Publish Date: Tue, 22 Aug 2023 (16:00 IST)
Updated Date: Tue, 22 Aug 2023 (15:42 IST)
ರಿಜಿಸ್ಟ್ರೇಷನ್ ಕಾಯ್ದೆಯಿಂದ ಆಸ್ತಿ ಮಾಲೀಕರಿಗೆ ಲಾಭವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನೋಂದಣಿ ಕಾಯಿದೆ 1908ಕ್ಕೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಈ ವರ್ಷ ಜುಲೈ 19ರಂದು ಕರ್ನಾಟಕ ವಿಧಾನಸಭೆ ಅಂಗೀಕರಿಸಿದ ಮಹತ್ವದ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ಬೀಳಲಿದೆ. ನಕಲಿ ದಾಖಲೆಗಳನ್ನು ಬಳಸಿ ನೋಂದಣಿ ರದ್ದು ಮಾಡುವ ಹಕ್ಕನ್ನು ಜಿಲ್ಲಾ ರಿಜಿಸ್ಟ್ರಾರ್ಗಳಿಗೆ ಅಧಿಕಾರ ನೀಡುವ ಮೂಲಕ ವಂಚನೆ ಮತ್ತು ಸಂತ್ರಸ್ಥರ ಆಸ್ತಿ ಮಾಲೀಕರಿಗೆ ಹೆಚ್ಚಿನ ಪರಿಹಾರವನ್ನು ನೀಡಲು ಮತ್ತು ನಕಲಿ ದಾಖಲೆಗಳಲ್ಲಿ ತೊಡಗಿರುವ ಅಧಿಕಾರಿಗಳಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.