Select Your Language

Notifications

webdunia
webdunia
webdunia
webdunia

ತಾಯಿಯನ್ನೇ ಹತ್ಯೆಗೈದು, ದೇಹವನ್ನ ತುಂಡರಿಸಿ ಗೋಣಿ ಚೀಲದಲ್ಲಿ ಎಸೆದ ಪಾಪಿ!

ತಾಯಿಯನ್ನೇ ಹತ್ಯೆಗೈದು, ದೇಹವನ್ನ ತುಂಡರಿಸಿ ಗೋಣಿ ಚೀಲದಲ್ಲಿ ಎಸೆದ ಪಾಪಿ!
ಮುಂಬೈ , ಬುಧವಾರ, 7 ಸೆಪ್ಟಂಬರ್ 2022 (13:46 IST)
ಮುಂಬೈ : ವೃದ್ಧೆಯನ್ನು ಆಕೆಯ ಮಗ ಹಾಗೂ ಮೊಮ್ಮಗ ಕೊಲೆ ಮಾಡಿ ಆಕೆಯ ದೇಹದ ಭಾಗಗಳನ್ನು ತುಂಡರಿಸಿ ಗೋಣಿ ಚೀಲದಲ್ಲಿ ತುಂಬಿ ನದಿಗೆ ಎಸೆದ ಭೀಕರ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಉಷಾ ಗಾಯಕ್ವಾಡ್(62)ನ್ನು ಆಕೆಯ ಪುತ್ರ ಹಾಗೂ ಮೊಮ್ಮಗನಿಗೆ ತನ್ನ ಮನೆಯಿಂದ ಹೊರಹೋಗುವಂತೆ ತಿಳಿಸಿದ್ದಳು. ಇದರಿಂದ ಕೋಪಗೊಂಡ ಆಕೆಯ ಪುತ್ರ ಸಂದೀಪ್ ಹಾಗೂ ಮೊಮ್ಮಗ ಸಾಹಿಲ್ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಇದಾದ ಬಳಿಕ ಮಧ್ವಾ ಪೊಲೀಸ್ ಠಾಣೆಗೆ ಸಾಹಿಲ್ ಹಾಗೂ ಸಂದೀಪ್ ಹೋಗಿ ಉಷಾ ಗಾಯಕ್ವಾಡ್ ಕಾಣೆ ಆಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಉಷಾಳ ಮಗಳು ಶೀತಲ್ ಕಾಂಬ್ಳೆ ದೂರು ದಾಖಲಿಸಿದ್ದು, ಉಷಾ ಗಾಯಕ್ವಾಡ್ ನಾಪತ್ತೆ ಆಗಿರುವುದರ ಹಿಂದೆ ಸಂದೀಪ್ ಹಾಗೂ ಸಾಹಿಲ್ ಪಾತ್ರವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಪೊಲೀಸರು ಸಂದೀಪ್ ಹಾಗೂ ಸಾಹಿಲ್ನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಉಷಾ ಮನೆ, ಚಿನ್ನಾಭರಣ ಸೇರಿ ಅಪಾರ ಆಸ್ತಿ ಹೊಂದಿದ್ದರು. ಆದರೆ ಆಕೆ ತಮ್ಮ ಮನೆಯಿಂದ ಹೊರಹೊಗುವಂತೆ ಸಂದೀಪ್, ಸಾಹಿಲ್ಗೆ ಹೇಳಿದ್ದರಿಂದ ಕೋಪಗೊಂಡಿದ್ದಾರೆ. ಇದಾದ ಬಳಿಕ ಸಾಹಿಲ್ ಉಷಾಳ ಕತ್ತನ್ನು ಹಿಸುಕಿ ಕೊಂದಿದ್ದಾನೆ. 


Share this Story:

Follow Webdunia kannada

ಮುಂದಿನ ಸುದ್ದಿ

ಮಣಿಪಾಲ್ ಸಂಸ್ಥೆಗಳ ಮೇಲೆ ಐಟಿ ದಾಳಿ!