Publish Date: Thu, 27 Dec 2018 (09:17 IST)
Updated Date: Thu, 27 Dec 2018 (09:21 IST)
ಬೆಂಗಳೂರು: ಲಕ್ಷ್ಮೀ ದೇವಿ ಅಲಂಕಾರ ಪ್ರಿಯೆ. ದೇವಿಗೆ ಪ್ರಿಯವಾಗುವ ಆಹಾರ ವಸ್ತು, ಅಲಂಕಾರ ಮಾಡಿದರೆ ಆಕೆ ಒಲಿದುಬರುತ್ತಾಳೆ ಎಂಬ ನಂಬಿಕೆಯಿದೆ.
ಕಮಲ ಹೂ ಎಂದರೆ ಲಕ್ಷ್ಮೀಗೆ ಪ್ರಿಯವಂತೆ. ಹಾಗಾಗಿ ದೇವಿಯ ಆರಾಧನೆ ಮಾಡುವಾಗ ಕಮಲದ ಹೂವಿಟ್ಟು ಪೂಜೆ ಮಾಡುವುದನ್ನು ಮರೆಯಬೇಡಿ.
ಅದೇ ರೀತಿ ದೇವಿಗೆ ನೈವೇದ್ಯವಾಗಿ ಅನ್ನ, ಯಾವುದಾದರೊಂದು ಬೇಳೆ ಕಾಳಿನಿಂದ ತಯಾರಿಸಿದ ಆಹಾರ, ಬೆಲ್ಲ ಹಾಕಿ ಮಾಡಿದ ಅಕ್ಕಿ ಪಾಯಸ, ಕಜ್ಜಾಯ ನೀಡಿದರೆ ದೇವಿ ಪ್ರಸನ್ನಳಾಗುತ್ತಾಳೆ ಎಂಬ ನಂಬಿಕೆಯಿದೆ. ಹೀಗಾಗಿ ಲಕ್ಷ್ಮೀ ದೇವಿಗೆ ನೈವೇದ್ಯ ನೀಡುವಾಗ ಈ ಆಹಾರ ವಸ್ತುಗಳು ಇರುವಂತೆ ನೋಡಿಕೊಳ್ಳಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ