Select Your Language

Notifications

webdunia
webdunia
webdunia
webdunia

ದೇವಾಲಯಗಳಲ್ಲಿ ಹುಂಡಿ ಕದಿಯುತ್ತಿದ್ದವರ ಸೆರೆ!

ದೇವಾಲಯ
ದೇಗುಲಗಳಲ್ಲಿ ಹುಂಡಿ ಸೇರಿದಂತೆ ದೇವರ ವಿಗ್ರಹಗಳನ್ನು ಕದಿಯುತ್ತಿದ್ದ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ಮೈಸೂರು ಜಿಲ್ಲೆಯ ಎರಡು ಹಾಗೂ ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲೂಕುಗಳ 9 ದೇವಸ್ಥಾನಗಳಲ್ಲಿ ದೇವರ ವಿಗ್ರಹ ಸೇರಿದಂತೆ ಆಭರಣಗಳನ್ನು ಕದಿಯುತ್ತಿದ್ದ ಆರೋಪಿಗಳನ್ನು ಚಾಮರಾಜನಗರ ಪೊಲೀಸರು ಬಂಧನ ಮಾಡಿದ್ದಾರೆ.
ಮೈಸೂರು ಜಿಲ್ಲೆಯ ತೊರವಳ್ಳಿಮೋಳೆ ಗ್ರಾಮದ ಮಹೇಶ್, ಮಹದೇವಸ್ವಾಮಿ, ಚಾಮರಾಜನಗರ ತಾಲೂಕಿನ ತೆಂಕಲಮೋಳೆ ಗ್ರಾಮದ ಮನುಕುಮಾರ್, ಸುರೇಶ್, ಅಶೋಕ್ ಎಂಬುವರನ್ನು ತೆರಕಣಾಂಬಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ 2 ಲಕ್ಷ 70 ಸಾವಿರ ರೂ. ಬೆಲೆಬಾಳುವ ವಿಗ್ರಹದ ಮುಖವಾಡ, ಓಲೆಗಳು, ಬಳೆಗಳು, ಕಳಸ, ಚೊಂಬುಗಳು, ನಂದಿಕಂಬದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೆಂದ್ರಕುಮಾರ್ ಮೀನಾ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ್ದಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಕುಟುಂಬದ 9 ಜನರ ಸಾವು: ಕುಟುಂಬದವರಿಗೆ ಸಾಂತ್ವನ