಾನು ಈಗಾ ಹೇಳುವುದಿಲ್ಲ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ