Publish Date: Wed, 07 Oct 2020 (18:47 IST)
Updated Date: Wed, 07 Oct 2020 (18:50 IST)
ರಾಜ್ಯದಲ್ಲಿ ಬೈ ಎಲೆಕ್ಷನ್ ಸದ್ದು ಜೋರಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಸಿಬಿಐ ದಾಳಿ ನಡೆದಿದೆ.
ಈ ನಡುವೆ ಯಾವುದೇ ಕಾರಣಕ್ಕೂ ಸಿಬಿಐ ದಾಳಿ ವಿಷಯವನ್ನೇ ಬೈ ಎಲೆಕ್ಷನ್ ನಲ್ಲಿ ಬಳಸೋದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರಾಜ್ಯ ಸರಕಾರದ ನಡೆಯನ್ನ ಜನರು ಗಮನಿಸುತ್ತಿದ್ದಾರೆ. ಜನರೇ ಸರಿಯಾದ ವೇಳೆ ಸರಿಯಾದ ಮೆಸೇಜ್ ಕೊಡುತ್ತಾರೆ ಎಂದಿದ್ದಾರೆ.
ಆರ್ ಆರ್ ನಗರಕ್ಕೆ ಕುಸುಮಾ ಮತ್ತು ಶಿರಾ ಕ್ಷೇತ್ರಕ್ಕೆ ಟಿ.ಬಿ.ಜಯಚಂದ್ರ ಹೆಸರನ್ನು ಹೈಕಮಾಂಡ್ ಗೆ ಸೂಚಿಸಿದ್ದು, ಹೈಕಮಾಂಡ್ ಅಧಿಕೃತಗೊಳಿಸಿ ಘೋಷಣೆ ಮಾಡಿದೆ ಎಂದಿದ್ದಾರೆ.