Publish Date: Wed, 25 Aug 2021 (17:39 IST)
Updated Date: Wed, 25 Aug 2021 (17:41 IST)
ಬೆಂಗಳೂರು: ಶಾಲಾ ಮಕ್ಕಳಿಗೆ ಸ್ವೆಟರ್ ವಿತರಣೆಯಲ್ಲಿ ಅವ್ಯವಹಾರವಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ರಘು ಮಾಡಿರುವ ಆರೋಪದಲ್ಲಿ ತಮ್ಮ ಹೆಸರೂ ಕೇಳಿಬಂದಿರುವುದಕ್ಕೆ ನಟ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಘು ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಜಗ್ಗೇಶ್, ನಾನು ಯಾವುದೇ ತಪ್ಪು ಮಾಡಿಲ್ಲ. ನನಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ. ಹಾಗಿದ್ದರೂ ನನ್ನ ಹೆಸರು ಯಾಕೆ ಎಳೆದು ತಂದಿರಿ? ಎಂದು ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಜಗ್ಗೇಶ್ ಮೈ ಬಗ್ಗಿಸಿ ದುಡಿದು ತಿನ್ನೋ ಕಮ್ಮಿಯಾಗಿ, ಅನಾಚಾರ ಮಾಡುವವರಿಗೆ ಸರಿಯಾದ ಮಾರ್ಗದಲ್ಲಿ ಕಂಡರೆ ನಾಲಿಗೆ ಎಳೆಯಲು ಪ್ರಯತ್ನಿಸುತ್ತಾರೆ. ತಾನು ಕಳ್ಳನಾದರೆ, ಲೋಕವೆಲ್ಲಾ ಕಳ್ಳರು ಎನ್ನುವ ಲಕ್ಷಣದವರು. ಕಲುಷಿತ ಕೆಸರಲ್ಲಿ ಕಮಲದಂತೆ ರಾಯರ ದಯೆಯಿಂದ ಬದುಕುತ್ತಿರುವೆ. ಅಣಕವೇ ನನ್ನ ಯಶಸ್ಸು ಎಂದಿದ್ದಾರೆ.