Publish Date: Mon, 28 Nov 2022 (16:52 IST)
Updated Date: Mon, 28 Nov 2022 (16:54 IST)
ಕೆರೆಯಲ್ಲಿ ಈಜಾಡಲು ಹೋಗಿದ ಸ್ನೇಹಿತನ ಮಗನನ್ನ ರಕ್ಷಿಸಲು ಹೋಗಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ತುಂಬಾಡಿ ಕೆರೆಯಲ್ಲಿ ನಡೆದಿದೆ. ತುಮಕೂರಿನ ಕೃಷ್ಣಪ್ಪ(45), ನಿತಿನ್(9) ಮೃತ ದುರ್ದೈವಿಗಳಾಗಿದ್ದು, ಸ್ನೇಹಿತನ ಮಗ ನಿತಿನ್ ಜೊತೆ ಈಜಲು ಹೋಗಿದ್ದ ಕೃಷ್ಣಪ್ಪ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕೆರೆಯಲ್ಲಿ ಮುಳುಗುವುದನ್ನು ಕಂಡು ಸ್ಥಳೀಯರು ಜೀವ ಉಳಿಸಲು ಮುಂದಾಗಿದ್ದಾರೆ. ಅವರನ್ನ ಕಾಪಾಡಿ ತಕ್ಷಣವೇ ಕೊರಟಗೆರೆ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿದರು. ಚಿಕಿತ್ಸೆ ಫಲಿಸದೇ ಕೃಷ್ಣಪ್ಪ ಸಾವನ್ನಪ್ಪಿದ್ದಾರೆ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.