Webdunia - Bharat's app for daily news and videos

Install App

ಇನ್ಮುಂದೆ ರಾತ್ರಿ 1 ಗಂಟೆವರೆಗೂ ಹೊಟೇಲ್ ಓಪನ್..!

Webdunia
ಶನಿವಾರ, 11 ಜೂನ್ 2022 (19:25 IST)
ಸಿಲಿಕಾನ್ ಸಿಟಿಗೆ ಉದ್ಯೋಗವನ್ನ ಹಾರಿಸಿ ಅಥವಾ ಬೇರೆ ಬೇರೆ ಕಾರಣಕ್ಕಾಗಿ ಜನರು ಬಂದಿರುತ್ತಾರೆ.  ಆದ್ರೆ ಬರುವ  ಅರ್ಧಕ್ಕೆ ಅರ್ಧದಷ್ಟು ಜನರು ಹೊಟೇಲ್ ಊಟವನ್ನ ಅವಲಂಬಿಸಿರುತ್ತಾರೆ.ನಗರದಲ್ಲಿ 10 ಗಂಟೆಗೆ ಹೊಟೇಲ್ ಕ್ಲೋಸ್ ಆಗುವುದರಿಂದ ಎಷ್ಟೋ ಬಾರಿ ಜನರು ಹಸುವಿನಿಂದ ಮಲಗುವಂತಾಗಿದೆ. ಆದ್ರೆ ಇನ್ಮುಂದೆ ಹಾಗೆ ಆಗದಂತೆ  ಗ್ರಾಹಕರ ಹಿತದೃಷ್ಟಿಯಿಂದ ಹೊಟೇಲ್ ಉದ್ಯಮ ಮಹತ್ವವಾದ ನಿರ್ಧಾರ ತೆಗೆದುಕೊಂಡಿದೆ.

ಕೋವಿಡ್ ನಿಂದ ಸುಮಾರು 2 ವರ್ಷ ಹೊಟೇಲ್ ಉದ್ಯಮ ತತ್ತರಿಸಿ ಹೋಗಿತ್ತು.ಆದ್ರೆ ಈಗ ಹಂತ ಹಂತವಾಗಿ ಹೊಟೇಲ್ ಉದ್ಯಮ ಚೇತರಿಕೆ ಕಂಡಿದೆ.ಅಷ್ಟೇ ಅಲ್ಲದೆ ಗ್ರಾಹಕರ ಹಿತದೃಷ್ಟಿಯಿಂದ ಹೊಟೇಲ್ ಉದ್ಯಮ ಹಲವು ಮಹತ್ವವಾದ ನಿರ್ಧಾರ ಕೈಗೊಂಡಿದೆ. ಗ್ರಾಹಕರ ಅನುಕೂಲಕ್ಕಾಗಿ ಮಧ್ಯರಾತ್ರಿ 1 ಗಂಟೆವರೆಗೂ ಹೊಟೇಲ್ ತೆರೆಯಲು ಅನುಮತಿ ತೆಗೆದುಕೊಂಡಿದೆ. ಅಷ್ಟೇ ಅಲ್ಲದೆ ಸರ್ವಿಸ್ ಬಿಲ್ ಕೂಡ ಗ್ರಾಹಕರ ಬಳಿ ಬಲವಂತಾಗಿ ತೆಗೆದುಕೊಳ್ಳುವುದಿಲ್ಲ ಅಂತಾ ನಿರ್ಧಾರ ತೆಗೆದುಕೊಂಡಿದ್ದಾರೆ.

ಇನ್ನು ಮಧ್ಯರಾತ್ರಿ 1 ರವರೆಗೆ ಹೊಟೇಲ್ ಓಪನ್ ಇರುವುದರಿಂದ ಎಷ್ಟೋ ಜಮರಿಗೆ ಅನುಕೂಲವಾಗುತ್ತೆ. ರಾತ್ರಿ 2 nd ಶಿಫ್ಟ್ ಕೆಲಸ ಮುಗಿಸಿ ಹೋಗುವವರಿಗೆ ರಾತ್ರಿ 12 ಗಂಟೆ ಅಥಾವ 1 ಗಂಟೆಯೂ ಆಗಬಹುದು. ಅಂತವರಿಗೆ ಹೊಟೇಲ್ ತೆರೆದಿರುವುದು ಉಪಯೋಗವಾಗುತ್ತೆ. ಜೊತೆಗೆ ಹೊಟೇಲ್ ಬ್ಯುಸಿನೆಸ್ ಕೂಡ ಚನ್ನಾಗಿ ನಡೆಯುತ್ತೆ. ಈಗಾಗಲೇ ಹೊಟೇಲ್ ಉದ್ಯಮದ ಚೇತರಿಕೆಯ ಜೊತೆಗೆ ಗ್ರಾಹಕರ ಅನುಕೂಲಕ್ಕಾಗಿ ಎರಡರ ಹಿತದೃಷ್ಟಿಯಿಂದ ಹೊಟೇಲ್ ರಾತ್ರಿವರೆಗೂ ಒಫನ್ ಮಾಡುವಂತೆ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ಕಮಿಷನರ್ ಪ್ರತಾಪ್ ರೆಡ್ಡಿಗೆ ಪತ್ರಕೊಡುವ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಅವರು ಹೊಟೇಲ್ ಓಪನ್ ಇರುವುದಕ್ಕೆ ಸಮ್ಮತಿ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕಿಸ್ತಾನ ಪರ ಬೇಹುಗಾರಿಗೆ: ಎನ್‌ಐಎಯಿಂದ ಯೂಟ್ಯೂಬರ್‌ ಜ್ಯೋತಿಗೆ ನಾನಾ ರೀತಿಯಲ್ಲಿ ಪ್ರಶ್ನೆ

ಕನ್ನಡ ಮಾತೇ ಆಡಲ್ಲ, ಹಿಂದಿ ರಾಷ್ಟ್ರ ಭಾಷೆ ಏನಿವಾಗ? SBI ಅಧಿಕಾರಿಯ ದರ್ಪ: video

Pahalgam Attack, ಅಂದು ಮೋದಿ ಎಚ್ಚರಿಕೆ ನೀಡುತ್ತಿದ್ದರೆ 26 ಮಂದಿಯ ಜೀವ ಉಳಿಯುತ್ತಿತ್ತು: ಮಲ್ಲಿಕಾರ್ಜುನ ಖರ್ಗೆ

ಅಂದು ನಾವು ನೀಡಿದ ಅನುದಾನದಲ್ಲಿ ಕಾಮಗಾರಿ ಮಾಡ್ತಿದ್ರೆ ಬೆಂಗಳೂರಿಗೆ ಈ ಪರಿಸ್ಥಿತಿ ಬರ್ತಿರ್ಲಿಲ್ಲ: ಆರ್‌ ಅಶೋಕ್‌

IMD, ಕೇರಳಕ್ಕೆ ನಾಲ್ಕೈದು ದಿನಗಳಲ್ಲಿ ಮುಂಗಾರು ಪ್ರವೇಶ

ಮುಂದಿನ ಸುದ್ದಿ
Show comments