Webdunia - Bharat's app for daily news and videos

Install App

ಮ್ಯಾಟಿಮೋನಿ ಆ್ಯಪ್‌ನಲ್ಲಿ ಪ್ರೀತಿ ನಾಟಕವಾಡಿ 20ಕ್ಕೂ ಅಧಿಕ ಯುವತಿಯರಿಗೆ ವಂಚಿಸಿದವ ಅರೆಸ್ಟ್‌

Sampriya
ಬುಧವಾರ, 25 ಸೆಪ್ಟಂಬರ್ 2024 (16:34 IST)
ನವದೆಹಲಿ: ಮ್ಯಾಟ್ರಿಮೋನಿ ಆ್ಯಪ್ ಮೂಲಕ ಯುವತಿಯರನ್ನು ತನ್ನ ಪ್ರೀತಿಯ ಬಲೆಯಲ್ಲಿ ಬೀಳಿಸಿ, ಅವರಿಂದ ದುಬಾರಿ ವಸ್ತುಗಳನ್ನು ಸುಲಿಗೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಕೊಲೆಗೂ ಪೊಲೀಸರು ಬಂಧಿಸಿದ್ದಾರೆ.

ಈತ ಸುಮಾರು 20ಕ್ಕೂ ಅಧಿಕ ಯುವತಿಯರೊಂದಿಗೆ ಪ್ರೀತಿ ನಾಟಕವಾಡಿ, ಅವರಿಗೆ ಮೋಸ ಮಾಡಿದ್ದಾನೆ. ಬಿಸ್ರಖ್ ಪೊಲೀಸರು ಆರೋಪಿ ರಾಹುಲ್ ಚತುರ್ವೇದಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ಈತ ಬೇರೆ ಬೇರೆ ಹೆಸರುಗಳಲ್ಲಿ ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿ ತನ್ನ ಫೇಕ್ ಪ್ರೋಪೈಲ್ ಕ್ರಿಯೇಟ್ ಮಾಡಿ ಯುವತಿಯರ ಜತೆ ಪ್ರೀತಿ ನಾಟಕವಾಡಿ ಅವರಿಗೆ ಮೋಸ ಮಾಡಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜೈಲಿಗೆ ಕಳುಹಿಸಲಾಗಿದೆ.

ಆರೋಪಿ ರಾಹುಲ್ ಚತುರ್ವೇದಿ ಜೀವನಸತಿ ಡಾಟ್ ಕಾಮ್ ಮತ್ತು ಬೆಟರ್ ಹಾಫ್ ನಲ್ಲಿ ಪ್ರೊಫೈಲ್ ಅನ್ನು ಸ್ಥಾಪಿಸಿ, ವಿಪ್ರೋದಲ್ಲಿ ಮಾನವ ಸಂಪನ್ಮೂಲ ಪ್ರಾದೇಶಿಕ ವ್ಯವಸ್ಥಾಪಕ ಎಂದು ಫೇಕ್ ಐಡಿ ನೀಡಿರುವುದು ತಿಳಿದುಬಂದಿದೆ.

ಯುವತಿಯರಿಂದ ಐ ಫೋನ್ , ಬೆಲೆ ಬಾಳುವ ಮೊಬೈಲ್ ಫೋನ್ , ಹಣ ಮುಂತಾದ ದುಬಾರಿ ವಸ್ತುಗಳನ್ನು ಲಪಟಾಯಿಸಿದ್ದಾನೆ. ಚತುರ್ವೇದಿ ತನಗೆ 2 ಲಕ್ಷ ರೂಪಾಯಿ ನಗದು ವಂಚಿಸಿ ತನ್ನ ಐಫೋನ್ ತೆಗೆದುಕೊಂಡಿದ್ದಾನೆ ಎಂದು ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಬಿಸ್ರಖ್ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಆತನ ವಿರುದ್ಧ ಬೀಟಾ ಟೂ ಪೊಲೀಸ್ ಠಾಣೆಯಲ್ಲಿ ಹೆಚ್ಚುವರಿ ದೂರು ದಾಖಲಾಗಿದೆ.

ವಿಚಾರಣೆ ವೇಳೆ ಚತುರ್ವೇದಿ ತನ್ನ ವಂಚನೆಯಲ್ಲಿ 20 ಮಹಿಳೆಯರನ್ನು ಸಿಕ್ಕಿಬಿದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ತನ್ನ ನಕಲಿ ಗುರುತನ್ನು ರುಜುವಾತುಪಡಿಸಲು, ಅವನು ವಿಪ್ರೊದಲ್ಲಿ ಸಿಗುತ್ತಿರುವ ಹಾಗೇ ನಕಲಿ ಸಂಬಳದ ಸ್ಲಿಪ್‌ ಅನ್ನು ದಾಖಲಿಸಿದ್ದಾನೆ. ಅದಲ್ಲದೆ ಈ ವೇಳೆ ಯುವತಿಯರಿಗೆ ವಿದೇಶಿ ಪ್ರವಾಸದ ಆಮಿಷವೊಡ್ಡಿದ್ದಾನೆ.

ಇತರ ಪ್ರಕರಣಗಳಲ್ಲಿ ಒಬ್ಬ ಯುವತಿಯಿಂದ ಎರಡು ಫೋನ್‌ಗಳನ್ನು, ಇನ್ನೊಬ್ಬಳಿಂದ 2 ಲಕ್ಷ ರೂಪಾಯಿ ಹಣವನ್ನು ಪಡೆದಿರುವುದಾಗಿ ಹಾಗೂ ಮೂರನೇ ಮಹಿಳೆಯಿಂದ ದುಬಾರಿ ವೆಚ್ಚದ ಶೂಗಳನ್ನು ಪಡೆದಿರುವುದಾಗಿ ಬಾಯಿಬಿಟ್ಟಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಇದೊಂದು ಹಾಸ್ಯಾಸ್ಪದ ಕಾರ್ಯಕ್ರಮ: ಸಾಧನಾ ಸಮಾವೇಶಕ್ಕೆ ಆರ್‌ ಅಶೋಕ್ ಆಕ್ರೋಶ

ಸಾಧನಾ ಸಮಾವೇಶದಲ್ಲಿ ಸಿಎಂ ಈ ಪ್ರಶ್ನೆಗೆಲ್ಲ ಉತ್ತರಿಸಬೇಕು: ಎಚ್‌ ವಿಶ್ವನಾಥ್‌

DK Shivakumar: ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ವರಸೆಯೇ ಬದಲಿಸಿದ ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments