Webdunia - Bharat's app for daily news and videos

Install App

ಚೀನಾದಲ್ಲಿ ಮರಣಮೃದಂಗ ಭಾರಿಸುತ್ತಿರುವ ಮತ್ತೊಂದು ವೈರಸ್: ಏನಿದು HMPV ಇಲ್ಲಿದೆ ವಿವರ

Krishnaveni K
ಶುಕ್ರವಾರ, 3 ಜನವರಿ 2025 (14:01 IST)
ಬೀಜಿಂಗ್: ಮಹಾಮಾರಿ ಕೊರೋನಾ ವೈರಸ್ ಬಂದು ಐದು ವರ್ಷಗಳಾಗುತ್ತಿರುವ ಬೆನ್ನಲ್ಲೇ ಚೀನಾದಲ್ಲಿ ಮತ್ತೊಂದು ಆತಂಕಕಾರೀ ವೈರಸ್ ಬಂದಿದ್ದು ಮರಣ ಮೃದಂಗ ಭಾರಿಸುತ್ತಿದೆ ಎಂಬ ಆತಂಕಕಾರೀ ಸುದ್ದಿ ಬಂದಿದೆ. ಅಷ್ಟಕ್ಕೂ ಈ HMPV ವೈರಸ್ ಎಂದರೇನು ಇಲ್ಲಿದೆ ವಿವರ.

ಕೊವಿಡ್ ಕೂಡಾ ಚೀನಾದಿಂದಲೇ ಜಗತ್ತಿನಾದ್ಯಂತ ಹರಡಿತ್ತು. ಇದೀಗ ಮತ್ತೊಂದು ಮಹಾಮಾರಿ ಚೀನಾದಿಂದ ಜಗತ್ತಿನಾದ್ಯಂತ ಹರಡುವ ಭೀತಿ ಎದುರಾಗಿದೆ. ಮಾನವ ಮೆಟಾಪ್ನ್ಯೂವೈರಸ್ (HMPV) ಚೀನಾದಾದ್ಯಂತ ಹಬ್ಬಿದೆ. ಇದರಿಂದ ಸಾವಿರಾರು ಮಂದಿ ಆಸ್ಪತ್ರೆಗಳತ್ತ ದೌಢಾಯಿಸುತ್ತಿದ್ದಾರೆ. ಈ ಬಗ್ಗೆ ಕೆಲವು ವಿಡಿಯೋಗಳೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ಬಗ್ಗೆ ಇನ್ನೂ ಚೀನಾ ಸರ್ಕಾರ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಕೆಲವು ಸೋಷಿಯಲ್ ಮೀಡಿಯಾ ವರದಿಗಲ ಪ್ರಕಾರ ಮೆಟಾಪ್ನ್ಯೂವೈರಸ್, ನ್ಯುಮೋನಿಯಾ, ಕೊರೋನಾ ಸೇರಿದಂತೆ ಹಲವು ಸೋಂಕು ರೋಗಗಳು ಭಾರೀ ಪ್ರಮಾಣದಲ್ಲಿ ಹರಡುತ್ತಿವೆ.

HMPV ವೈರಸ್ ಎಂದರೇನು, ಲಕ್ಷಣಗಳೇನು
ಮಾನವ ಮೆಟಾಪ್ನ್ಯೂವೈರಸ್ ಎಂದರೆ ವಿಶೇಷವಾಗಿ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಬರಬಹುದಾದ ಉಸಿರಾಟದ ಸೋಂಕಿನ ಅನಾರೋಗ್ಯವಾಗಿದೆ. ಕಡಿಮೆ ರೋಗ ನಿರೋಧಕ ಶಕ್ತಿ ಇರುವವರಿಗೆ ಇದು ಬೇಗನೇ ತಗುಲುತ್ತದೆ. ಸಾಮಾನ್ಯ ಕಫ, ಕೆಮ್ಮು, ಶೀತ, ಜ್ವರ, ಗಂಟಲು ನೋವು ಇತ್ಯಾದಿ ಇದರ ಲಕ್ಷಣಗಳಾಗಿವೆ.

ಅಪಾಯಗಳೇನು?
ಈ ಸೋಂಕು ಉಲ್ಬಣಗೊಂಡರೆ ವಿಶೇಷವಾಗಿ 5 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳಲ್ಲಿ ನ್ಯುಮೋನಿಯಾ, ಅಸ್ತಮಾ, ಬ್ರಾಂಕೈಟಿಸ್ ಸಮಸ್ಯೆ ಉಂಟು ಮಾಡಬಹುದು. ಸರಿಯಾಗಿ ಚಿಕಿತ್ಸೆ ಲಭಿಸದೇ ಹೋದರೆ ಪರಿಸ್ಥಿತಿ ಕೈಮೀರಿ ಹೋಗಬಹುದು.

 
ಮುನ್ನೆಚ್ಚರಿಕೆಗಳೇನು?
ಆಗಾಗ ಕೈ ತೊಳೆದುಕೊಳ್ಳುತ್ತಿರಿ.
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವನೆ ಮಾಡಿ
ಸೋಂಕು ಪೀಡಿತ ಜನರೊಂದಿಗೆ ಸಂಪರ್ಕವಾಗದಂತೆ ಎಚ್ಚರಿಕೆ ವಹಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೊಂದು ಹಾಸ್ಯಾಸ್ಪದ ಕಾರ್ಯಕ್ರಮ: ಸಾಧನಾ ಸಮಾವೇಶಕ್ಕೆ ಆರ್‌ ಅಶೋಕ್ ಆಕ್ರೋಶ

ಸಾಧನಾ ಸಮಾವೇಶದಲ್ಲಿ ಸಿಎಂ ಈ ಪ್ರಶ್ನೆಗೆಲ್ಲ ಉತ್ತರಿಸಬೇಕು: ಎಚ್‌ ವಿಶ್ವನಾಥ್‌

DK Shivakumar: ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ವರಸೆಯೇ ಬದಲಿಸಿದ ಡಿಕೆ ಶಿವಕುಮಾರ್

ಬಿಡದಿಯ ಮೂಕ ಬಾಲಕಿಯ ಹತ್ಯೆ ಪ್ರಕರಣಕ್ಕೆ ಬಿಗ್‌ಟ್ವಿಸ್ಟ್‌, ಸಿಸಿಟಿವಿಯಲ್ಲಿ ಸೆರೆಯಾಯಿತು ಸಾವಿನ ಅಸಲಿ ಕಾರಣ

ಏನ್ರಿ ಅದು ಕ್ಷಮೆ, ಮೊದಲು ನಡತೆಯಲ್ಲಿ ಬದಲು ಮಾಡಿಕೊಳ್ಳಿ: ಸೋಫಿಯಾ ಖುರೇಷಿ ವಿರುದ್ಧದ ಹೇಳಿಕೆಗೆ ವಿಜಯ್ ಶಾಗೆ ಗದರಿದ ಸುಪ್ರೀಂ

ಮುಂದಿನ ಸುದ್ದಿ
Show comments