Webdunia - Bharat's app for daily news and videos

Install App

ಗುರು ಗ್ರಹ ದೋಷ ನಿವಾರಣೆಗೆ ಏನು ಮಾಡಬೇಕು

Krishnaveni K
ಗುರುವಾರ, 19 ಸೆಪ್ಟಂಬರ್ 2024 (08:43 IST)
ಬೆಂಗಳೂರು: ಗುರು ಗ್ರಹವನ್ನು ಮಾರ್ಗರ್ಶಕ ಎನ್ನುತ್ತೇವೆ. ಗುರುಗ್ರಹದ ಪ್ರಯೋಜನ ಪಡೆದರೆ ಜೀವನದಲ್ಲಿ ನಾವು ಅಂದುಕೊಂಡಿದ್ದೆಲ್ಲವೂ ನಮಗೆ ಸಿಗುತ್ತದೆ. ಒಂದು ವೇಳೆ ಜಾತಕದಲ್ಲಿ ಗುರು ದೋಷವಿದ್ದರೆ ಯಾವ ಪೂಜೆ ಮಾಡಬೇಕು ಇಲ್ಲಿ ನೋಡಿ.

ಜಾತಕದಲ್ಲಿ ಗುರು ದೋಷವಿದ್ದಾಗ ಜೀವನದಲ್ಲಿ ಹಲವಾರು ಸಮಸ್ಯೆಗಳು ಎದುರಾಗಬಹುದು. ವಿಶೇಷವಾಗಿ ಮದುವೆಯಾಗಲು ವಿಳಂಬವಾಗುವುದು, ಮಕ್ಕಳಾಗಲು ಸಮಸ್ಯೆ, ಹೆರಿಗೆಯಲ್ಲಿ ಸಮಸ್ಯೆ, ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಕಂಡುಬರುವ ಸಾಧ್ಯತೆಗಳಿವೆ.

ಜಾತಕದಲ್ಲಿ ಗುರು ದೋಷವಿದ್ದಾಗ ಅದನ್ನು ಪರಿಹರಿಸಲು ಕೆಲವೊಂದು ದಾರಿಗಳಿವೆ. ಗುರುವಿನ ಅನುಗ್ರಹ ಪಡೆಯಲು ಗುರುವಾರ ಮಹಾವಿಷ್ಣುವಿನ ಪೂಜೆ ಮಾಡುವುದು ಅಗತ್ಯ. ಅದೇ ರೀತಿ ಗುರುವಾರಗಳಂದು ಬ್ರಾಹ್ಮಣರಿಗೆ ಭೋಜನ ನೀಡಿ ಅವರ ಆಶೀರ್ವಾದ ಪಡೆದರೆ ಉತ್ತಮ.

ಗುರುವಾರ ದಿನ ಮಹಾವಿಷ್ಣುವಿನ ದೇವಸ್ಥಾನಕ್ಕೆ ಭೇಟಿ ನೀಡಿ ಕಡಲೆಬೇಳೆಯನ್ನು ದಾನ ಮಾಡುವುದು ಉತ್ತಮ. ಗುರು ದೋಷವನ್ನು ನಿವಾರಿಸಲು ‘ಓಂ ಭಗವತೇ ವಾಸುದೇವಾಯ’ ಎಂಬ ಮಂತ್ರವನ್ನು ಪಠಿಸುತ್ತಿರಿ. ಸೂರ್ಯೋದಯಕ್ಕೆ ಮುನ್ನ ಸ್ನಾನ ಮಾಡಿ ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದಲೂ ಗುರು ದೋಷ ನಿವಾರಿಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Subramanya Mantra: ಸುಬ್ರಹ್ಮಣ್ಯ ಸ್ವಾಮಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಪಾಂಡುರಂಗಾಷ್ಟಕಂ ಕನ್ನಡದಲ್ಲಿ ಇಲ್ಲಿದೆ

Sai Baba astakam: ಸಾಯಿಬಾಬ ಪ್ರಾರ್ಥನಾಷ್ಟಕಂ ಕನ್ನಡದಲ್ಲಿ ಇಲ್ಲಿದೆ ನೋಡಿ

Durga Mantra: ಮಂಗಳವಾರ ಈ ಸ್ತೋತ್ರ ಓದಿದರೆ ದುರ್ಗಾ ದೇವಿಯ ಅನುಗ್ರಹ ಸಿಗುತ್ತದೆ

Shiva Astakam: ಶಿವನ ಅನುಗ್ರಹಕ್ಕೆ ಪಾತ್ರರಾಗಲು ಶಿವಾಷ್ಟಕಂ ಓದಿ

ಮುಂದಿನ ಸುದ್ದಿ
Show comments