Webdunia - Bharat's app for daily news and videos

Install App

ಕೀರ್ತಿ ವಾಪಸ್ ಬಂದಾಯ್ತು, ಲಕ್ಷ್ಮೀ ಬಾರಮ್ಮಾ ಪ್ರೇಕ್ಷಕರು ಫುಲ್ ಖುಷಿ

Krishnaveni K
ಶುಕ್ರವಾರ, 8 ನವೆಂಬರ್ 2024 (16:02 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮಾ ಧಾರವಾಹಿಯಲ್ಲಿ ಕೀರ್ತಿ ಪಾತ್ರಧಾರಿ ತನ್ವಿ ರಾವ್ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಅವರನ್ನು ನೋಡಿ ಪ್ರೇಕ್ಷಕರು ಫುಲ್ ಖುಷಿಯಾಗಿದ್ದಾರೆ.

ಲಕ್ಷ್ಮೀ ಬಾರಮ್ಮಾ ಧಾರವಾಹಿಯಲ್ಲಿ ನಾಯಕನ ಮಾಜಿ ಪ್ರೇಯಸಿ ಕೀರ್ತಿ ಪಾತ್ರ ಮಾಡುತ್ತಿರುವ ತನ್ವಿ ರಾವ್  ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದರು. ಆದರೆ ಕೆಲವು ದಿನಗಳ ಹಿಂದಿನ ಎಪಿಸೋಡ್ ನಲ್ಲಿ ವಿಲನ್ ಕಾವೇರಿ ಕುತಂತ್ರಕ್ಕೆ ಬಲಿಯಾಗಿ ಕೀರ್ತಿ ಗುಡ್ಡದ ಮೇಲಿನಿಂದ ಪ್ರಪಾತಕ್ಕೆ ಬೀಳುತ್ತಾಳೆ. ಆಕೆ ಸತ್ತೇ ಹೋದಳು ಎಂದೇ ಬಿಂಬಿಸಲಾಗುತ್ತದೆ.

ಇದರಿಂದ ಕೀರ್ತಿ ಅಭಿಮಾನಿಗಳು ಭಾರೀ ಬೇಸರಗೊಂಡಿದ್ದರು. ಈ ಧಾರವಾಹಿಯಲ್ಲಿ ನಾಯಕಿಯನ್ನೂ ಮೀರಿಸುವ ಹಾಗೆ ತನ್ವೀ ನಟಿಸುತ್ತಿದ್ದಾರೆ. ಅವರೂ ಕೂಡಾ ಈ ಧಾರವಾಹಿಯಲ್ಲಿ ಒಂದು ರೀತಿಯ ನಾಯಕಿಯೇ. ಹೀಗಾಗಿ ಅವರನ್ನು ಸಾಯಿಸಬೇಡಿ, ವಾಪಸ್ ಕರೆಸಿ ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದರು.

ಇದೀಗ ಕೀರ್ತಿ ಪಾತ್ರಧಾರಿ ವಾಪಸ್ ಆಗಿದ್ದಾರೆ. ಸತ್ತೇ ಹೋಗಿದ್ದಾಳೆಂದು ಅಂದುಕೊಂಡಿದ್ದ ಕೀರ್ತಿ ಹಳೆಯ ಕಾರೊಂದರಲ್ಲಿ ಸಿಕ್ಕಿ ಹಾಕಿಕೊಂಡು ಅಳುತ್ತಿರುವ ದೃಶ್ಯವೊಂದು ಧಾರವಾಹಿಯಲ್ಲಿ ಬಂದಿದೆ. ಇದನ್ನು ನೋಡಿ ಕೀರ್ತಿ ವಾಪಸ್ ಬಂದಳು ಎಂದು ಅಭಿಮಾನಿಗಳು ಖುಷಿ ವ್ಯಕ್ತಪಡಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Darshan Thoogudeepa video: ಪತ್ನಿಯನ್ನು ತಬ್ಬಿಕೊಂಡು ಮುದ್ದು ರಾಕ್ಷಸಿ ಎಂದು ದರ್ಶನ್ ಡ್ಯಾನ್ಸ್ ಮಾಡಿದ್ದೇ ಮಾಡಿದ್ದು

Darshan: ವಿವಾಹ ವಾರ್ಷಿಕೋತ್ಸವಕ್ಕೆ ದರ್ಶನ್ ಜೊತೆಗಿರುವ ಫೋಟೋ ಹಾಕಿ ಸಖತ್ ಟಾಂಗ್ ಕೊಟ್ಟ ವಿಜಯಲಕ್ಷ್ಮಿ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

Vickey kaushal Birthday: ಪತಿ ಜತೆಗಿನ ಮುದ್ದು ಫೋಟೋ ಶೇರ್ ಮಾಡಿ ವಿಶ್ ಮಾಡಿದ ಕತ್ರಿನಾ

ಮುಂದಿನ ಸುದ್ದಿ
Show comments