Publish Date: Thursday, 02 March 2023 (18:04 IST)
Updated Date: Thursday, 02 March 2023 (18:05 IST)
ಅಡುಗೆ ಅನಿಲ್ ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಎಐಸಿಸಿ ಕಾರ್ಯದರ್ಶಿ ಅಭಿಷೇಕ ದತ್ ಹಾಗೂ ನಲಪಾಡ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.ಮೈಸೂರು ಬ್ಯಾಂಕ್ ವೃತ್ತದಲ್ಲಿ ಸಿಲಿಂಡರ್ ತೆಲೆ ಮೇಲೆ ಹೊತ್ತುಕೊಂಡು ವಿನೂತನವಾಗಿ ಪ್ರತಿಭಟನೆ ಮಾಡಲಾಗಿದೆ.ಅಲ್ಲದೇ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಲಾಗಿದೆ.
ಕಾಂಗ್ರೆಸ್ ನಿಂದ ಇಂದು ಪ್ರತಿಭಟನೆ ಮೇಲೆ ಪ್ರತಿಭಟನೆ ನಡೆಯುತ್ತಿದ್ದು,ಮಹಿಳಾ ಘಟಕ,ಯೂತ್ ಕಾಂಗ್ರೆಸ್ ನಿಂದಲೂ ಪ್ರತಿಭಟನೆ ಮಾಡಲಾಗಿದ್ದು,ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಕೈ ಕಾರ್ಯ ಕರ್ತರು ವ್ಯಾಪಕ ಆಕ್ರೋಶ ಹೊರಹಾಕ್ತಿದ್ದಾರೆ.