Select Your Language

Notifications

webdunia
webdunia
webdunia
webdunia

ಪಾಕ್ ವಿರುದ್ಧ ಸೋಲಿಗೆ ಅರ್ಷ್ ದೀಪ್-ಭುವನೇಶ್ವರ್ ಕುಮಾರ್ ಫ್ಯಾನ್ಸ್ ನಡುವೆ ಕೆಸರೆರಚಾಟ

ಅರ್ಷ್ ದೀಪ್ ಸಿಂಗ್
ದುಬೈ: ಪಾಕಿಸ್ತಾನ ವಿರುದ್ಧ ಸೂಪರ್ ಫೋರ್ ಹಂತದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿದ್ದಕ್ಕೆ ಕಾರಣ ಯಾರು ಎಂಬ ಬಗ್ಗೆ ಈಗ ವೇಗಿಗಳಾದ ಅರ್ಷ್ ದೀಪ್ ಸಿಂಗ್ ಮತ್ತು ಭುವನೇಶ‍್ವರ್ ಕುಮಾರ್ ಫ್ಯಾನ್ಸ್ ನಡುವೆ ಕೆಸರೆರಚಾಟ ನಡೆದಿದೆ.

ಅರ್ಷ್ ದೀಪ್ ಸಿಂಗ್ 18 ನೇ ಓವರ್ ನಲ್ಲಿ ಕ್ಯಾಚ್ ಬಿಟ್ಟಿದ್ದಕ್ಕೆ ಇನ್ನಿಲ್ಲದಂತೆ ಟೀಕೆಗೊಳಗಾಗಿದ್ದರು. ಅವರನ್ನು ಪ್ರತ್ಯೇಕತಾವಾದಿ ಎಂದೂ ನೆಟ್ಟಿಗರು ಜರೆದಿದ್ದರು.

ಇದರ ಬೆನ್ನಲ್ಲೇ ಅರ್ಷ್ ದೀಪ್ ಫ್ಯಾನ್ಸ್ ಅವರ ಪರವಾಗಿ ಬ್ಯಾಟ್ ಬೀಸಿದ್ದು, ಈ ಪಂದ್ಯ ಸೋಲಲು ಭುವನೇಶ್ವರ್ ಕುಮಾರ್ ಕಾರಣ ಎಂದು ದೂರಿದ್ದಾರೆ. ಭುವಿ 19 ನೇ ಓವರ್ ನಲ್ಲಿ ಸಿಕ್ಕಾಪಟ್ಟೆ ರನ್ ಬಿಟ್ಟುಕೊಟ್ಟಿದ್ದೇ ಸೋಲಿಗೆ ನಿಜ ಕಾರಣ ಎಂದು ಕೆಲವರು ಕಿಡಿ ಕಾರಿದ್ದಾರೆ. ಇದರ ನಡುವೆ ಅರ್ಷ್ ದೀಪ್ ಮತ್ತು ಭುವಿ ಫ್ಯಾನ್ಸ್ ನಡುವೆ ಕೆಸರೆರಚಾಟ ಶುರುವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್ ಫೈನಲ್ ಗೆ ಅರ್ಹತೆ ಪಡೆಯಲು ಟೀಂ ಇಂಡಿಯಾ ಎಷ್ಟು ಪಂದ್ಯ ಗೆಲ್ಲಬೇಕು?