Publish Date: Tue, 18 May 2021 (10:09 IST)
Updated Date: Tue, 18 May 2021 (10:16 IST)
ಹೈದರಾಬಾದ್: ತಾವು ದತ್ತು ಪಡೆದ ಬುರಿಪಾಲೆಂ ಮತ್ತು ಸಿದ್ಧಾಪುರಂ ಗ್ರಾಮಸ್ಥರಿಗೆ ನಟ ಮಹೇಶ್ ಬಾಬು ಉಚಿತವಾಗಿ ಕೊರೋನಾ ಲಸಿಕೆ ನೀಡಲು ಮುಂದಾಗಿದ್ದಾರೆ.
ತಮ್ಮ ಶ್ರೀಮಂತುಡು ಸಿನಿಮಾದಿಂದ ಪ್ರೇರಿತರಾಗಿ ಮಹೇಶ್ ಬಾಬು ಎರಡು ಗ್ರಾಮಗಳನ್ನು ದತ್ತು ಪಡೆದಿದ್ದರು. ಇದೀಗ ಅಲ್ಲಿನ ಗ್ರಾಮಸ್ಥರಿಗೆ ತಮ್ಮ ಸ್ವಂತ ಹಣದಿಂದ ಲಸಿಕೆ ಕೊಡಿಸಿದ್ದಾರೆ.
ಗ್ರಾಮದ ಅಧಿಕಾರಿಗಳೊಂದಿಗೆ ಮಾತನಾಡಿ ಏಕಕಾಲಕ್ಕೆ ಎಲ್ಲಾ ಜನರಿಗೂ ಲಸಿಕೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಮಹೇಶ್ ಬಾಬು ಈ ಹೃದಯವಂತಿಕೆಗೆ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.