Publish Date: Tue, 21 Jul 2020 (18:59 IST)
Updated Date: Tue, 21 Jul 2020 (19:01 IST)
ಲಾಕ್ ಡೌನ್ ಇನ್ಮುಂದೆ ಜಾರಿಯಲ್ಲಿ ಇರಲ್ಲ. ಹೀಗಂತ ಸಿಎಂ ಹೇಳಿದ್ದಾರೆ.
ಕೋವಿಡ್ -19 ಕೇಸ್ ಗಳು ಹೆಚ್ಚಾಗುತ್ತಿದ್ದರೂ ಸಹ ಅದಕ್ಕೆ ಲಾಕ್ ಡೌನ್ ಮಾತ್ರವೇ ಪರಿಹಾರ ಅಲ್ಲ.
ಬೆಂಗಳೂರು ಸೇರಿದಂತೆ ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಲಾಕ್ ಡೌನ್ ಮಾಡುವುದಿಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಇನ್ನು, ವೈರಸ್ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಜನರಲ್ಲಿ ಮನವಿ ಮಾಡಿದ್ದಾರೆ.