Publish Date: Thu, 26 Aug 2021 (10:32 IST)
Updated Date: Thu, 26 Aug 2021 (10:35 IST)
ಬೆಂಗಳೂರು: ಸ್ವೆಟರ್ ಹಗರಣಕ್ಕೆ ತಮ್ಮ ಹೆಸರು ಎಳೆದು ತಂದಿದ್ದಕ್ಕೆ ದಲಿತ ಸಮಿತಿ ಮುಖ್ಯಸ್ಥ ರಘು ವಿರುದ್ಧ ವಾಗ್ದಾಳಿ ನಡೆಸಿದ್ದ ನವರಸನಾಯಕ ಜಗ್ಗೇಶ್ ಅವರನ್ನು ನಾಯಿಗೆ ಹೋಲಿಸಿದ್ದರು.
ಜಗ್ಗೇಶ್ ನಾಯಿಗೆ ಹೋಲಿಸಿದ್ದಕ್ಕೆ ಈಗ ರಘು ಪ್ರತಿ ದೂರು ನೀಡಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಿಗೆ ಸ್ವೆಟರ್ ಹಂಚಿಕೆಯಲ್ಲಿ ಜಗ್ಗೇಶ್ ಹಾಗೂ ಸಹೋದರ ಕೋಮಲ್ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ರಘು ಆರೋಪ ಮಾಡಿದ್ದರು.
ಇದರ ವಿರುದ್ಧ ಜಗ್ಗೇಶ್ ಮಾನನಷ್ಟ ಮೊಕದ್ದಮೆಯನ್ನೂ ಹೂಡಿದ್ದರು. ಬಳಿಕ ನಾಯಿಗಳ ಸಮಕ್ಕೆ ನಾನು ಇಳಿಯಲ್ಲ ಎಂದಿದ್ದರು. ಜಗ್ಗೇಶ್ ಹೇಳಿಕೆ ವಿರುದ್ಧ ಇದೀಗ ರಘು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಡಿಜಿಪಿಗೆ ದೂರು ಸಲ್ಲಿಸಿದ್ದಾರೆ.