Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮೊಹಮ್ಮದ್ ನಲಪಾಡ್ ರನ್ನು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರನ್ನಾಗಿ ಮಾಡಿರುವ ರಾಜ್ಯದ ಹಿರಿಯ ನಾಯಕರು ಮತ್ತು ಕೆಪಿಸಿಸಿ ಪದಾಧಿಕಾರಿಗಳು ಒದಲೇಬೇಕು..
ಚಿತ್ರದುರ್ಗದಲ್ಲಿ ನಲಪಾಡ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಗೆಪಾಟೀಲಿಗೀಡಾದ ಪ್ರಸಂಗವನ್ನು ಇದು ವಿವರಿಸುತ್ತದೆ. ಖುದ್ದು ನಲಪಾಡ್ ನೆರೆದಿರುವ ಕಾರ್ಯಕರ್ತರನ್ನು ಉದ್ದೇಶಿಸಿ ನಿಮ್ಮಲ್ಲಿ ಎಷ್ಟು ಜನಕ್ಕೆ ನಾನು ಯಾರು ಅನ್ನೋದು ಗೊತ್ತಿದೆ ಮತ್ತು ಗೊತ್ತಿರುವವರು ಕೈ ಮೇಲೆತ್ತಿ ಎಂಬಂತೆ ತನ್ನ ಕೈ ಮೇಲೆತ್ತಿ ಹೇಳುತ್ತಾರೆ. ಒಬ್ಬೇಒಬ್ಬ ಕಾರ್ಯಕರ್ತ ಕೈ ಎತ್ತುವುದಿಲ್ಲ. ಇದು ನಾವಲ್ಲ ಖುದ್ದು ಮೊಹಮ್ಮದ್ ನಲಪಾಡ್ ಹೇಳುತ್ತಾರೆ. ಇಂಥ ಯುವ ನಾಯಕರನ್ನು ಕಟ್ಟಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಮರಳುವ ಆಸೆ ಇಟ್ಟುಕೊಂಡಿದೆ!