Publish Date: Wed, 18 Sep 2019 (08:44 IST)
Updated Date: Wed, 18 Sep 2019 (08:47 IST)
ಬೆಂಗಳೂರು: ನಾವು ಯಾಕೆ ಪಿತೃ ಕಾರ್ಯ ಮಾಡಬೇಕು? ಯಾಕೆ ಪಿತೃ ಪಕ್ಷವನ್ನು ಆಚರಿಸಬೇಕು? ಯಾಕೆಂದರೆ ಜನ್ಮ ಕೊಟ್ಟವರ ಋಣವನ್ನು ನಾವು ಈ ರೀತಿ ತೀರಿಸಬೇಕು.
ನೀವು ಕೊಟ್ಟ ಅನ್ನದಿಂದ ನಿಮ್ಮ ಮುಂದಿನ ಪೀಳಿಗೆ ಅಭಿವೃದ್ಧಿ ಹೊಂದುತ್ತದೆ. ಶ್ರದ್ಧೆಯಿಂದ ಮಾಡಿ. ಅದಕ್ಕೆ ಹೇಳುವುದು ಶ್ರದ್ಧೆಯಿಂದ ಮಾಡಿದರೆ ಶ್ರಾದ್ಧ ಭಕ್ತಿಯಿಂದ ಮಾಡಿದರೆ ಪೂಜೆ ಫಲ ದೊರೆಯುವುದು ಎಂದು.
ಅತ್ಯಂತ ಶ್ರದ್ಧೆಯಿಂದ ಶ್ರಾದ್ಧ ಮಾಡಿ ನಿಷ್ಠೆಯಿಂದ ಪಿಂಡ ಪ್ರಧಾನ ಮಾಡಿ ಪಿತೃದೇವತೆಗಳ ಅಂತರ್ಯಾಮಿಯಾದ ಶ್ರೀ ಜನಾರ್ಧನ ರೂಪಿ ಭಗವಂತನನ್ನು ತೃಪ್ತಿ ಪಡಿಸಬೇಕು. ಇದರಿಂದ ಪಿತೃಗಳಿಗೆ ಸದ್ಗತಿಯು ದೊರೆಯುತ್ತದೆಂಬುದು ನಂಬಿಕೆ.