Publish Date: Fri, 17 Nov 2023 (21:00 IST)
Updated Date: Fri, 17 Nov 2023 (20:17 IST)
ನಗರದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಖಂಡಿತ ಈಗಾಗಲೇ ಅವರು ಏನೇನ್ ಕೇಳಿದ್ದಾರೋ ಎಲ್ಲದಕ್ಕೂ ಜನರು ಉತ್ತರ ಕೊಟ್ಟಿದ್ದಾರೆ.ಅವರು ಮಾತುಗಳಿಗೆ ಆಚಾರಾ ವಿಚಾರಕ್ಕೆ ಜನರೇ ಉತ್ತರ ಕೊಟ್ಟಿದ್ದಾರೆ.ಇನ್ನೂ ಏನ್ ಬೇಕಾದರೂ ನಾನ್ ಉತ್ತರ ಕೊಡ್ತೀನಿ.ಅವರು ಏನೇನ್ ಪಟ್ಟಿ ಕೊಡ್ತಾರಲ್ವಾ ಲೆಕ್ಕ ಕೊಡೋಣ.ನಾನು ಮಾಲು ಕಟ್ಟಿರುವ ಜಾಗ ಸೆಂಟ್ರಲ್ ಗವರ್ನಮೆಂಟ್ ಸಂಸ್ಥೆದು ,ಅವರು ದಾಖಲೆ ಮಾಡಿ ಟೆಂಡರ್ ಹಾಕಿದ್ದಾರೆ.ಅದನ್ನು ನಮ್ಮ ಸ್ನೇಹಿತರು ತೆಗೆದುಕೊಂಡಿದ್ರು.ಅದನ್ನು ನಾನು ಅವರ ಬಳಿ ತೆಗೆದುಕೊಂಡಿದ್ದೇನೆ ಎಂದು ಡಿಕೆ ಶಿವಕುಮಾರ್ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.
ಏನಾದರೂ ತಪ್ಪು ಮಾಡಿದ್ರೆ ಬೇಕಾದರೆ ಗಲ್ಲಿಗೆ ಹಾಕ್ಲಿ,ಅವರಿಗೆ ಇನ್ನೂ ಗೊತ್ತಿಲ್ಲ.ಅವರ ತಂದೆಯವರು ಹತ್ತುಹದಿನೈದು ವರ್ಷದ ಹಿಂದೇನೆ ಜಯರಾಜ್ ಆಪೀರ್ ಇದ್ದ ಅವನ ಬಳಿಯೇ ತನಿಖೆ ಮಾಡಿಸಿದ್ದಾರೆ.ಏನಾದರೂ ತಪ್ಪು ಮಾಡಿದ್ರೆ ಗಲ್ಲಿಗೆ ಹಾಕ್ಲಿ.ಎಲ್ಲದಕ್ಕೂ ರೆಡಿ ಇದ್ದೇನೆ
ಈ ಪೊಗರು, ಈ ಬ್ಲಾಕ್ ಮೇಲೆಗೆ ಹೆದರಲ್ಲ ಅವರಿಗೂ ಗೊತ್ತಿದೆ.ಅವರಿಗೆ ಏನ್ ದಾಖಲೆ ಬೇಕೋ, ಸಾರ್ವಜನಿಕ ವ್ಯಕ್ತಿ ಆಗಿದ್ದೇನೆ ನಾನು .ಆ ಮಾಲ್ ಕಟ್ಟಿದ್ದು ನಾನಲ್ಲ.ನಾನು ಈ ಮಾಲ್ ಕಟ್ಟಿಲ್ಲ, ಜಾಯಿಂಟ್ ಡೆವಲಪ್ಮೆಂಟ್ ಹಾಗೂ ಶೋಭಾ ಡೆವಲಪ್ಮೆಂಟ್ ಕಟ್ಟಿದ್ದು.ಅವರಿಗೆ ಹೇಳ್ತಿನಿ , ಅವರು ಏನೇನ್ ಬಿಲ್ಲು ಕಟ್ಟಿದ್ದಾರಾ, ತಂದು ತೋರ್ಸಿ ಅಂತೀನಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.