Webdunia - Bharat's app for daily news and videos

Install App

ಈ ಪೂಜೆ ಮಾಡಿದರೆ ಪಾಪಗಳಿಂದ ಮುಕ್ತಿ ಸಿಗಬಹುದು

Webdunia
ಗುರುವಾರ, 7 ಮಾರ್ಚ್ 2019 (09:03 IST)
ಬೆಂಗಳೂರು: ಯಾವುದೇ ದೇವಾಲಯಕ್ಕೆ ಹೋದರೆ ಅಲ್ಲಿ ಪ್ರದೋಷ ಪೂಜೆ ಎಂಬ ಫಲಕ ಕಾಣುತ್ತೇವೆ. ಅಸಲಿಗೆ ಪ್ರದೋಷ ಪೂಜೆ ಎಂದರೇನು? ಅದರ ಮಹತ್ವವೇನು ಗೊತ್ತಾ?


ಸಂಜೆ ನಾಲ್ಕ ಮೂವತ್ತೈದರಿಂದ ಆರೂವರೆಯವರೆಗಿನ ಕಾಲವನ್ನು ಪ್ರದೋಷ ಕಾಲ ಎನ್ನುತ್ತೇವೆ. ಇದು ಶಿವ ಲೋಕ ಕಲ್ಯಾಣಕ್ಕಾಗಿ ಹಾಲಾಹಲವನ್ನು ಸೇವಿಸಲು ಧ್ಯಾನದಿಂದ ಎಚ್ಚರಗೊಂಡ ಕಾಲ. ಈ ಕಾಲದಲ್ಲಿ ಪೂಜೆ ಮಾಡಿದರೆ ಸಕಲ ಪಾಪಗಳು ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ.

ಅದರಲ್ಲೂ ಶನಿ ಪ್ರದೋಷ ಪೂಜೆ ವಿಶಿಷ್ಟವಾದದ್ದು. ಒಂದು ಶನಿಪ್ರದೋಷ ಪೂಜೆ ಮಾಡಿದರೆ ಐದು ವರ್ಷ ಶಿವ ದೇವಾಲಯಕ್ಕೆ ಹೋದ ಫಲ ಸಿಗುತ್ತದೆ. ಶನಿವಾರ ಪ್ರದೋಷ ಪೂಜೆ ಮಾಡುವುದರಿಂದ ಪದವಿಯಲ್ಲಿ ಉನ್ನತಿ, ಕಳೆದು ಹೋದ ಸಂಪತ್ತು ದೊರೆಯುತ್ತದೆ.

ಇನ್ನು, ಸಾಡೆ, ಸಾತಿಯ ಪ್ರಭಾವ ಕಡಿಮೆಯಾಗುತ್ತದೆ ಅಥವಾ ಹೊರಟುಹೋಗುತ್ತದೆ. ಈ ದಿನ ಶನಿ ಮತ್ತು ಈಶ್ವರ ಇಬ್ಬರೂ ಈ ಪೂಜೆ ಮಾಡುವವರನ್ನು ಅನುಗ್ರಹಿಸುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ಪ್ರದೋಷ ಪೂಜೆ ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗಣೇಶ ಹಬ್ಬ ದಿನಾಂಕ, ಪೂಜೆ ಮುಹೂರ್ತ ಮತ್ತು ಮಂಟಪ ಪ್ರತಿಷ್ಠಾಪನೆಗೆ ಮುಹೂರ್ತದ ಬಗ್ಗೆ ಇಲ್ಲಿದೆ ವಿವರ

ಶ್ರೀ ದತ್ತಾತ್ರೇಯ ಚಿನ್ಮಯಾಷ್ಟಕಂ ಸ್ತೋತ್ರ ಗುರುವಾರ ತಪ್ಪದೇ ಪಠಿಸಿ

ಶ್ರೀ ಗಣೇಶ ಪ್ರಾತಃಸ್ಮರಣಂ ಸ್ತೋತ್ರ

ಶ್ರೀ ದುರ್ಗಾ ಪಂಚರತ್ನ ಸ್ತೋತ್ರ ತಪ್ಪದೇ ಓದಿ

ಈಶಾನ ಸ್ತುತಿ ಸ್ತೋತ್ರ ಮತ್ತು ಪಠಿಸುವುದರ ಫಲವೇನು ತಿಳಿಯಿರಿ

ಮುಂದಿನ ಸುದ್ದಿ
Show comments