Publish Date: Fri, 25 Jan 2019 (09:01 IST)
Updated Date: Fri, 25 Jan 2019 (09:02 IST)
ಬೆಂಗಳೂರು: ನಮ್ಮ ಹಿಂದೂ ಸಂಪ್ರದಾಯದಲ್ಲಿ ಏಕಾದಶಿ ಉಪವಾಸ, ಷಷ್ಠಿ ಉಪವಾಸ ಎಂದು ನಾನಾ ರೀತಿಯ ಉಪವಾಸ ವ್ರತಗಳ ಬಗ್ಗೆ ಕೇಳಿರುತ್ತೀರಿ. ಆದರೆ ಸಪ್ಪೆ ವ್ರತದ ಬಗ್ಗೆ ನಿಮಗೆ ಗೊತ್ತಾ?!
ಉಪವಾಸದಿಂದ ನಮ್ಮ ಜಠರದ ಆರೋಗ್ಯವೂ ಉತ್ತಮವಾಗುತ್ತದೆ ಎಂಬ ನಂಬಿಕೆಯಿದೆ. ಅದೇ ರೀತಿ ನಾವು ಮಾಡುವ ಊಟದಲ್ಲಿ ಕೆಲವೊಂದು ಪಥ್ಯ ಮಾಡುವುದರಿಂದ ನಮ್ಮ ಆರೋಗ್ಯ ಸುಧಾರಿಸುತ್ತದೆ.
ಚೈತ್ರ ಮಾಸದಲ್ಲಿ 15 ದಿನ ಸಪ್ಪೆ ವ್ರತ (ಉಪ್ಪಿಲ್ಲದ ಊಟ) ಮಾಡುವುದು ಆರೋಗ್ಯಕ್ಕೆ ಉತ್ತಮ. ಇದರಿಂದ ರಕ್ತ ಶುದ್ಧಿಯಾಗಿ, ಹೃದಯ, ಯಕೃತ್, ಮೂತ್ರಪಿಂಡ ಮತ್ತು ಚರ್ಮ ಇವುಗಳು ರೋಗದಿಂದ ಮುಕ್ತವಾಗುತ್ತದೆ. ಈ ವ್ರತವನ್ನು ಪ್ರತಿವರ್ಷ ಪಾಲಿಸುವ ವ್ಯಕ್ತಿಗಳ ಆರೋಗ್ಯವು ಇತರ ವ್ಯಕ್ತಿಗಳಿಂದ ಉತ್ತಮವಾಗಿರುವುದು ಅಧ್ಯಯನಗಳಿಂದಲೇ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ