Publish Date: Tue, 22 Aug 2023 (15:07 IST)
Updated Date: Tue, 22 Aug 2023 (15:10 IST)
BBMP ಅಗ್ನಿಅವಘಡ ವಿಚಾರಕ್ಕೆ ಸಂಬಂಧಿಸಿದಂತೆ BBMP ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗಾಯಾಳುಗಳು ಗುಣಮುಖರಾಗ್ತಿದ್ದಾರೆ. ಗಾಯಾಳುಗಳಿಗೆ ಉತ್ತಮವಾದ ಟ್ರಿಟ್ಮೆಂಟ್ ನಡೀತಿದೆ. BBMP ಎಲ್ಲಾ ರೀತಿಯ ಚಿಕಿತ್ಸೆಗೂ ಸಿದ್ದವಿದೆ. ಎಲ್ಲಾ ರೀತಿಯ ಚಿಕಿತ್ಸೆಯನ್ನ ನೀಡಲು ಸಿದ್ದವಿದ್ದೇವೆ. ಇನ್ನು ಹೆಲ್ತ್ ಬುಲೆಟಿನ್ನಲ್ಲಿ ಜ್ಯೋತಿ ಹಾಗೂ ಶಿವಕುಮಾರ್ ಕಂಡಿಷನ್ ಕ್ರಿಟಿಕಲ್ ಇರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಡಾಕ್ಟರ್ ಟ್ರಿಟ್ಮೆಂಟ್ ಮಾಡ್ತಿದ್ದಾರೆ. ಕೆಲ ವಿಚಾರಗಳನ್ನ ಗೌಪ್ಯವಾಗಿಡಬೇಕು. ದಿನನಿತ್ಯ ಕೆಲವೊಮ್ಮೆ ಆರೋಗ್ಯ ಏರು ಪೇರು ಆಗೋದು ಸಹಜ. ವೈದ್ಯರು ಉತ್ತಮವಾದ ಚಿಕಿತ್ಸೆ ನೀಡ್ತಿದ್ದಾರೆ ಎಂದರು