Webdunia - Bharat's app for daily news and videos

Install App

ಟಾರ್ಚ್ ಹಿಡ್ಕೊಂಡು ದಟ್ಟ ಕಾಡಲ್ಲಿ ಚಾರು: ಸಿಕ್ಕಾಪಟ್ಟೆ ಟ್ರೋಲ್ ಆದ ರಾಮಚಾರಿ ಸೀರಿಯಲ್

Krishnaveni K
ಬುಧವಾರ, 27 ಮಾರ್ಚ್ 2024 (09:49 IST)
Photo Courtesy: Instagram
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಚಾರಿ ಧಾರವಾಹಿ ಈಗ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ. ಅದಕ್ಕೆ ಕಾರಣ ಇದೀಗ ನಡೆಯುತ್ತಿರುವ ಎಪಿಸೋಡ್ ನಲ್ಲಿ ನಾಯಕಿ ಮಾಡುತ್ತಿರುವ ‘ಸಾಹಸ’ಗಳು.

ಖ್ಯಾತ ನಿರ್ದೇಶಕ, ನಿರ್ಮಾಪಕ ರಾಮ್ ಜಿಯವರ ಧಾರವಾಹಿಯಲ್ಲಿ ಈಗ ಕಥಾನಾಯಕ ರಾಮಚಾರಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಆಶ್ರಮದಲ್ಲಿ ಗುರೂಜಿಯೊಬ್ಬರು ಆತನಿಗೆ ಚಿಕಿತ್ಸೆ ಮಾಡುತ್ತಿದ್ದಾರೆ. ಹಾಗಿದ್ದರೂ ಆತ ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ. ಆತನ ತರಬೇಕು ಎಂದು ಆದೇಶಿಸುತ್ತಾರೆ. ಆದರೆ ದಟ್ಟ ಕಾಡಿನಲ್ಲಿ, ಕಾಡು ಪ್ರಾಣಿಗಳಿರುವ ಕಡೆ ರಾತ್ರಿ ಸಂಚಾರ ಮಾಡಿ ಜ್ಯೋತಿ ತರುವುದು ಅಷ್ಟು ಸುಲಭವಲ್ಲ ಎನ್ನುತ್ತಾರೆ.

ಹಾಗಿದ್ದರೂ ಗಂಡನ ರಾಮಚಾರಿ ಪತ್ನಿ, ಕಥಾನಾಯಕಿ ಚಾರುಲತಾ ದಟ್ಟ ಕಾಡಿನಲ್ಲಿ ಟಾರ್ಚ್ ಹಿಡಿದುಕೊಂಡು ರಾತ್ರಿ ವೇಳೆ ಸಂಚಾರ ಆರಂಭಿಸುತ್ತಾಳೆ. ಚಾರು ಪಾತ್ರಧಾರಿಯ ಈ ಅವತಾರ ನೋಡಿ ನೆಟ್ಟಿಗರು ಈ ಹಿಂದೆ ಇದೇ ರಾಮ್ ಜಿ ನಿರ್ದೇಶನದಲ್ಲಿ ಮೂಡಿಬಂದ ಪುಟ್ಟಗೌರಿ ಧಾರವಾಹಿಯಲ್ಲಿ ಕಥಾನಾಯಕಿಯ ಇದೇ ರೀತಿಯ ಸಾಹಸಗಳನ್ನು ಮಾಡಿದ್ದನ್ನು ನೆನೆಸಿಕೊಂಡಿದ್ದಾರೆ.

ರಾಮ್ ಜಿ ಧಾರವಾಹಿಗಳೆಂದರೆ ಇಂತಹ ಹೈಪ್ ಗಳೆಲ್ಲಾ ಕಾಮನ್. ಸತ್ತವರು ಎದ್ದು ಬರೋದು, ಬದುಕಿದ್ದವರು ಸಾಯೋದು ಎಲ್ಲಾ ಕಾಮನ್. ಜೊತೆಗೆ ನಾಯಕಿ ಈಗ ದಟ್ಟಾರಣ್ಯದಲ್ಲಿ ಕಾಡು ಪ್ರಾಣಿಗಳ ಜೊತೆ ಹೋರಾಡುವ ದೃಶ್ಯವೂ ಇರಬಹುದು ಎಂದು ಟ್ರೋಲ್ ಮಾಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

Vickey kaushal Birthday: ಪತಿ ಜತೆಗಿನ ಮುದ್ದು ಫೋಟೋ ಶೇರ್ ಮಾಡಿ ವಿಶ್ ಮಾಡಿದ ಕತ್ರಿನಾ

ನಿಜವಾದ ಹೀರೋಗಳ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳು ಮಾತಾಡ್ತಿಲ್ಲ: ಪವನ್ ಕಲ್ಯಾಣ್ ಅಸಮಾಧಾನ

ಪ್ರೀತಿಸಿ ಮದುವೆಯಾದ ಗಾಯಕಿ ಪೃಥ್ವಿ- ಅಭಿಷೇಕ್‌ ಜೋಡಿಯ ಅದ್ಧೂರಿ ಆರತಕ್ಷತೆಗೆ ಸೆಲೆಬ್ರೆಟಿಗಳ ಸಾಥ್‌

ಮುಂದಿನ ಸುದ್ದಿ
Show comments