Publish Date: Tue, 05 Jan 2021 (09:33 IST)
Updated Date: Tue, 05 Jan 2021 (09:36 IST)
ಕೋಲ್ಕೊತ್ತಾ: ಲಘು ಹೃದಯಾಘಾತದ ಬಳಿಕ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೊಳಗಾದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಾಳೆ ಆಸ್ಪತ್ರೆಯಿಂದ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಗಂಗೂಲಿ ಈಗ ಚೇತರಿಸಿಕೊಳ್ಳುತ್ತಿದ್ದು, ಆರೋಗ್ಯದಿಂದಿದ್ದಾರೆ ಎಂದು ಆಸ್ಪತ್ರೆ ಹೇಳಿಕೆ ಬಿಡುಗಡೆ ಮಾಡಿದೆ. ಗಂಗೂಲಿ ಆರೋಗ್ಯವಾಗಿದ್ದು, ಅವರಿಗೆ ಬೈಪಾಸ್ ಸರ್ಜರಿ ಅಗತ್ಯವಿಲ್ಲ ಎಂದು ವೈದ್ಯರು ತೀರ್ಮಾನಿಸಿದ್ದಾರೆ. ಹೃದಯದ ಮೂರು ರಕ್ತ ನಾಳಗಳಲ್ಲಿ ದೋಷ ಕಂಡುಬಂದಿತ್ತು. ಆ ಪೈಕಿ ಒಂದಕ್ಕೆ ಸ್ಟೆಂಟ್ ಅಳವಡಿಕೆ ಮೂಲಕ ಸರಿಪಡಿಸಲಾಗಿದೆ. ಉಳಿದ ಎರಡು ರಕ್ತನಾಳಗಳಿಗೆ ಮುಂದಿನ ದಿನಗಳಲ್ಲಿ ಆಂಜಿಯೋಪ್ಲಾಸ್ಟಿ ನಡೆಸಬೇಕಾಗಬಹುದು. ಸದ್ಯಕ್ಕೆ ಅವರಿಗೆ ಎದೆನೋವಿನ ಸಮಸ್ಯೆಯಿಲ್ಲ. ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.