Publish Date: Wed, 28 Sep 2022 (17:05 IST)
Updated Date: Wed, 28 Sep 2022 (18:07 IST)
ಸರ್ಕಾರಿ ಶಾಲೆಗಳನ್ನು ಕಡೆಗಣಿಸಿ ಖಾಸಗಿ ಶಾಲೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವ ಸರ್ಕಾರದ ಕ್ರಮ ಖಂಡಿಸಿ ರಾಜ್ಯ ಮಟ್ಟದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಕೈಗೊಂಡಿದ್ದಾರೆ. ಸರ್ಕಾರಿ ಶಾಲೆಗಳ ಉಳಿವಿಗಾಗಿ ಎಂಬ ಅಭಿಯಾನದಡಿ ಪ್ರತಿಭಟನಾಕಾರರು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬೃಹತ್ ಹೋರಾಟ ಮಾಡುತ್ತಿದೆ.
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದು,
ಬಡವರ ಮಕ್ಕಳ ಶಿಕ್ಷಣ ಕಲಿಯುತ್ತಿರುವ ಸರ್ಕಾರಕ್ಕೆ ವಿದ್ಯಾರ್ಥಿಗಳು ಧಿಕ್ಕಾರ ಕೂಗಿದ್ದಾರೆ. ಶಿಕ್ಷಣ ಖಾಸಗಿಕರಣದಿಂದ ಸರ್ಕಾರಿ ಶಾಲೆಗಳು ಭವಿಷ್ಯದಲ್ಲಿ ಖಾಸಗಿ ಒಡೆತನಕ್ಕೆ ಸೇರಲಿದ್ದು ಇದರಿಂದ ಬಡವರ್ಗ ಶಿಕ್ಷಣದಿಂದ ವಂಚಿತವಾಗುತ್ತದೆ. ಮುಂದಿನ ಪೀಳಿಗೆಗೆ ಶಿಕ್ಷಣ ಅತ್ಯಂತ ಹೊರೆಯಾಗಿ ಪರಿಣಮಿಸಲಿದ್ದು, ಹೊಸ ಶಿಕ್ಷಣ ನೀತಿಯನ್ನು ರದ್ದು ಪಡಿಸಬೇಕು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ದಾರೆ.
geetha
Publish Date: Wed, 28 Sep 2022 (17:05 IST)
Updated Date: Wed, 28 Sep 2022 (18:07 IST)