ಸಂಸತ್ ಮುಂಗಾರು ಅಧಿವೇಶನ

Webdunia
ಬುಧವಾರ, 14 ಜುಲೈ 2021 (11:50 IST)
ನವದೆಹಲಿ(ಜು.14):  ಸಂಸತ್ ಮುಂಗಾರು ಅಧಿವೇಶನ್ ಜುಲೈ 19 ರಿಂದ ಆರಂಭಗೊಳ್ಳಲಿದೆ. ಆಗಸ್ಟ್ 13ಕ್ಕೆ ಅಂತ್ಯಗೊಳ್ಳಲಿದೆ. ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರ 23 ಮಸೂದೆ ಮಂಡನೆಗೆ ಕೇಂದ್ರ ಮುಂದಾಗಿದೆ. 23 ಮಸೂದೆಗಳ ಪೈಕಿ 17 ಹೊಸ ಮಸೂದೆಗಳಾಗಿದ್ದು, ಎಲ್ಲರ ಕುತೂಹಲ ಕೆರಳಿಸಿದೆ.


ಜುಲೈ 19 ರಿಂದ ಆರಂಭಗೊಳ್ಳಲಿದೆ ಸಂಸತ್ ಮುಂಗಾರು ಅಧಿವೇಶನ!

 
•             ಈ ಬಾರಿ 23 ಮಸೂದೆ ಮಂಡನೆಗೆ ಸಕಲ ಸಿದ್ಧತೆ ಮಾಡಿಕೊಂಡ ಕೇಂದ್ರ
•             ಭಾರಿ ಚರ್ಚೆಯಾಗಲಿರುವ ಮಸೂದೆಗಳ ಮಂಡನೆಗೆ ಕೇಂದ್ರ ತಯಾರಿ
ಮೂರು ಮಸೂದೆಗಳು ದಿವಾಳಿತ ಸಂಹಿತೆ ತಿದ್ದುಪಡಿ, ಸೆನ್ಷಿಯಲ್ ಡಿಫೆನ್ಸ್ ಸರ್ವಿಸ್ ಬಿಲ್, ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿನ ವಾಯು ಗುಣಮಟ್ಟ ನಿರ್ವಹಣೆ ಮಸೂದೆಗಳು ಮಂಡನೆಯಾಗಲಿದೆ. ದಿವಾಳಿತನ ಸಂಹಿತೆ (ತಿದ್ದುಪಡಿ ಮಸೂದೆ)ಯಲ್ಲಿ  ಸಂಕಷ್ಟದಲ್ಲಿರುವ ಕಾರ್ಪೊರೇಟ್ ಸಾಲಗಾರರ ದಿವಾಳಿತನಕ್ಕೆ ತ್ವರಿತ ಪರಿಹಾರಕ್ಕೆ ಸಂಬಂಧಿಸಿದ ಮಹತ್ವದ ತಿದ್ದುಪಡಿಗಳನ್ನು ಮಾಡಲಾಗಿದೆ.
ವಾಯು ಗುಣಮಟ್ಟ ನಿರ್ವಹಣೆ ಮಸೂದೆ ಅಡಿಯಲ್ಲಿ, ಸಾರ್ವಜನಿಕ ಭಾಗವಹಿಸುವಿಕೆ, ಅಂತರರಾಜ್ಯ ಸಹಕಾರ ಮತ್ತು ತಜ್ಞರ ಒಳಗೊಳ್ಳುವಿಕೆ, ಸಂಶೋಧನೆ  ಮೂಲಕ ವಾಯು ಗುಣಮಟ್ಟ ನಿರ್ವಹಣೆಗೆ ಆಯೋಗವನ್ನು ರಚಿಸಲಾಗುವುದು. ಈ ಕ್ರಮಗಳೊಂದಿಗೆ ವಾಯುಮಾಲಿನ್ಯಕ್ಕೆ ಶಾಶ್ವತ ಪರಿಹಾರವನ್ನು ನೀಡಲು ಮಸೂದೆ ನೆರವಾಗಲಿದೆ.
ಇದರ ಜೊತೆಗೆ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ನಲ್ಲಿ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಲು ಕೇಂದ್ರ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಕೇಂದ್ರ ಮುಂದಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಿಂಗೆ ನೋವಾದ್ರೆ ನಂಗೂ ನೋವಾಗುತ್ತೆ... ಪಾಲಕಿಗೆ ಗಾಯವಾಗಿದ್ದಕ್ಕೆ ಆನೆ ಮಾಡಿದ ಕೆಲಸಕ್ಕೆ ನೆಟ್ಟಿಗರು ಫಿದಾ Viral

NEET ಪರೀಕ್ಷೆ 2026: ಸಿದ್ಧತೆ, ನಿಯಮಗಳು ಮತ್ತು ಪ್ರಮುಖ ವಿವರಗಳು ಇಲ್ಲಿದೆ

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಷ್ಕರಣೆ: ಮನೆಗೇ ಬಂದು ಅಧಿಕಾರಿಗಳು ಕೇಳುವ ಈ 10 ಪ್ರಶ್ನೆಗಳಿಗೆ ಸಿದ್ಧರಾಗಿ

Karnataka weather: ವಾರಂತ್ಯದಲ್ಲಿ ರಾಜ್ಯದಲ್ಲಿ ಮಳೆಯಿರಲಿದೆಯೇ, ಇಲ್ಲಿದೆ ವರದಿ

Video, 11 ಮಗನಿಗೆ ಕಾರು ಕೊಟ್ಟು ಕೇಸ್ ಹಾಕಿಸಿಕೊಂಡ ತಂದೆ

ಮುಂದಿನ ಸುದ್ದಿ
Show comments