Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಟೊಮ್ಯಾಟೊ ಬೆಲೆ ಕುಸಿತಕ್ಕೆ ನೊಂದ ರೈತ ಹೆದ್ದಾರಿಗೆ ಟೊಮ್ಯಾಟೊ ಸುರಿದ ಘಟನೆ ರಾಮನಗರದ ಎಪಿಎಂಸಿಯ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ನಡೆಯಿತು. ಟೊಮ್ಯಾಟೊಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ಸುಮಾರು ಒಂದು ಟನ್ ಟೊಮ್ಯಾಟೊವನ್ನು ರಸ್ತೆ ಸುರಿದು, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ವಿರುದ್ಧ ದಿಕ್ಕಾರ ಕೂಗಿ ತನ್ನ ಆಕ್ರೋಶ ವ್ಯಕ್ತಪಡಿಸಿದ್ರು. ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ರೈತ ಸುಜೀವನ್ ಕುಮಾರ್ ಕಳೆದ ಐದು ದಿನಗಳ ಹಿಂದೆ ರಾಮನಗರ ಎಪಿಎಂಸಿ ಮಾರುಕಟ್ಟೆಗೆ ಬೆಳೆದಿದ್ದ ಟೊಮ್ಯಾಟೊ ತಂದಿದ್ದರು, ಕಳೆದ ಐದು ದಿನಗಳಿಂದ ಟೊಮ್ಯಾಟೊ ಯಾರು ಖರೀದಿ ಮಾಡಲಿಲ್ಲ ಇಂದು ಕೆಜಿ ಟೊಮ್ಯಾಟೊವನ್ನು ಮೂರು ರೂಪಾಯಿ ವರ್ತಕರು ಕೇಳಿದರಿಂದ ಮನ ನೂಂದು ಪ್ರತಿಭಟನೆ ಮಾಡಿದ್ರು.