ತೈವಾನ್ ಮೂಲದ ನಿಯೋಗ ಸಿಎಂ ಭೇಟಿ ಮಾಡಿದ್ಯಾಕೆ?

Webdunia
ಗುರುವಾರ, 20 ಜೂನ್ 2019 (14:29 IST)
ತೈವಾನ್ ಮೂಲದ ವಿಸ್ಟ್ರಾನ್ ಕಾರ್ಪೊರೇಷನ್ ಕಂಪನಿಯ  ನಿರ್ದೇಶಕ ವಿ.ಲೀ ಅವರ ನೇತೃತ್ವದ ನಿಯೋಗವು ಮುಖ್ಯ ಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದೆ.  

ಕೋಲಾರದ ನರಸಾಪುರದಲ್ಲಿ ಆರಂಭಿಸಲು ಉದ್ದೇಶಿಸಿರುವ 650 ಕೋಟಿ ರೂ.ಬಂಡವಾಳದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಉತ್ಪನ್ನಗಳ ಕಂಪನಿಗೆ ಈಗಾಗಲೇ 40 ಎಕರೆ ಜಮೀನನ್ನು ಸರ್ಕಾರ ಮಂಜೂರು ಮಾಡಿದ್ದು, ಬಾಕಿ 3 ಎಕರೆ ಜಮೀನು ಮಂಜೂರು ಮಾಡುವಂತೆ  ಲೀ ಅವರು ಮನವಿ ಮಾಡಿದರು. 

ಈಗಾಗಲೇ ವಿಸ್ಟ್ರಾನ್  ಕಂಪನಿಯ ಒಂದು ಘಟಕ  ಪೀಣ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, 1500 ಜನರಿಗೆ ಉದ್ಯೋಗ ನೀಡಿದೆ ಎಂದು ಲೀ ತಿಳಿಸಿದರು. ರಾಜ್ಯ ದಲ್ಲಿ ಕೈಗಾರಿಕಾ ಅಭಿವೃದ್ಧಿ ಹಾಗೂ ಉದ್ಯೋಗ ಸೃಜನೆ ದೃಷ್ಟಿಯಿಂದ ಸರ್ಕಾರದ ವತಿಯಿಂದ ಕಂಪನಿಗೆ ಎಲ್ಲ ಸಹಕಾರ ನೀಡುವ ಭರವಸೆಯನ್ನು  ಮುಖ್ಯಮಂತ್ರಿ ಈ ಸಂದರ್ಭದಲ್ಲಿ ನೀಡಿದರು. 

ಕಂಪನಿಯ ಸ್ಥಳೀಯ ನಿರ್ದೇಶಕ ಸೆಂಥಿಲ್ ಕುಮಾರ್  ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ. ವಿ.ರಮಣರೆಡ್ಡಿ, ವಿಸ್ಟ್ರಾನ್  ಸಂಸ್ಥೆಯ ಹಿರಿಯ  ವ್ಯವಸ್ಥಾಪಕ ಮಂಜುನಾಥ್.ಬಿ. ಉಪಸ್ಥಿತರಿದ್ದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾರಿನಲ್ಲಿ ಹೋಗುವಾಗ ಹುಡುಗಿ ನೋಡಿ ಕಣ್ಣು ಮಿಟುಕಿಸಿದ ಕಾಮುಕ: ಮುಂದೆ ಹುಡುಗಿ ಮಾಡಿದ ಕೆಲಸಕ್ಕೆ ಶಹಬ್ಬಾಶ್ ಎನ್ನಲೇಬೇಕು Video

ಗ್ಯಾರಂಟಿ ಕೊಡಲ್ಲ ಎಂದು ಬೆದರಿಕೆ ಹಾಕಿ ಎಸ್ಐಆರ್ ಮಾಡಿಸ್ತಿದ್ದಾರೆ: ಡಾ ಸುಧಾಕರ್

ಕುಲ್ಫೀ ಕೊಡಿಸ್ತೀನಿ ಬಾ ಎಂದಿದ್ದಕ್ಕೆ ಮನೆ ಮಾಲಿಕನ ಹಿಂದೆ ಹೋದ ಮಗು ಕೊನೆಗೆ ಕೊಲೆಯಾಗಿದ್ದು ಹೇಗೆ: ಸಿಸಿಟಿವಿ ದೃಶ್ಯ ವೈರಲ್ Video

ಮೊಬೈಲ್ ಟಾರ್ಚ್ ನಲ್ಲಿ ಬಸ್ ಓಡಿಸಿದ ಚಾಲಕ: ಕೆಎಸ್ಆರ್ ಟಿಸಿಯದ್ದು ಇದೆಂಥಾ ದುಸ್ಥಿತಿ Video

ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿಕೊಂಡ ಪ್ರಮುಖ ನಾಯಕರು

ಮುಂದಿನ ಸುದ್ದಿ
Show comments