ಕೊಟ್ಟ ಅವಕಾಶ ಬಳಸದ ರಿಷಬ್ ಪಂತ್ ಮೇಲೆ ತೂಗುಗತ್ತಿ

Webdunia
ಶನಿವಾರ, 21 ಸೆಪ್ಟಂಬರ್ 2019 (09:02 IST)
ಮುಂಬೈ: ಧೋನಿ ನಂತರ ಟೀಂ ಇಂಡಿಯಾಗೆ ಹೊಸ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ತಯಾರು ಮಾಡಲು ರಿಷಬ್ ಪಂತ್ ರನ್ನು ಟೆಸ್ಟ್, ಏಕದಿನ, ಟಿ20 ಪಂದ್ಯಗಳಲ್ಲಿ ಸತತವಾಗಿ ಅವಕಾಶ ನೀಡಿ ಪರೀಕ್ಷಿಸಲಾಗುತ್ತಿದೆ.


ಆದರೆ ರಿಷಬ್ ಮಾತ್ರ ತಮಗೆ ಕೊಟ್ಟ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಂತೆ ತೋರುತ್ತಿಲ್ಲ. ಇದರಿಂದಾಗಿ ಸಾಕಷ್ಟು ಟೀಕೆಗೊಳಗಾಗುತ್ತಿದ್ದಾರೆ. ವಿಕೆಟ್ ಕೀಪಿಂಗ್ ಇರಲಿ, ಬ್ಯಾಟಿಂಗ್ ಇರಲಿ ಎರಡರಲ್ಲೂ ಟೆಸ್ಟ್ ಮತ್ತು ಸೀಮಿತ ಓವರ್ ಪಂದ್ಯಗಳಲ್ಲಿ ವಿಫಲವಾಗಿರುವ ರಿಷಬ್ ಬದಲಿಗೆ ಈಗ ಮತ್ತೊಬ್ಬ ವಿಕೆಟ್ ಕೀಪರ್ ಹುಡುಕಾಟದಲ್ಲಿ ಬಿಸಿಸಿಐ ಇದೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಸದ್ಯಕ್ಕೆ ರಿಷಬ್ ಸ್ಥಾನಕ್ಕೆ ವೃದ್ಧಿಮಾನ್ ಸಹಾ ಆಡಬಹುದಾಗಿದೆ. ಆದರೆ ಸೀಮಿತ ಓವರ್ ಗಳಲ್ಲಿ ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಬ್ಯಾಟಿಂಗ್ ಕೂಡಾ ಮಾಡಬಲ್ಲ ಸಮರ್ಥ ವಿಕೆಟ್ ಕೀಪರ್ ಹುಡುಕಾಟ ನಡೆಸುವ ಅನಿವಾರ್ಯತೆ ಟೀಂ ಇಂಡಿಯಾಗಿದೆ. ರಿಷಬ್ ಹೊರತಾಗಿ ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಪಟ್ಟಿಯಲ್ಲಿದ್ದಾರೆ. ಸಂಜು ಈಗಾಗಲೇ ಫಿಟ್ನೆಸ್ ವಿಚಾರದಲ್ಲಿ ಫೈಲ್ ಆದರೂ ಈಗ ಫಿಟ್ನೆಸ್ ಸಾಬೀತುಪಡಿಸಿದರೆ ಉತ್ತಮ ಕ್ಯಾಂಡಿಡೇಟ್ ಆಗಬಲ್ಲರು. ಇದು ರಿಷಬ್ ಮೇಲೆ ಸಹಜವಾಗಿಯೇ ಒತ್ತಡ ತಂದಿದೆ. ದ.ಆಫ್ರಿಕಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲೂ ರಿಷಬ್ ವಿಫಲರಾದರೆ ಅವರಿಗೆ  ಮುಂದಿನ ದಿನಗಳಲ್ಲಿ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪುತ್ರ ಅಕಾಯ್ ಕೈ ಹಿಡಿದು ಲಂಡನ್ ಬೀದಿಯಲ್ಲಿ ಸುತ್ತಾಡುತ್ತಿರುವ ವಿರಾಟ್ ಕೊಹ್ಲಿ Video

T20 WC: ಟೀಂ ಇಂಡಿಯಾ ಗೆಲುವಿಗೆ ಆ ಎರಡು ಶಾಟ್ ಕಾರಣ, ಯಾರೂ ಅದರ ಬಗ್ಗೆ ಮಾತಾಡಲ್ಲ ಎಂದು ಬೇಸರಿಸಿದ ಜಸ್ಪ್ರೀತ್ ಬುಮ್ರಾ

T20 WC: ಟೀಂ ಇಂಡಿಯಾಗೆ ಸೆಮಿಫೈನಲ್ ನಲ್ಲಿ ಯಾರು ಎದುರಾಳಿ, ಯಾವಾಗ ಇಲ್ಲಿದೆ ವಿವರ

T20 WC: ಅಭಿಷೇಕ್ ಬಿಟ್ಟು ಸಂಜು ಹಾಕ್ಲಾ ಎಂದಿದ್ದ ಸೂರ್ಯಕುಮಾರ್ ಯಾದವ್: ಇದೀಗ ಫುಲ್ ಟ್ರೋಲ್

Ind vs WI, T20 WC: ಟೀಕೆಗಳಿಗೆ ಅಬ್ಬರದ ಬ್ಯಾಟಿಂಗ್‌ನಿಂದಲೇ ಉತ್ತರಿಸಿದ ಸಂಜು ಸ್ಯಾಮ್ಸನ್‌

ಮುಂದಿನ ಸುದ್ದಿ
Show comments