Publish Date: Sat, 22 Apr 2023 (17:02 IST)
Updated Date: Sat, 22 Apr 2023 (17:05 IST)
ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಆಗ್ಬೇಕು, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕು ಅಂತಾ ಹಾರೈಸಿ ಗದಗದಲ್ಲಿ ಸಿದ್ದು ಅಭಿಮಾನಿಯೋರ್ವ ಒಂದು ಕ್ವಿಂಟಲ್ ಭಾರ ಹೊತ್ತು ದೀಡ್ ನಮಸ್ಕಾರ ಹಾಕಿದ್ದಾರೆ.. ಹನುಮಂತಪ್ಪ ಜಟ್ಟಿ ಸುಮಾರು ಅರ್ಧ ಕಿಲೋಮೀಟರ್ಗೂ ಹೆಚ್ಚು ದೀಡ್ ನಮಸ್ಕಾರ ಹಾಕಿದ್ದಾರೆ. ವಿರುಪಾಕ್ಷೇಶ್ವರ ದೇವಸ್ಥಾನದಿಂದ ಮಾರುತೇಶ್ವರ ದೇವಸ್ಥಾನದವರೆಗೆ ದೀಡ್ ನಮಸ್ಕಾರ ಹಾಕಿದ್ದಾರೆ.. ದೀಡ್ ನಮಸ್ಕಾರದಲ್ಲಿ ಕಾಂಗ್ರೆಸ್ ಮುಖಂಡರು ಸೇರಿದಂತೆ ಸ್ಥಳೀಯರು ಭಾಗಿಯಾಗಿದ್ರು.