Webdunia - Bharat's app for daily news and videos

Install App

ಮಕ್ಕಳಿಗೆ ವಿದ್ಯೆ ತಲೆಗೆ ಹತ್ತದಿರಲು ಯಾವ ದೋಷ ಕಾರಣ

Krishnaveni K
ಬುಧವಾರ, 18 ಸೆಪ್ಟಂಬರ್ 2024 (08:39 IST)
ಬೆಂಗಳೂರು: ಕೆಲವೊಮ್ಮೆ ಮಕ್ಕಳು ಎಷ್ಟೇ ಓದಿದರೂ ಅವರಿಗೆ ತಲೆಹತ್ತುವುದಿಲ್ಲ ಎಂಬ ಚಿಂತೆ ಪೋಷಕರನ್ನು ಕಾಡುತ್ತದೆ. ಇದಕ್ಕೆ ಜಾತಕದಲ್ಲಿರುವ ಯಾವ ದೋಷ ಕಾರಣವಿರಬಹುದು ಎಂದು ಇಲ್ಲಿ ನೋಡೋಣ.

ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸಬೇಕಾದರೆ ಕಠಿಣ ಪರಿಶ್ರಮದ ಜೊತೆಗೆ ದೈವಬಲವೂ ಬೇಕು. ಜಾತಕದಲ್ಲಿ ಐದನೇ ಮನೆಯನ್ನು ಶಿಕ್ಷಣದ ಮನೆ ಎಂದು ಪರಿಗಣಿಸಲಾಗುತ್ತದೆ. ನವಗ್ರಹಗಳ ಪೈಕಿ ಗುರು ಜ್ಞಾನದ ಅಂಶವಾದರೆ ಬುಧ ಬುದ್ಧಿವಂತಿಕೆಯ ಸಂಕೇತವಾಗಿದೆ. ಚಂದ್ರನು ಚಿತ್ತ ಚಾಂಚಲ್ಯ ಉಂಟು ಮಾಡುವವನು. ಹೀಗಾಗಿ ಈ ಮೂರೂ ಗ್ರಹಗಳು ಸರಿಯಾಗಿದ್ದರೆ ಮಾತ್ರ ಶಿಕ್ಷಣದಲ್ಲಿ ಪ್ರಗತಿ ಸಾಧ್ಯ.

ಅದೇ ರೀತಿ ಕಾಲಸರ್ಪದೋಷವಿದ್ದರೂ ಶಿಕ್ಷಣ ಅರ್ಧಕ್ಕೇ ಮೊಟಕುಗೊಳ್ಳುವ ಅಪಾಯವಿದೆ. ಚಂದ್ರನು ತನ್ನ ಮನೆಯಲ್ಲಿ ಕೂರದೇ ಇದ್ದಾಗ ಚಿತ್ತ ಚಾಂಚಲ್ಯವಾಗಿ ಶಿಕ್ಷಣದ ಕಡೆಗೆ ಗಮನ ಕೊಡಲು ಮನಸ್ಸಾಗದು. ಇದರಿಂದ ಶಾಲೆ ಮೊಟಕುಗೊಳಿಸುವ ಮನಸ್ಸು ಮಾಡುತ್ತಾರೆ.

ಇದಕ್ಕಾಗಿ ಕಾಲಸರ್ಪದೋಷವಿದ್ದರೆ ಅದನ್ನು ಪರಿಹರಿಸಿಕೊಂಡು ಬುಧವಾರಗಳಂದು ವಿದ್ಯಾಧಿಪತಿ ಗಣೇಶನ ಪೂಜೆ ಮಾಡುತ್ತಾ ಬಂದರೆ ಒಳ್ಳೆಯದು. ಅದೇ ರೀತಿ ಬುಧನು ದೋಷಪೂರಿತನಾಗಿದ್ದರೆ ಬುಧ ಗ್ರಹಶಾಂತಿ ಮಾಡಿಸಿದರೆ ಉತ್ತಮ. ಗುರು ದೋಷಗಳನ್ನು ಪರಿಹರಿಸಿಕೊಂಡರೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಾಣಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Subramanya Mantra: ಸುಬ್ರಹ್ಮಣ್ಯ ಸ್ವಾಮಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಪಾಂಡುರಂಗಾಷ್ಟಕಂ ಕನ್ನಡದಲ್ಲಿ ಇಲ್ಲಿದೆ

Sai Baba astakam: ಸಾಯಿಬಾಬ ಪ್ರಾರ್ಥನಾಷ್ಟಕಂ ಕನ್ನಡದಲ್ಲಿ ಇಲ್ಲಿದೆ ನೋಡಿ

Durga Mantra: ಮಂಗಳವಾರ ಈ ಸ್ತೋತ್ರ ಓದಿದರೆ ದುರ್ಗಾ ದೇವಿಯ ಅನುಗ್ರಹ ಸಿಗುತ್ತದೆ

Shiva Astakam: ಶಿವನ ಅನುಗ್ರಹಕ್ಕೆ ಪಾತ್ರರಾಗಲು ಶಿವಾಷ್ಟಕಂ ಓದಿ

ಮುಂದಿನ ಸುದ್ದಿ
Show comments